ನೆಲಹಾಸಿನಂತೆ ಕಾಣುವ ರಂಗೋಲಿ, ನೀರ ಮೇಲೂ -ಒಳಗೂ ರಂಗೋಲಿ


Team Udayavani, Dec 14, 2018, 6:00 AM IST

5.jpg

ಜಿಎಸ್‌ಬಿಯವರ ಆಡಳಿತಕ್ಕೆ ಒಳಪಟ್ಟ ಬಹುತೇಕ ಎಲ್ಲ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ವಿಶ್ವರೂಪ ದರ್ಶನ ನಡೆಯುತ್ತದೆ. ಬೆಳಗಿನ ಜಾವದ ಜಾಗರದಲ್ಲಿ ಹಣತೆಗಳನ್ನು ಬೆಳಗಿ ಭಗವಂತನ ದಿವ್ಯರೂಪದ ದರ್ಶನ ಪಡೆಯುವ ವಿಶಿಷ್ಟ ಅನುಭೂತಿ. ಕೆಲವು ದೇವಸ್ಥಾನಗಳಲ್ಲಿ ಮುಂಜಾನೆಯ ಚುಮುಚುಮು ಚಳಿಗೆ ಸಾವಿರಾರು ಮಂದಿ ಶ್ರದ್ಧಾ ಭಕ್ತಿ ಭಾವದಿಂದ ಸೇರಿರುತ್ತಾರೆ. ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದ ವಿಶ್ವರೂಪ ದರ್ಶನಕ್ಕೆ ಆಗಮಿಸಿದ ಭಕ್ತರು ಅರೆಕ್ಷಣ ಚಕಿತರಾಗುತ್ತಿದ್ದುದು ಅಲ್ಲಿದ್ದ ವರ್ಣರಂಗೋಲಿಗೆ. ದೊಡ್ಡಗಾತ್ರದಲ್ಲಿ ರಚಿಸಿದ್ದ ವೆಂಕಟರಮಣನ ಚಿತ್ತಾಕರ್ಷಕ ರಂಗೋಲಿ ಮನಸೆಳೆಯುತ್ತಾ ದೀಪಗಳ ಬೆಳಕಿನಲ್ಲಿ ಇನ್ನಷ್ಟು ದೇದೀಪ್ಯಮಾನವಾಗಿ ಕಂಗೊಳಿಸುತ್ತಿತ್ತು. ಏಕೆಂದರೆ ಅದರ ರೇಖೆಗಳು ಅಷ್ಟು ಸಪೂರವಾಗಿದ್ದವು. ವರ್ಣಗಳನ್ನು ಹಾಕಲು ಗಾಳಿಸುವ ತಟ್ಟೆಯನ್ನು ಬಳಸಿರಲಿಲ್ಲ. ಕೈಯಿಂದಲೇ ಸೂಕ್ಷ್ಮವಾಗಿ ಅಷ್ಟು ದೊಡ್ಡ ರಂಗೋಲಿಯನ್ನು ಬಹಳ ಶ್ರದ್ಧೆಯಿಂದ ಸೊಗಸಾಗಿ ಮೂಡಿಸಲಾಗಿತ್ತು. ಹಾಗಾಗಿ ರಂಗೋಲಿಯ ಕುರಿತಾದಷ್ಟೇ ಕುತೂಹಲ ಅದನ್ನು ಬಿಡಿಸಿದವರ ಕುರಿತೂ ಇತ್ತು.

ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನವಷ್ಟೇ ಅಲ್ಲ ನಗರದ ಮೈಲಾರೇಶ್ವರ, ದತ್ತಾತ್ರೇಯ, ಲಕ್ಷ್ಮೀನಾರಾಯಣ ಮೊದಲಾದ ದೇವಾಲಯಗಳು, ಮುಲ್ಕಿ, ಮಂಗಳೂರು, ಉಡುಪಿ, ಕಲ್ಯಾಣಪುರ, ಚಿಟಾ³ಡಿ, ಅಂಬಲಪಾಡಿ ಹೀಗೆ ವಿವಿಧೆಡೆ ತಮ್ಮ ರಂಗೋಲಿಕಲಾಚಾತುರ್ಯ ಮೆರೆದವರು ಕುಂದಾಪುರದ ಆಟಕೆರೆ ಶ್ರೀಲಕ್ಷ್ಮೀ ಪೈ ಅವರು.35 ವರ್ಷಗಳಿಂದ ರಂಗೋಲಿಯ ಕುರಿತು ಆಸಕ್ತರಾದ ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ಡಾ| ವಿ.ಎಸ್‌.ಆಚಾರ್ಯರ ಪತ್ನಿ ಶಾಂತಾ ಆಚಾರ್ಯ ಅವರು ಕಡಿಯಾಳಿ ನವರಾತ್ರಿ ಸಂದರ್ಭ ಏರ್ಪಡಿಸಿದ ರಂಗೋಲಿ ಸ್ಪರ್ಧೆಯನ್ನು ನೋಡಿದ್ದರು. ಆಸಕ್ತಿ ಮೂಡಿತು. ನಂತರ ಭಾಗವಹಿಸಿದ್ದರು. ಮೊದಲೆರಡು ವರ್ಷ ಬಹುಮಾನವೂ ಬಂದಿರಲಿಲ್ಲ. ಹಾಗಂತ ಬೇಸರವೂ ಇರಲಿಲ್ಲ. ಆದರೆ ಅಲ್ಲಿ ಭಾಗವಹಿಸಿದವರಿಗೆ ಕೊಟ್ಟ ಪುಸ್ತಕಗಳೇ ಪ್ರೇರಣೆಯಾದವು. ನಂತರ ಸತತ 10 ವರ್ಷ ಪ್ರಥಮ ಬಹುಮಾನಕ್ಕೆ ಭಾಜನರಾಗಿ, ಇನ್ನು ಭಾಗವಹಿಸಿದರೆ ಬಹುಮಾನ ಖಾತರಿ ಎಂದು ತಿಳಿಯುತ್ತಿದ್ದಂತೆ ಸಂಘಟಕರಿಂದ ಸ್ಪರ್ಧೆಯ ತೀರ್ಪುಗಾರರಾಗಿ ಆಯ್ಕೆಯಾದರು. 

ಚುಕ್ಕಿ ರಂಗೋಲಿಯಲ್ಲೂ ಒಂದಷ್ಟು ಹೊಸತನಗಳನ್ನು ಕಂಡುಕೊಳ್ಳುವ ಮೂಲಕ ರಂಗೋಲಿ ಕಲಾವಿದೆ ಎನಿಸಿಕೊಂಡರು. “ಬೆಣ್ಣೆ ತಿನ್ನುವ ಕೃಷ್ಣ ರಂಗೋಲಿ’ಯನ್ನು ಪರ್ತಗಾಳಿ ಶ್ರೀಗಳು ಮೆಚ್ಚಿದ್ದರೆ, “ಹೂವುಗಳಿಂದ ರಚಿಸಿದ ಶಂಖ’ವನ್ನು ಕಂಡು ಕಾಶೀಮಠಾಧೀಶರು ಹರಸಿದ್ದರು. 

ನೆಲಹಾಸಿನಂತೆ ಕಾಣುವ ರಂಗೋಲಿ ಇವರ ವಿಶೇಷಗಳ ಪೈಕಿ ಪ್ರಮುಖ. ತೆಂಗಿನ ನಾರಿನ ಕಸ ಅಥವಾ ಹೂವುಗಳನ್ನು ಬಳಸಿ ಕಾಪೆìಟ್‌ನಂತೆಯೇ ಕಾಣುವ ರಂಗೋಲಿ ಬಿಡಿಸುವಲ್ಲಿ ಸಿದ್ಧಹಸ್ತರು. ಮಡಚಿದ ಕಾಪೆìಟ್‌ ಮಾದರಿಯಲ್ಲಿ ಮೈಸೂರಿನಲ್ಲಿ ರಚಿಸಿದ ರಂಗೋಲಿ ನಿಜ ಕಾಪೆìಟ್ಟೋ ರಂಗೋಲಿಯೋ ಎಂದು ತಿಳಿಯದೇ ಗಣ್ಯರು ಕೂಡಾ ದಂಗಾಗಿದ್ದರಂತೆ. 3 ಗಂಟೆಯಲ್ಲಿ ಯಾವುದೇ ಸಲಕರಣೆ ಬಳಸದೇ 13 ಅಡಿ ದೊಡ್ಡ ರಂಗೋಲಿ ಬಿಡಿಸುವ ವೇಗಸಾಮರ್ಥ್ಯ ಪಡೆಯಲು ಸಾಧ್ಯವಾದದ್ದು ಸತತ ಪರಿಶ್ರಮ ಹಾಗೂ ಅದರ ಮೇಲಿನ ಪ್ರೀತಿಯಿಂದ. 

ನೀರಿನ ಮೇಲೆ, ನೀರಿನ ಒಳಗೂ ರಂಗೋಲಿ ಹಾಕುವ ಅಚ್ಚರಿಯ ಕಲಾವಿದೆ ಇವರು. ರಂಗೋಲಿಯಲ್ಲಿ ಯಾವುದಾದರೊಂದು ದಾಖಲೆ ಮಾಡಬೇಕೆಂಬ ಮನೋಭೂಮಿಕೆ ಹೊಂದಿದ್ದಾರೆ. 30 ವರ್ಷದಿಂದ ಆಕಾಶವಾಣಿ ಕಲಾವಿದೆಯಾಗಿದ್ದು ಆಕಾಶವಾಣಿಯಲ್ಲಿ ಸುಗಮಸಂಗೀತದಲ್ಲಿ ಬಿ ಹೈಗ್ರೇಡ್‌ ಕಲಾವಿದೆ. ಹೂಮಾಲೆ ಕಟ್ಟುವುದರಲ್ಲಿ ಕೂಡಾ ತಮ್ಮದೇ ವಿಶೇಷಣವನ್ನು ಬೆಳೆಸಿಕೊಂಡಿದ್ದು ಹೂಮಾಲೆಗಳಿಂದಲೇ ದೇವತಾರೂಪದ ಅಲಂಕಾರ ಮಾಡುವ ಚಾತುರ್ಯ ಹೊಂದಿದ್ದಾರೆ. 

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.