ಹವಿಗನ್ನಡದಲ್ಲಿ ರಂಜಿಸಿದ ಕುಶಾಲಿನ ಲಡಾಯಿ
Team Udayavani, Nov 30, 2018, 6:00 AM IST
ಮಹತೋಬಾರ ಶ್ರೀ ಮಹಾಗಣಪತಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಸಹಕಾರದಲ್ಲಿ ಪುತ್ತೂರಿನ ಯಕ್ಷರಂಗ ಆಯೋಜಿಸಿದ ಕುಶಾಲಿನ ಲಡಾಯಿ ತಾಳಮದ್ದಳೆ ಒಂದು ವಿನೂತನ ಪ್ರಯೋಗವಾಗಿ ಪ್ರದರ್ಶನಗೊಂಡಿತು. ಹಾಡುಗಾರಿಕೆ ಮತ್ತು ಅರ್ಥ ವಿವರಣೆಗಳು ಹವ್ಯಕರ ಆಡುನುಡಿ (ಹವಿಗನ್ನಡ)ದಲ್ಲಿ ಮೂಡಿಬಂದಿರುವುದು ಕುತೂಹಲಕರ ಅಂಶವಾಗಿದೆ.
ಕೃಷ್ಣಾರ್ಜುನ ಕಾಳಗ ಕನ್ನಡ ಕಥಾನಕವನ್ನು ಆಧರಿಸಿ ಹವ್ಯಕರ ಮಾತೃಭಾಷೆಯಲ್ಲಿ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಪದ್ಯಗಳನ್ನು ಹಾಡಿ ಕಳೆಯೇರಿಸಿದವರು ಭಾಗವತ ಪುತ್ತೂರು ರಮೇಶ ಭಟ್ಟರು. ಅಡೂರು ಲಕ್ಷ್ಮೀನಾರಾಯಣ ಮತ್ತು ರಾಮಮೂರ್ತಿ ಚೆಂಡೆಮದ್ದಳೆವಾದಕರಾಗಿ ಮೆರುಗಿತ್ತರು. ವಿ| ಹಿರಣ್ಯ ವೈಂಕಟೇಶ್ವರ ಭಟ್ (ಬಲರಾಮ), ಶಂಭುಶರ್ಮ ವಿಟ್ಲ (ಅರ್ಜುನ), ರಾಧಾಕೃಷ್ಣ ಕಲ್ಚಾರ್ (ಕೃಷ್ಣ), ಪ್ರಸಂಗಕರ್ತ ಸೇರಾಜೆಯವರು (ಸುಭದ್ರೆ), ಪಶುಪತಿ ಶಾಸ್ತ್ರಿ (ಭೀಮ), ಡಾ| ಹರೀಶ್ ಜೋಶಿ ವಿಟ್ಲ(ದಾರುಕ) ಅರ್ಥಧಾರಿಗಳಾಗಿ ನಿರ್ವಹಿಸಿದ್ದರು.
ಈ ಎಲ್ಲಾ ಕಲಾವಿದರ ಮನೆಮಾತು ಹವ್ಯಕ ಭಾಷೆ ಆಗಿರುವುದರಿಂದ ಅರ್ಥಗಾರಿಕೆಯಲ್ಲಿ ಸಂವಾದವನ್ನು ಸುಲಲಿತವಾಗಿ ನಡೆಸಿದರು. ಭಾಷಾ ಲಾಲಿತ್ಯ ಸಕಾಲದಲ್ಲಿ ಕಾರ್ಯಕ್ರಮ ಮುಗಿಸಲು ಅಡಚಣೆಯಾಗಿ ತೋರಿ ಬಂದಿತು.ಕೆಲವು ಕಡೆಗಳಲ್ಲಿ ಕುಶಾಲು ತುಸು ಲಂಭಿಸಿತೆನ್ನಬೇಕು. ಎಲ್ಲಾ ಅರ್ಥ ದಾರಿಗಳು ಅರ್ಥಗಾರಿಕೆಯಲ್ಲಿ ಮಿಂಚಿದರು. ಭೀಮನ ಆಟೋಪ, ದಾರುಕನ ನುಡಿಗಳಲ್ಲಿ ಉಕ್ಕಿದ ಹಾಸ್ಯ ಗಮನಾರ್ಹ. ಹಿಂದೊಮ್ಮೆ ಇದೇ ವೇದಿಕೆಯಲ್ಲಿ ಬಹುತೇಕ ಇದೇ ಕಲಾವಿದರ ಕೂಡುವಿಕೆಯಲ್ಲಿ “ಸನ್ಯಾಸಿ ಮದಿಮ್ಮಾಯ’ (ಸುಭದ್ರಾ ಕಲ್ಯಾಣ)ಪ್ರಸಂಗ ಪ್ರದರ್ಶನಗೊಂಡು ಜನರ ಮನಗೆದ್ದಿತ್ತು.
ಹರಿನಾರಾಯಣ ಮಾಡಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!