ಕಣ್ಮನ ರಂಜಿಸಿದ ಕೃಷ್ಣಲೀಲೆ   – ಕಂಸವಧೆ


Team Udayavani, Oct 26, 2018, 1:00 PM IST

kansa-lile-1.jpg

ಯಕ್ಷ ಕಲಾಭಿಮಾನಿ ಬಳಗ ಟೌನ್‌ ಹಾಲ್‌ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಂಡ “ಕೃಷ್ಣಲೀಲೆ-ಕಂಸವಧೆ’ ಅಖ್ಯಾನ ಜನ ಮನ ರಂಜಿಸಿತು.

ಕೃಷ್ಣಲೀಲೆ ಪ್ರಸಂಗ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರ ಕಂಠಸಿರಿಯಲ್ಲಿ ಉತ್ತಮವಾಗಿ ಪ್ರದರ್ಶನಗೊಂಡಿತು. ಬಾಲಕೃಷ್ಣನಾಗಿ ಬಾಲ ಪ್ರತಿಭೆ ಸ್ವಸ್ತಿಶ್ರೀಯವರ ಅಭಿನಯ ಉತ್ತಮವಾಗಿತ್ತು. ಯಶೋಧ ಪಾತ್ರಕ್ಕೆ ಜೀವ ತುಂಬಿದವರು ಅರಳು ಪ್ರತಿಭೆ ಸುಧೀರ್‌ ಉಪ್ಪೂರ. ಮಾಯಾ ಪೂತನಿಯಾಗಿ ನಿಲ್ಕೋಡುರವರ ಭಾವಾಭಿನಯ ಮನಸಿನಲ್ಲಿ ಉಳಿಯುವಂತಿತ್ತು. ಮುಂದೆ ಕೃಷ್ಣನ ಪಾತ್ರ ಮಾಡಿದವರು ಕಡಬಾಳ ಉದಯ ಹೆಗಡೆಯವರ ನಾಟ್ಯಾಭಿನಯ ಮನಸೂರೆಗೊಂಡಿತ್ತು. ವಿಜಯನ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್‌ ಹಾಸ್ಯದ ಹೊನಲನ್ನು ಹರಿಸಿದರು.

ಗೋಪಿಕಾ ಸ್ತ್ರೀಯರಾಗಿ ನಿಲ್ಕೋಡು ಬೀಜಮಕ್ಕಿ ಇವರ ನಾಟ್ಯ- ಮಾತು ಹಿತಮಿತವಾಗಿತ್ತು. ಶಕಟಾ ಧೇನುಕರ ಪಾತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತು. ನಂತರ ಪ್ರದರ್ಶಗೊಂಡ ಕಂಸವಧೆ ಪ್ರಸಂಗವು ಅದ್ಭುತವಾಗಿ ಮೂಡಿ ಬಂತು. ಜನ್ಸಾಲೆ ಭಾಗವತರ ಏರು ಶೃತಿಯಲ್ಲಿ ಹಾಡಲ್ಪಟ್ಟ ಪದ್ಯಗಳು ಮಂತ್ರ ಮುಗ್ಧಗೊಳಿಸಿತು. ಕಂಸನಾಗಿ ಮೆರೆದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನಾಟ್ಯ ಹಾಗೂ ಮಾತುಗಾರಿಕೆ ಅದ್ಭುತವಾಗಿತ್ತು. ಏನ ಮಾಡಲೀ ನಾನು… ನೆತ್ತಿಗೆ ತೈಲವ ಒತ್ತುತ್ತಾ… ಉರಿಯುವುದೊಂದೇ ದೀಪವು… ಮುಂತಾದ ಪದ್ಯಗಳಿಗೆ ಅವರ ಭಾವಾಭಿನಯ ವರ್ಣಿಸಲಸದಳ. 

ಕಂಸನು ಅಂತ್ಯಕಾಲದಲ್ಲಿ ಕಾಣುವ ದುಃಸ್ವಪ್ನ, ದುಗುಡ, ಭಯವನ್ನು ಅದ್ಭುತ ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿದರು. ಕೃಷ್ಣನಾಗಿ ನಾಟ್ಯಚತುರ ತೀರ್ಥಹಳ್ಳಿ ಗೋಪಾಲಾಚಾರ್ಯರ ಪಾದರಸದಂತ ಚುರುಕಿನ ಪಾದಚಲನೆಯ ನಾಟ್ಯಾಭಿನಯ ಪರಿಪೂರ್ಣವಾಗಿತ್ತು. ಬಲರಾಮನಾಗಿ ಯುವ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯರ ನಾಟ್ಯಾಭಿನಯ ಮೋಹಕವಾಗಿತ್ತು. ರಾಜ ರಜಕನಾಗಿ ಕಾಸರಕೋಡು ಶ್ರೀಧರ ಭಟ್‌ ಮೊನಚಾದ
ಮಾತುಗಳಿಂದ ರಂಜಿಸಿದರು. ಚೆಂಡೆ ಮದ್ದಳೆಯಲ್ಲಿ ಸಹಕರಿಸಿದವರು ಸುನಿಲ್‌ ಭಂಡಾರಿ ಕಡತೋಕ, ಮತ್ತು ಶಿವಾನಂದ ಕೋಟ. 

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.