ಯಕ್ಷ ಗಾಯನ -ಹಿಂದುಸ್ಥಾನಿ ಸಂಗೀತ ಜುಗಲ್‌ಬಂದಿ 


Team Udayavani, Nov 30, 2018, 6:00 AM IST

3.jpg

ಜೇಸಿ ಕುಂದಾಪುರ 2018 ಸಪ್ತಾಹದ ಅಂಗವಾಗಿ ಒಂದು ವಾರದವರೆಗೆ ಆಯೋಜಿಸಿದ ಸರಿಗಮಪದನಿ ಎಂಬ ವಿವಿಧ ಸಂಗೀತ ಪ್ರಕಾರಗಳನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮದಲ್ಲಿ ಒಂದು ಈ ಯಕ್ಷ-ಗಾನ ವೈಭವ. ಬಡಗುತಿಟ್ಟು ಯಕ್ಷ ಶೈಲಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರು 20 ವರ್ಷಗಳಿಂದ ವಿವಿಧ ಸಂಗೀತ ವಿದ್ವಾಂಸರ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿರುವ ಈ ಯಕ್ಷ-ಗಾನ ವೈಭವದ ಬಗ್ಗೆ ತಿಳಿಸಿದರು.

ಈ ಬಾರಿ ಅವರಿಗೆ ಸಾಥ್‌ ನೀಡಿದವರು ಹಿಂದೂಸ್ಥಾನಿ ಸಂಗೀತ ವಿದ್ವಾನ್‌ ಗಜಾನನ ಹೆಬ್ಟಾರರು. ಭಾಗವತರ ಪ್ರಬುದ್ಧ ಮಾತುಗಳು, ಹೆಬ್ಟಾರರ ಅನುಭವದ ನುಡಿಗಳು ಕಾರ್ಯಕ್ರಮಕ್ಕೆ ಉತ್ತಮ ಆರಂಭ ನೀಡಿದವು. ಗಣಪತಿ ಸ್ತುತಿಯನ್ನು ಯಕ್ಷಗಾನದ ಪದ್ಯ ಶೈಲಿಯಲ್ಲಿ ಹಾಡಿದ ಭಾಗವತರಿಗೆ ಸರಸ್ವತಿ ರಾಗದ ದೇವಿಸ್ತುತಿಯ ಪ್ರಾರ್ಥನೆಯ ಸಾಥ್‌ ಹೆಬ್ಟಾರರಿಂದ ದೊರಕಿತು. ಏಕತಾಳದಲ್ಲಿ ಸುಂದರ ತಾನ್‌ಗಳೊಂದಿಗೆ ಪೋಣಿಸಿದ ಈ ರಾಗ ಸಭೆಗೆ ಬೇಕಾದ ಉಠಾವ್‌ ನೀಡಿತು.”ವನದೇವಿಯ ವನರಾಸಿಯ …’ ಭಾಗವತರ ಪದ್ಯದಲ್ಲಿ ರಾಗದ ಸ್ಪಷ್ಟತೆ ಇರದಿದ್ದರೂ ಅವರ ಕಂಠಸಿರಿಯಲ್ಲಿ ಉತ್ತಮವಾಗಿ ಮೂಡಿ ಬಂತು. ಅದೇ ಹಾಡನ್ನು ಮಾರುಬಿಹಾಗ್‌ ರಾಗದಲ್ಲಿ ಎತ್ತಿಕೊಂಡ ಹೆಬ್ಟಾರರು ಶಾಸ್ತ್ರೀಯತೆಯ ಸ್ಪರ್ಷ ನೀಡಿದರು.ರಾಗ ಪಟದೀಪ, ಹರಿಕಾಂಭೋಜಿ ಪದ್ಯಗಳು ಯಕ್ಷಗಾನದ ಶೈಲಿಯಲ್ಲಿ ಕೇಳುಗರಿಗೆ ಖುಷಿ ನೀಡುವ ಹಾಗೆ ಭಾಗವತರಿಂದ ಹಾಡಲ್ಪಟ್ಟವು. ಮಾಜ್‌ ಖಮಾಜ್‌ ರಾಗದ “ಜಮುನಾ ಕಿನಾರೆ …’ ಹೆಬ್ಟಾರರ ಲಘುಶಾಸ್ತ್ರೀಯ ಶೈಲಿ ಮುದ ನೀಡುವಂತಿತ್ತು. ಭೀಮ ಪಲಾಸಿನಿ, ಸಾರಂಗ ರಾಗದ ವಿಸ್ತಾರ ಚೆನ್ನಾಗಿ ಪ್ರಸ್ತುತ ಪಡಿಸಿದರು.”ಎಲ್ಲೆಲ್ಲೂ ಸೊಬಗಿದೆ ..’ ಗೀತೆಯ ಜುಗಲಬಂಧಿ ಕಾರ್ಯಕ್ರಮಕ್ಕೆ ಸೂಕ್ತ ಮುಕ್ತಾಯ ನೀಡಿತು. ಅದರಲ್ಲಿ ಬರುವ ಕೋಗಿಲೆಯ “ಕುಹೂ ಕುಹೂ …’ ಕೂಗಿಗೆ ಹೆಬ್ಟಾರರ ಕಂಠ ಪಂಚಮದ ಸುಖವನ್ನು ನೀಡಿತು.ಇಬ್ಬರು ಅತ್ಯುತ್ತಮ ಕಲಾವಿದರಿಂದ ನಡೆಸಲ್ಪಟ್ಟ ಈ ಜುಗಲಬಂಧಿ ಒಂದು ಒಳ್ಳೆಯ ಪ್ರಯೋಗ ಅನ್ನಿಸಿತು.ಮೃದಂಗದಲ್ಲಿ ಎನ್‌.ಜಿ. ಹೆಗಡೆ, ತಬಲಾದಲ್ಲಿ ಅಕ್ಷಯ ಭಟ್‌ ಹಂಸಳ್ಳಿಸಾಥ್‌ ನೀಡಿದರು. ಅವರಿಬ್ಬರ ತನಿ ಆವರ್ತನ ಚೇತೋಹಾರಿಯಾಗಿತ್ತು. ಧಾರೇಶ್ವರರು ಮೃದಂಗವನ್ನು, ತಬಲಾವನ್ನು ಕೂಡಾ ಮಾತನಾಡಿಸುತ್ತಿದ್ದ ಪರಿ (ಇದು ಶಾಸ್ತ್ರೀಯ ಸಂಗೀತದಲ್ಲಿ ಸಾಧ್ಯವಾಗುವುದಿಲ್ಲ) ವಿಶೇಷವಾಗಿತ್ತು.ಒಂದು ವಿಶಿಷ್ಟ ಪ್ರಯೋಗ ಗಾಯಕ ಮತ್ತು ವಾದಕರ ಪ್ರತಿಭೆಯಿಂದ ಅದ್ಭುತವಾಗಿ ಮೂಡಿ ಬಂತು.

 ಡಾ. ಎಚ್‌. ಆರ್‌. ಹೆಬ್ಟಾರ್‌ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.