ಹವಿಗನ್ನಡದಲ್ಲಿ ರಂಜಿಸಿದ ಕುಶಾಲಿನ ಲಡಾಯಿ 


Team Udayavani, Nov 30, 2018, 6:00 AM IST

4.jpg

ಮಹತೋಬಾರ ಶ್ರೀ ಮಹಾಗಣಪತಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್‌ ಅಭಿಮಾನಿ ಬಳಗದ ಸಹಕಾರದಲ್ಲಿ ಪುತ್ತೂರಿನ ಯಕ್ಷರಂಗ ಆಯೋಜಿಸಿದ ಕುಶಾಲಿನ ಲಡಾಯಿ ತಾಳಮದ್ದಳೆ ಒಂದು ವಿನೂತನ ಪ್ರಯೋಗವಾಗಿ ಪ್ರದರ್ಶನಗೊಂಡಿತು. ಹಾಡುಗಾರಿಕೆ ಮತ್ತು ಅರ್ಥ ವಿವರಣೆಗಳು ಹವ್ಯಕರ ಆಡುನುಡಿ (ಹವಿಗನ್ನಡ)ದಲ್ಲಿ ಮೂಡಿಬಂದಿರುವುದು ಕುತೂಹಲಕರ ಅಂಶವಾಗಿದೆ. 

ಕೃಷ್ಣಾರ್ಜುನ ಕಾಳಗ ಕನ್ನಡ ಕಥಾನಕವನ್ನು ಆಧರಿಸಿ ಹವ್ಯಕರ ಮಾತೃಭಾಷೆಯಲ್ಲಿ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಪದ್ಯಗಳನ್ನು ಹಾಡಿ ಕಳೆಯೇರಿಸಿದವರು ಭಾಗವತ ಪುತ್ತೂರು ರಮೇಶ ಭಟ್ಟರು. ಅಡೂರು ಲಕ್ಷ್ಮೀನಾರಾಯಣ ಮತ್ತು ರಾಮಮೂರ್ತಿ ಚೆಂಡೆಮದ್ದಳೆವಾದಕರಾಗಿ ಮೆರುಗಿತ್ತರು. ವಿ| ಹಿರಣ್ಯ ವೈಂಕಟೇಶ್ವರ ಭಟ್‌ (ಬಲರಾಮ), ಶಂಭುಶರ್ಮ ವಿಟ್ಲ (ಅರ್ಜುನ), ರಾಧಾಕೃಷ್ಣ ಕಲ್ಚಾರ್‌ (ಕೃಷ್ಣ), ಪ್ರಸಂಗಕರ್ತ ಸೇರಾಜೆಯವರು (ಸುಭದ್ರೆ), ಪಶುಪತಿ ಶಾಸ್ತ್ರಿ (ಭೀಮ), ಡಾ| ಹರೀಶ್‌ ಜೋಶಿ ವಿಟ್ಲ(ದಾರುಕ) ಅರ್ಥಧಾರಿಗಳಾಗಿ ನಿರ್ವಹಿಸಿದ್ದರು.

ಈ ಎಲ್ಲಾ ಕಲಾವಿದರ ಮನೆಮಾತು ಹವ್ಯಕ ಭಾಷೆ ಆಗಿರುವುದರಿಂದ ಅರ್ಥಗಾರಿಕೆಯಲ್ಲಿ ಸಂವಾದವನ್ನು ಸುಲಲಿತವಾಗಿ ನಡೆಸಿದರು. ಭಾಷಾ ಲಾಲಿತ್ಯ ಸಕಾಲದಲ್ಲಿ ಕಾರ್ಯಕ್ರಮ ಮುಗಿಸಲು ಅಡಚಣೆಯಾಗಿ ತೋರಿ ಬಂದಿತು.ಕೆಲವು ಕಡೆಗಳಲ್ಲಿ ಕುಶಾಲು ತುಸು ಲಂಭಿಸಿತೆನ್ನಬೇಕು. ಎಲ್ಲಾ ಅರ್ಥ ದಾರಿಗಳು ಅರ್ಥಗಾರಿಕೆಯಲ್ಲಿ ಮಿಂಚಿದರು. ಭೀಮನ ಆಟೋಪ, ದಾರುಕನ ನುಡಿಗಳಲ್ಲಿ ಉಕ್ಕಿದ ಹಾಸ್ಯ ಗಮನಾರ್ಹ. ಹಿಂದೊಮ್ಮೆ ಇದೇ ವೇದಿಕೆಯಲ್ಲಿ ಬಹುತೇಕ ಇದೇ ಕಲಾವಿದರ ಕೂಡುವಿಕೆಯಲ್ಲಿ “ಸನ್ಯಾಸಿ ಮದಿಮ್ಮಾಯ’ (ಸುಭದ್ರಾ ಕಲ್ಯಾಣ)ಪ್ರಸಂಗ ಪ್ರದರ್ಶನಗೊಂಡು ಜನರ ಮನಗೆದ್ದಿತ್ತು. 

ಹರಿನಾರಾಯಣ ಮಾಡಾವು 

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.