ಹೊಸ ಕ್ಷಿತಿಜ ತೋರಿಸಿದ ಭರತ ನೃತ್ಯ


Team Udayavani, Dec 14, 2018, 6:00 AM IST

2.jpg

ಭರತನಾಟ್ಯದ ಇನ್ನೊಂದು ಆಯಾಮವೇ ಭರತ ನೃತ್ಯ. ಸುಂದರವಾದ ಕರಣ ಹಾಗೂ ಚಾರಿಗಳನ್ನೊಳಗೊಂಡ ಭರತ ನೃತ್ಯವು ಬೆಂಗಳೂರಿನ ವಿ| ಕ್ಷಿತಿಜಾ ಕಾಸರವಳ್ಳಿಯವರಿಂದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು. 

ಸುಂದರವಾದ ಕನ್ನಡದ ರಚನೆಯುಳ್ಳ ವಿದ್ವಾನ್‌ ಜಿ.ಗುರುಮೂರ್ತಿಯವರಿಂದ ರಚಿತವಾದ,ಹಾಗೂ ವಿದ್ವಾನ್‌ ಬಾಲಸುಬ್ರಮಣ್ಯ ಶರ್ಮಾ ಇವರಿಂದ ರಾಗ ಸಂಯೋಜಿಸಲ್ಪಟ್ಟ ನರಸಿಂಹ ಕೌತ್ವಂನ ಮೂಲಕ ನರಸಿಂಹ ದೇವರ ವಿವಿಧ ಸ್ವರೂಪಗಳ ವರ್ಣನೆಯೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.ನರಸಿಂಹನ ವರ್ಣನೆಗೆ ಸಂಬಂಧಪಟ್ಟ ಆಯಾ ಭಾವನೆಗಳಿಗೆ ತಕ್ಕುದಾದ ರಾಗಗಳನ್ನೊಳಗೊಂಡ ಈ ಕೌತ್ವಂ ಅನ್ನು ವಿವಿಧ ಚಾರಿ, ಕರಣ,ಭಂಗಿಗಳ ಮೂಲಕ ಪ್ರೇಕ್ಷಕರ ಚಪ್ಪಾಳೆಯ ಮೆಚ್ಚುಗೆಗೆ ಪಾತ್ರರಾದರು.

ನಂತರ ಶುದ್ಧ ಸಂಗೀತ ಪ್ರಕಾರದ ರಚನಾ ವಿಶೇಷತೆಯಾದ ಕೃತಿಯ ಮೂಲಕ ತಂಜಾವೂರು ಶಂಕರ್‌ ಅಯ್ಯರ್‌ರವರ ರಚನೆಯಾದ ದೇವಿಯನ್ನು ವರ್ಣಿಸುವ ರಂಜನಿ ಮಾಲೆಯನ್ನು ಅವರ ನೃತ್ಯ ಶೈಲಿಯ ಮೂಲಕ ಪ್ರಸ್ತುತ ಪಡಿಸಿದರು.ಕರ್ನಾಟಕ ಸಂಗೀತದ ನಾಲ್ಕು ವಿಶೇಷವಾದ ರಂಜನಿ, ಶ್ರೀ ರಂಜನಿ, ಮೇಘರಂಜನಿ ಮತ್ತು ಜನರಂಜನಿ ರಾಗಗಳ ರಾಗಮುದ್ರೆಯನ್ನೊಳಗೊಂಡ ಸಾಹಿತ್ಯಕ್ಕೆ ಕಲಾವಿದೆಯು ತಮ್ಮ ಕಲಾಪೌಢಿಮೆಯ ಮೂಲಕ ರಸಿಕರ ಮನಗೆದ್ದರು.

 ಕೃಷ್ಣನಿಲ್ಲದೆ ಬದುಕಲಾರದೆ ತೊಳಲಾಡುತ್ತಿರುವ ದಾಸಿಯು, ತನ್ನ ಬದುಕು ಕಮಲವಿಲ್ಲದ ಕೆರೆಯಂತೆ,ಚಂದ್ರನಿಲ್ಲದ ರಾತ್ರಿಯಂತೆ ಭಾಸವಾಗುತ್ತಿದೆ ಎಂಬ ಸಾಹಿತ್ಯವನ್ನೊಳಗೊಂಡ ನಾಡಿನ ಹೆಸರಾಂತ ಕವಿ ಶ್ರೀ ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್‌ ರವರು ರಚಿಸಿದ “ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ…’ಎಂಬ ಭಾವಗೀತೆಯ ಮೂಲಕ ಕೃಷ್ಣನಿಗಾಗಿ ಪರಿತಪಿಸಿ ನಿದ್ದೆಯೂ ಬಾರದೆ, ಆಹಾರವು ಸೇರದೆ ಕೊನೆಗೆ ಅಂತರ್ಯಾಮಿಯಾಗಿ ಒಳಗಿರುವ ಚೈತನ್ಯ ರೂಪಿಯಾದ ಕೃಷ್ಣನನ್ನೇ ಹೊರಗೆ ಅವಿರ್ಭವಿಸು ಎಂದು ಕರೆಕೊಡುವ,ಮೊರೆಯಿಡುವ ನಾಯಕಿಯ ವಿರಹವೇದನೆಯನ್ನು ತನ್ನ ಅಭಿನಯದಿಂದ ಪ್ರೇಕ್ಷಕರನ್ನು ರೋಮಾಂಚಿತರನ್ನಾಗಿ ಮಾಡಿದರು.

ನಿರಂತರ ಪ್ರೀತಿ ಮತ್ತು ಭಕ್ತಿಯಂದ ಕೃಷ್ಣನನ್ನು ಆರಾಧಿಸುವುದರಿಂದ ದೇವರ ಸಾನಿಧ್ಯ ಪಡೆಯಬಹುದು ಎಂದು ವೇದ ಸಿದ್ಧಾಂತವು ಹೇಳಿದೆ.ಈ ಸಿದ್ಧಾಂತವನ್ನು ಪುಷ್ಟಿಮಾರ್ಗ ಎಂದು ವಲ್ಲಭಾಚಾರ್ಯರು ಕರೆದರು.ಅವರು ಸಂಸ್ಕೃತದಲ್ಲಿ ರಚಿಸಿದ “ಮಧುರಾಷ್ಟಕಂ’ ಅನ್ನು ಕಲಾವಿದೆಯು ವಿವಿಧ ಚಾರಿ ಕರಣಗಳನ್ನು ಅಳವಡಿಸಿಕೊಂಡು ಅಭಿನಯಿಸಿದರು. ಕೃಷ್ಣನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಮಧುರವಾಗಿದೆ ಎಂದು ಕೃಷ್ಣನ ಕೆಲವು ಲೀಲೆಗಳನ್ನು ತೋರಿಸುವ ಮೂಲಕ ಸುಂದರವಾಗಿ ಪ್ರದರ್ಶಿಸಿದರು.

ಭರತನಾಟ್ಯದಲ್ಲಿ ಕೊನೆಯದಾಗಿ ಪ್ರಸ್ತುತಗೊಳ್ಳುವ ಚುರುಕಾದ, ಲವಲವಿಕೆಯ, ಕ್ಷಿಪ್ರಗತಿಯ ನೃತ್ಯಬಂಧವೇ ತಿಲ್ಲಾನ. ಕ್ಷಿತಿಜಾರವರು ವಿದ್ವಾನ್‌ ಡಿ.ವಿ ಪ್ರಸನ್ನ ಕುಮಾರ್‌ರವರ ರಚನೆ ಹಾಗೂ ವಿ| ಕೆ.ಎಸ್‌. ಜಯರಾಮ್‌ರವರ ಸಂಗೀತ ಸಂಯೋಜನೆಯ ತಿಲ್ಲಾನವನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದರು. 

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.