ಶ್ರೀಧರ ಗಾಣಿಗರಿಗೆ ರಾಮ ಗಾಣಿಗ ಪ್ರಶಸ್ತಿ
Team Udayavani, Nov 9, 2018, 6:00 AM IST
ಮೈಮನ ತುಂಬಿದ ವೇಷಗಾರಿಕೆ, ಸೊಬಗು, ಸೊಗಸು ತೋರುವ ಹೆಜ್ಜೆಗಾರಿಕೆ ಬೆಡಗು ಬಿನ್ನಾಣದ ಒನಪು ವೈಯಾರಗಳ ಮೈಗೂಡುವಿಕೆಯಿಂದ ಪಾತ್ರದ ಪರಕಾಯ ಪ್ರವೇಶ ಮಾಡಿ ಯಕ್ಷ ಪ್ರೇಮಿಗಳ ಮನಸೂರೆಗೊಂಡ ಕಲಾವಿದರೇ ಉಪ್ಪುಂದ ಶ್ರೀಧರ ಗಾಣಿಗರು.
ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಹೆರಂಜಾಲು ಸುಬ್ಬಣ್ಣ ಗಾಣಿಗರಿಂದ ತಾಳ, ಹೆಜ್ಜೆ ಪಾತ್ರಗಳ ಪರಿಚಯ ಹಾಗೂ ಯಕ್ಷಗಾನದ ವಿವಿಧ ಮಜಲುಗಳನ್ನು ಅಭ್ಯಸಿಸಿ 15ರ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿ ಶ್ರದ್ಧೆಯಿಂದ ರಂಗದ ಕಸುಬನ್ನು ಕರಗತ ಮಾಡಿಕೊಂಡರು. ಸೌಕೂರು, ಮಾರಣಕಟ್ಟೆ, ಕಮಲಶಿಲೆ, ಕೋಟ ಅಮೃತೇಶ್ವರಿ ಮೇಳ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಮನಸೂರೆಗೊಂಡಿದ್ದಾರೆ. ಸುಭದ್ರೆ, ಮೀನಾಕ್ಷಿ, ದ್ರೌಪದಿ, ಭ್ರಮರಕುಂತಳೆ, ಯೋಜನಾಗಂಧಿ, ಶ್ರೀದೇವಿ ಮಹಾತ್ಮೆಯ ಶ್ರೀದೇವಿ ಪಾತ್ರ ಸಾಕಷ್ಟು ಪ್ರಚಾರ ನೀಡಿವೆ. ಶ್ರೀಧರ ಗಾಣಿಗರಿಗೆ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ. ಮೂಡುಕೇರಿ ಬಾರಕೂರು ಇವರು ನವೆಂಬರ್ 30ರಂದು ನಡೆಯುವ ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಸುವರ್ಣ ಮಹೋತ್ಸವ ಯಕ್ಷ ನಿಧಿಯಿಂದ ಕೊಡಮಾಡುವ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ರಘುರಾಮ ಬೈಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ