ದೇವ ಭಕ್ತಿ, ದೇಶ ಭಕ್ತಿಯ ಸಂಗಮವಾದ ಸಾಂಸ್ಕೃತಿಕ ಸಂಜೆ 


Team Udayavani, Nov 23, 2018, 6:00 AM IST

7.jpg

ಬೈಂದೂರಿನ ಶಾರದೋತ್ಸವದ ಅಂಗವಾಗಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ ಪ್ರಸ್ತುತಪಡಿಸಿದ ನೃತ್ಯ ಕಾರ್ಯಕ್ರಮ ದೇವ ಭಕ್ತಿ-ದೇಶ ಭಕ್ತಿಯ ಸಂಗಮವಾಯಿತು. ರೋಮಾಂಚನಕಾರಿ ಅಭಿನಯದ ಮಹಿಷ ಮರ್ದಿನಿ ನೃತ್ಯ ಮನಸೆಳೆಯಿತು. ದೇವಿಯ ಭೀಬತ್ಸ ಕಣ್ಣುಗಳು, ಹಾವ-ಭಾವ, ಭಯ ಹುಟ್ಟಿಸುವ ರೌದ್ರಾವತಾರ  ರೋಮಾಂಚನಗೊಳಿಸಿತು. ಪೌರಾಣಿಕ ಕಥನವನ್ನು ಪರಿಣಾಮ ಕಾರಿಯಾಗಿ ನೃತ್ಯದ ಮೂಲಕ ಪ್ರಸ್ತುತೀಕರಿಸುವ ಕ್ಲಿಷ್ಟಕರ ಕೆಲಸವನ್ನು ಶ್ವೇತಾ ಅರೆಹೊಳೆ ನೇತೃತ್ವದಲ್ಲಿ ಹದಿಹರೆಯದ ಸದಸ್ಯರು ಕಠಿಣ ಪರಿಶ್ರಮದ ಮೂಲಕ ಸಾಕಾರಗೊಳಿಸಿದರು. 

ದೇವಿಯ ರೂಪದಲ್ಲಿ ರಂಗದ ಮೇಲೆ ಅವತರಿಸಿದ ಶ್ವೇತಾ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಭಾವವಿಭೋರಗೊಳಿಸಿದರು. ಅಸತ್ಯ ಮತ್ತು ಅಸುರಿ ಶಕ್ತಿಯ ಮೇಲೆ ಸತ್ಯ ಮತ್ತು ಮಾನವೀಯ ಮೌಲ್ಯಗಳ ವಿಜಯದ ಸಂಕೇತವಾದ ಮಹಿಷಾಸುರನ ವಧೆ ಮತ್ತು ಭಕ್ತರನ್ನು ಅನುಗ್ರಹಿಸುವ ನೃತ್ಯರೂಪಕ ಉತ್ತಮ ಸಮನ್ವಯ, ಪಾತ್ರಗಳ ತಾದಾತ್ಮತೆಯಿಂದ ಚಿರಸ್ಥಾಯಿಯಾಗಿರುವಂತೆ ಮಾಡಿತು. ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ತಂತ್ರಜ್ಞಾನದ ಸಹಾಯದಿಂದ ಮಾಡಲಾಗುವ ಅಸುರೀ ಸಂಹಾರದ ವೈಭವೋಪೇತ ದೃಶ್ಯವನ್ನು ಅಷ್ಟೇ ಸಮರ್ಥವಾಗಿ ಮತ್ತು ಆಕರ್ಷಕವಾಗಿ ರಂಗದಲ್ಲಿ ಪ್ರದರ್ಶಿಸಿದ ರೀತಿ ಪ್ರಶಂಸೆಗೆ ಪಾತ್ರವಾಯಿತು. ಅಮೋಘ ರಂಗ ತಂತ್ರದ ಮೂಲಕ ಪ್ರದರ್ಶಿಸಿದ ಜಗಜ್ಜನನಿಯ ವಿರಾಟ್‌ ರೂಪದರ್ಶನವನ್ನು ಪ್ರೇಕ್ಷಕರು ಹರ್ಷಿತರಾಗಿ ಕಣ್ತುಂಬಿಕೊಂಡರು. ಆಕರ್ಷಕ ವೇಷಭೂಷಣ, ಪ್ರಸಾಧನಗಳಿಂದ ಹಾಗೂ ಉತ್ತಮ ಬೆಳಕಿನ ನಿರ್ವಹಣೆಯ ಜತೆಯಲ್ಲಿ ಪ್ರತಿಷ್ಠಾನದ ಮುಖ್ಯಸ್ಥ ಸದಾಶಿವ ರಾವ್‌ ಅವರ ಸಂಕ್ಷಿಪ್ತ ಹಿನ್ನೆಲೆ ವಿವರಣೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಯಿತು. 

ಹರಿಯಿತು ರಾಷ್ಟ್ರಭಕ್ತಿಯ ಹೊಳೆ 
    ಕಾರ್ಯಕ್ರಮದ ಉತ್ತರಾರ್ಧದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ ಸೈನಿಕರ ಜೀವನಾಧಾರಿತ ನೃತ್ಯ “ಚಕ್‌ ದೇ ಇಂಡಿಯಾ’ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿಸಿತು. ಜನಪ್ರಿಯ ಹಿಂದಿ ಹಾಡುಗಳನ್ನಾಧರಿಸಿ ಸಂಯೋಜಿಸಿದ ನೃತ್ಯ ರೂಪಕ ಸೈನಿಕರ ತ್ಯಾಗ,ಬಲಿದಾನದ ಮಹತ್ವವನ್ನು ವಿಷದೀಕರಿಸಿತು. ಭಾರತ-ಚೀನ ಯುದೊœàತ್ತರದಲ್ಲಿ ನೆಹರೂರವರ ಕಣ್ಣುಗಳನ್ನು ತೇವಗೊಳಿಸಿತ್ತೆನ್ನಲಾದ ಲತಾ ಮಂಗೇಶ್ಕರ್‌ ಅವರ ಎ ಮೇರೇ ವತನ್‌ ಕೇ ಲೋಗೋ ಜರಾ ಆಂಖ್‌ ಮೇ ಭರಲೋ ಪಾನೀ, ಜೋ ಶಹೀದ್‌ ಹುಯೆ ಉನಿ ಜರಾ ಯಾದ್‌ ಕರಲೋ ಖುರ್ಬಾನಿ…’ ಕಣ್ಣಾಲಿಗಳು ತುಂಬುವಂತೆ ಮಾಡಿತು. ಸಂದೇಶೇಂ ಆತಾ ಹೈ…ಹಮೇ ತಡಪಾತೇ ಹೈ…ಘರ್‌ ಕಬ್‌ ಆವೋಗೇ…’ ಹಾಡು ತಮ್ಮನ್ನು ಪ್ರೀತಿಸುವ ಜೀವಗಳಿಂದ ಸಹಸ್ರಾರು ಮೈಲಿ ದೂರದ ದೇಶದ ಸೀಮೆಯಲ್ಲಿದ್ದು ಪ್ರಾಣವನ್ನೇ ಪಣವಾಗಿಟ್ಟು ಶತ್ರುಗಳಿಂದ ಅನವರತ ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಮಾನಸಿಕ ತಳಮಳದ ಚಿತ್ರಣ ಮನತಟ್ಟಿತು.  ಧಾರ್ಮಿಕ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಕುರಿತು ಚಿಂತಿಸುವಂತೆ, ದೇಶ ರಕ್ಷಕರ ಬಲಿದಾನವನ್ನು ಸ್ಮರಿಸುವಂತೆ ಪ್ರೇರೇಪಿಸುವ ಅಪೂರ್ವ ಕಾರ್ಯಕ್ರಮವಾಯಿತು. 

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.