ಹೃನ್ಮನ ತಣಿಸಿದ ನೃತ್ಯ ಸಮಾರಾಧನೆ


Team Udayavani, Nov 2, 2018, 6:00 AM IST

s-4.jpg

ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿ ಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’.  ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ.  ಒಂದು ಮುದ್ರೆ  ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ.

ಯಕ್ಷಗಾನದ ಆಡುಂಬೊಲವಾದ ಕರಾವಳಿಯಲ್ಲಿಂದು ನೃತ್ಯವೂ ಜನಪ್ರಿಯವಾಗಿ ಕಲಾರಸಿಕರ ಹೃನ್ಮನವನ್ನು ತಣಿಸುತ್ತಿದೆ. “ಪ್ರಾಯೇಣ ಸರ್ವಲೋಕಸ್ಯ ನೃತ್ಯಮಿಷ್ಟಂ ಸ್ವಭಾವತಃ ಪ್ರಾಯಃ’. ನೃತ್ಯವು ಸ್ವಭಾವತಃ ಎಲ್ಲರಿಗೂ ಇಷ್ಟವಾದುದೆಂದು ನಾಟ್ಯ ಶಾಸ್ತ್ರ ಹೇಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

“ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’. ಇಲ್ಲಿ ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ. ಒಂದು ಮುದ್ರೆ ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ. ಹೀಗಾಗಿ ನೃತ್ಯ ರಸಾಸ್ವಾದನೆಗೆ ಭಾಷೆ ತೊಡಕಾಗವುದಿಲ್ಲ. ಕವಿ ಕುಲಗುರು ಕಾಳಿದಾಸ “ನಾಟ್ಯಂ ಭಿನ್ನರುಚೇರ್ಜನಶ್ಯ ಬಹುಧಾಪೆಕ‌ಂ ಸಮಾರಾಧನಮ್‌’. ನಾಟ್ಯವೂ ಭಿನ್ನರುಚಿಯ ಎಲ್ಲರಿಗೂ ಸಮಾರಾಧನವೇ ಸರಿ ಎಂದಿದ್ದಾನೆ. 

ನಟನೋ, ನಟನಿಗೋ ಅಭಿಜಾತ ದೇಹ ಸೌಂದರ್ಯವಿದ್ದಲ್ಲಿ, ಶಿಲ್ಪ ಸಾದೃಶವಾದ ಅಂಗಾಂಗಳಿದ್ದಲ್ಲಿ, ಭಾವವ್ಯಂಜಕವಾದ ನಯನಗಳಿದ್ದಲ್ಲಿ, ದೇಹ ಪ್ರಮಾಣ ಸಮ ಪ್ರಮಾಣವಿದ್ದಲ್ಲಿ ನೃತ್ಯವು ಮಾಡುವ ಪರಿಣಾಮವೇ ಬೇರೆ. ಇದರೊಂದಿಗೆ ಸಂಗೀತ, ಸಾಹಿತ್ಯ ಶಕ್ತಿಗಳ ಪರಿಜ್ಞಾನ, ಸ್ವಯಂ ಕಲ್ಪನೆ-ಸ್ಪಷ್ಟಿಶೀಲ ಗುಣವಿದ್ದಲ್ಲಿ ನೃತ್ಯ ಉಂಟುಮಾಡುವ ಪರಿಣಾಮ ಅನನ್ಯವೆನಿಸುತ್ತದೆ; ಬಹುಶ್ರುತವಾಗುತ್ತದೆ ಎಂಬುದಕ್ಕೆ ಶರನ್ನವರಾತ್ರಿಯ ಕಾಲದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಸಂಪನ್ನಗೊಂಡ ನೃತ್ಯವಿದುಷಿ ಡಾ| ರಶ್ಮಿ ಗುರುಮೂರ್ತಿಯವರ ನೃತ್ಯ ಸಾಕ್ಷಿಯಾಗಿತ್ತು. ಸಾಂಪ್ರದಾಯಿಕ ಪುಷ್ಪಾಂಜಲಿ (ರಾಗ ಮಾಲಿಕೆ, ತಾಳಮಾಲಿಕೆೆ)ಯೊಂದಿಗೆ ಪ್ರತಿಭೆಯನ್ನು ತೋರಿದರು. ಕಾಲೈತೂಕಿ (ನಟರಾಜನ ಕಾಲ್ಗೆಜ್ಜೆಗಳು ನಲಿಯುತ್ತಿವೆ) ತಮಿಳು ಸಾಹಿತ್ಯದ, ಭಾಗೇಶ್ರೀ ರಾಗ, ರೂಪಕ ತಾಳದಲ್ಲಿ ಮನೋಜ್ಞವಾಗಿ ಮೂಡಿ ಬಂತು. ವಿಶೇಷವೆಂದರೆ ಇಲ್ಲಿ ನಟರಾಜನೆ ಕಾಲ್ಗೆಜ್ಜೆಗಳು ಕುಣಿಯುವುದು, ಇದನ್ನು ತೋರುವಲ್ಲಿನ ನಟಿಯ ಸೂಕ್ಷ್ಮಾವಲೋಕನ ಗತಿಪ್ರಜ್ಞೆ ಮೆಚ್ಚುವಂತಿತ್ತು. ದೇವೀ ಅಕ್ಷರಂ (ರಾಗಮಾಲಿಕೆ, ತಾಳಮಾಲಿಕೆ) ಡಾ| ರಶ್ಮಿ ಗುರುಮೂರ್ತಿಯವರ ವಿಶಿಷ್ಟ ಸಂಯೋಜನೆ. ಶ್ರೀ ದುರ್ಗಾ ಸಪ್ತಶತಿಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ “ನವರಾಕ್ಷಸರು’ ಮಧು-ಕೈಟಭಾದಿ ರಕ್ತಬೀಜಾಸುರರ ವಧೆಯವರೆಗಿನ ಮುಖ್ಯಾಂಶಗಳನ್ನು ತೋರುವಲ್ಲಿ ಕಲಾವಿದೆ ಗಮನಸೆಳೆದರು. ನಾನೇನು ಮಾಡಿದೆನೋ (ರಾಗಮಾಲಿಕೆ, ಆದಿತಾಳ) ಪುರಂದರದಾಸರ ಪ್ರಸಿದ್ಧವಾದ ಕೃತಿ-ಸ್ವಯಂ ಕೃಷ್ಣಭಕ್ತೆಯಾಗಿ, ಕೃಷ್ಣನ ಕುರಿತು ಅನೇಕ ಭಾವಗೀತೆಗಳನ್ನು ಬರೆದ ಕವಯತ್ರಿ-ನರ್ತಕಿ ಹೃನ್ಮನ ತಣಿಯುವ ಅಭಿನಯ ತೋರಿದರು. ಸಂಚಾರೀ ಭಾವದಲ್ಲಿ ಕೃಷ್ಣ-ಕುಚೇಲರ ಸ್ನೇಹ ಸಾಹಿತ್ಯ ಪರಿಣಾಮಕಾರಿಯಾಗಿತ್ತು. ಡಾ|ರಶ್ಮಿ ಆಸಕ್ತಿಯಿಂದ ಗುರುಮುಖೇನ ಕೂಚಿಪುಡಿ ಕಲಿತವರು. ಹೀಗಾಗಿ, ಅನ್ನಮಾಚಾರ್ಯರ ಕೃತಿ ಮುದ್ದುಗಾರೆ ಯಶೋಧಾ (ಕುರಂಜಿ-ಆದಿತಾಳ)ವನ್ನು ಕಲಾಸಕ್ತರಿಗೆ ತೋರಿ ಕೊಡುವಲ್ಲಿ ಪೂರ್ಣ ಯಶಸ್ವಿಯಾದರು. 

ನೃತ್ಯದ ಹಿಮ್ಮೇಳ ಸಾಥಿಗಳಾಗಿ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಗುರು ಉಡುಪಿ ವೀಣಾ ಮುರುಳೀಧರ ಸಾಮಗ , ಸಂಗೀತ ಮತ್ತು ನಟುವಾಂಗದಲ್ಲಿ ತನ್ನ ಶಿಷ್ಯೆಯ ಪ್ರತಿಭಾ ದರ್ಶನಕ್ಕೆ ಬೆಂಬಲವಾಗಿ ಸೈಯೆನಿಸಿಕೊಂಡರು. ವಿ| ರಾಮಚಂದ್ರ ಪಾಂಗಣ್ಣಾಯ ಮೃದಂಗವಾದನ ನೃತ್ಯಕ್ಕೆ ಪೋಷಕವೂ ಆಗಿತ್ತು. ವಯೋಲಿನ್‌ ವಾದಕರಾಗಿ ಮಾ| ವೈಭವ್‌ ಪೈ, ಮಣಿಪಾಲ ಅವರು ಸಾಂಗತ್ಯ ನೀಡಿದರು. 

ಅಂಬಾತನಯ ಮುದ್ರಾಡಿ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.