ಹಿತಮಿತವಾಗಿ ನಡೆದ ಕೀಚಕವಧೆ 


Team Udayavani, Nov 9, 2018, 6:00 AM IST

10.jpg

ಸಮಯ ಮಿತಿಯೊಳಗೆ ಸಂಕಲಿಸಿದ ಯಕ್ಷಗಾನ ಪ್ರದರ್ಶನವೊಂದು ಸಹೃದಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಕೀಚಕವಧೆ ಸಾಕ್ಷಿಯಾಯಿತು. ಸ್ವತಃ ಕಲಾವಿದರಾದ ಸುಜಯೀಂದ್ರ ಹಂದೆಯವರು ಕೇಂದ್ರ ಸಂಸ್ಕೃತಿ ಇಲಾಖೆಯ ಅನುದಾನದ ನೆರವಿನೊಂದಿಗೆ ಭೀಮ ಭಾರತದ ಸರಣಿ ಪ್ರದರ್ಶನವಾಗಿ ಅತಿಥಿ ಕಲಾವಿದರಿಂದ ವಿರಾಟ ಪರ್ವದ ಕೀಚಕ ವಧೆಯನ್ನು ಸಂಯೋಜಿಸಿದ್ದರು. 

ಆರಂಭದಲ್ಲಿ ಪೂರ್ವರಂಗದ ಭಾಗವಾಗಿ ಚುಟುಕಾಗಿ ಪ್ರಸ್ತುತಪಡಿಸಿದ ಕುಮಾರ ಅಭಿನವ ತುಂಗರ ಪೀಠಿಕಾ ಸ್ತ್ರೀವೇಷ ರಂಗವನ್ನು ಕಟ್ಟಿಕೊಟ್ಟಿತು. ನವೀನ್‌ ಕೋಟ ಅವರ ವಿರಾಟರಾಜನ ಒಡ್ಡೋಲಗದಿಂದ ಪ್ರಸಂಗ ಆರಂಭವಾಯಿತು. ಅಜ್ಞಾತವಾಸಕ್ಕಾಗಿ ವೇಷ ಮರೆಸಿ ಬಂದ ಪಾಂಡವರಿಗೆ ಆಶ್ರಯ ನೀಡಿದ ಕಥಾಭಾಗ ಒಡ್ಡೋಲಗದ ಪೀಠಿಕಾ ಮಾತುಗಳಲ್ಲಿ ಹೊರಹೊಮ್ಮಿತು. ಶಮಂತ್‌ ಕೆ.ಎಸ್‌.ಕೋಟ ಅವರ ಸುಧೇಷ್ಣೆಯು ಸೈರೆಂದ್ರಿಯನ್ನು ಬರಮಾಡಿಕೊಳ್ಳುವ ಭಾಗದಲ್ಲಿ ರಸವತ್ತಾಗಿ ಮೂಡಿಬಂತು. 

ಅಶ್ವಿ‌ನಿ ಕೊಂಡದಕುಳಿಯವರ ಕೀಚಕ ಅಂದಿನ ಪ್ರಧಾನ ಆಕರ್ಷಣೆಯಾಗಿತ್ತು. ಒಂದು ದಿನ ಸೊಬಗಿಂದ… ಪದ್ಯಕ್ಕೆ ಕೀಚಕನ ಅಭಿವ್ಯಕ್ತಿ ಮೆಚ್ಚುವಂತಹದು. ಮೇಲಿಂದ ಮೇಲೆ ಬಿಡುವಿಲ್ಲದೆ ರಂಗಕ್ರಿಯೆಗೆ ಒಳಗಾಗಿಸುವ ಕೀಚಕನ ಪಾತ್ರ ಸುಲಭ ಸಾಧ್ಯವಾದುದಲ್ಲ. ಹೆಣ್ತನದ ಸಹಜ ಸ್ವರ ಮಾಧುರ್ಯ ಮತ್ತು ಆಂಗಿಕ ಕೋಮಲತೆಯನ್ನು ಮೀರಿ ಅಂದಿನ ಕೀಚಕ ಎಲ್ಲರ ಮನಸೂರೆಗೊಂಡಿತು. ಸುಂದರ ಕೆಂಪು ಮುಂಡಾಸಿನ ವೇಷ, ಹಿತಮಿತವಾದ ವಿಕಾರವಿಲ್ಲದ ಕುಣಿತ, ಚುಟುಕಾದ ಮಾತು ಕೀಚಕನ ಪಾತ್ರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು.

ವಿಜಯ ಗಾಣಿಗ ಬೀಜಮಕ್ಕಿಯವರ ಸೈರಂದ್ರಿ ಮೋಹಕವಾಗಿತ್ತು. ರಂಗದಲ್ಲಿ ಆಗಾಗ ತನ್ನ ಅಭಿವ್ಯಕ್ತಿಯಲ್ಲಿ ಹಿಂದೆ ಆಗಿಹೋದ ಹಿರಿಯ ಕಲಾವಿದರ ಛಾಯೆ ಇದೆ.ಕೊಂಡದಕುಳಿಯವರ ವಲಲ ಭೀಮ ಪ್ರಸಂಗಕ್ಕೊಂದು ಹೊಸ ಓಘವನ್ನು ನೀಡುವಲ್ಲಿ ಕಾರಣವಾಯಿತು. ಜುಟ್ಟು ಹೊಂದಿರುವ ಬೋಳುತಲೆಯ, ದೊಡ್ಡ ಮೀಸೆಯ, ಮೈ ಬಿಟ್ಟ ವಲಲನ ಆಹಾರ್ಯ ಅವರದೆ ಹೊಸ ಕಲ್ಪನೆ. ಕೀಚಕನನ್ನು ಕೊಲ್ಲುವಂತೆ ಭೀಮಸೇನನನ್ನು ಪ್ರೇರೇಪಿಸಿ ಅಣಿಗೊಳಿಸುವ ಭೀಮ ಸೈರೆಂದ್ರಿಯರ ಉಭಯಸಂಕಟದ ಗಂಭೀರ ಭಾಗದ ರಸವತ್ತಾದ ಸಂವಾದವನ್ನು ತಿಳಿಹಾಸ್ಯದೊಂದಿಗೆ ಬೆಳೆಸಿದ ಕಲಾವಿದರೀರ್ವರೂ ಅಭಿನಂದನೀಯರು. ಕೀಚಕನ ಪಾತ್ರದಲ್ಲಿ ಮಗಳು, ವಲಲನ ಪಾತ್ರದಲ್ಲಿ ತಂದೆ ಅಂದಿನ ಆಟದ ಮತ್ತೂಂದು ವಿಶೇಷ. ಕೀಚಕ ಮತ್ತು ವಲಲನ ಯುಧœ ಭಾಗವನ್ನು ಮೊಟಕುಗೊಳಿಸಿದ ಕಾರಣ ಆ ಭಾಗವನ್ನು ಕಾದು ಕುಳಿತ ಪ್ರೇಕ್ಷಕರ ನಿರೀಕ್ಷೆ ಹುಸಿಯಾಯಿತು. ಹಾಸ್ಯಗಾರ ಹಾಲಾಡಿ ಸತೀಶ್‌ರವರ ವಿಜಯನ ಪಾತ್ರವೂ ಸಮಯೋಚಿತವಾಗಿತ್ತು. ಹೆಚ್ಚು ಪುನರಾವರ್ತನೆ ಯಿಲ್ಲದ, ಹಳತರೊಂದಿಗೆ ಹೊಸತನ್ನು ಮೈಗೂಡಿಸಿಕೊಂಡು, ರಸಭಾವಗಳಿಗನುಗುಣವಾಗಿ, ಸಂದಭೋìಚಿತ ರಾಗ ತಾಳಗಳಲ್ಲಿ ಯಕ್ಷಗಾನೀಯವಾಗಿ ಹಾಡಿದ ಯುವಭಾಗವತ ಚಂದ್ರಕಾಂತ ಮೂಡುಬೆಳ್ಳೆ, ಮದ್ದಳೆ, ಚಂಡೆಯಲ್ಲಿ ಸಹಕರಿಸಿದ ರಾಘವೇಂದ್ರ ಹೆಗಡೆಯಲ್ಲಾಪುರ, ಕೋಟ ಶಿವಾನಂದರು ಪ್ರಸಂಗದ ಒಟ್ಟು ಅಂದಕ್ಕೆ ಪೂರಕರಾಗಿ ದುಡಿದವರು. 

ತಾ ಮೇಲೂ, ತಾ ಮೇಲೂ ಎನ್ನದೇ ಎಲ್ಲಾ ಕಲಾವಿದರ ಸಾಂ ಕ ಪ್ರಯತ್ನವೇ ರಂಗದ ಒಟ್ಟಂದದ ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬುದು ಕೀಚಕವಧೆಯ ಯಶಸ್ಸಿನ ಗುಟ್ಟು. ಕಣ್ಣು ಕುಕ್ಕುವ ಜಗಮಗಿಸುವ ಬಣ್ಣ ಬಣ್ಣದ ದೀಪಗಳಿಲ್ಲದೇ ಪ್ರದರ್ಶನ ಹಿತವಾಯಿತು. 

ರಾಜೀವ ಬಿ. 

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.