ಗಾನಲೋಕದಲ್ಲಿ ತೇಲಿಸಿದ ಕಛೇರಿ 


Team Udayavani, Jan 4, 2019, 12:30 AM IST

x-60.jpg

ಸುನಾದ ಸಂಗೀತ ಕಲಾ ಶಾಲೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ವಿಷ್ಣುದೇವ ನಂಬೂದಿರಿ ಚೆನ್ನೆ ಇವರು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತ ರಸಿಕರನ್ನು ಗಾನಲೋಕದಲ್ಲಿ ತೇಲಿಸಿತು.

ಆಭೋಗಿ ರಾಗದ (ಎವ್ವರಿ ಭೋದನ )ವರ್ಣದ ಸುಶ್ರಾವ್ಯ ಪ್ರಸ್ತುತಿಯೊಂದಿಗೆ ಕಛೇರಿ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ನಂತರ ಗೌಳರಾಗದಲ್ಲಿ ಶ್ರೀ ಮಹಾಗಣಪತಿ ರವತುಮಾಮ್‌ ಮುತ್ತುಸ್ವಾಮಿ ದೀಕ್ಷಿತರ ರಚನೆಯನ್ನು ಹಾಡಿ ಗಣೇಶನನ್ನು ಸ್ತುತಿಸಿ, ಮುಂದೆ ಶುದ್ಧ ಧನ್ಯಾಸಿ ರಾಗದಲ್ಲಿ ಪ್ರಧಾನವಾಗಿ ಸುಬ್ರಹ್ಮಣ್ಯೇನ ಕೃತಿಯನ್ನು ಮನೋಜ್ಞವಾಗಿ ಆಲಾಪನೆ, ನೆರವಲ್‌ ಹಾಗೂ ವೈಶಿಷ್ಟéಪೂರ್ಣ ಸ್ವರ ಪ್ರಸ್ತಾರಗಳಿಂದ ಅಲಂಕರಿಸಿದುದು ರಂಜಿಸಿತು.ಮಧುರವಾದ ವಯೊಲಿನ್‌ ವಾದನ ಹಿತವಾದ ಭಾವ ನೀಡಿತು. ಮೃದಂಗ ವಾದನವೂ ಪೂರಕವಾಗಿತ್ತು. ನಂತರ ನರಸಿಂಹ ಮಾಮವ… ಆರಭಿ ರಾಗದ ಕೃತಿಯನ್ನು ಭಕ್ತಿಪ್ರಧಾನವಾಗಿ ಪ್ರಸ್ತುತಪಡಿಸಿದರು. ಇದಾದ ಮೇಲೆ ಪುರಂದರ ದಾಸರ ರಚನೆ ನಿನ್ನ ನೋಡಿ ಧನ್ಯನಾದೆನೋ… ದೇವರ ನಾಮವನ್ನು ತೋಡಿ ರಾಗದಲ್ಲಿ ಹಾಡಿದ್ದು ಆಕರ್ಷಣೀಯವಾಗಿ ಮೂಡಿ ಬಂತು. ನಂತರ ತ್ಯಾಗರಾಜರ ಕೃತಿ ಮನಮ್ಯಾಲಕಿಂಚರ ನಳಿನಕಾಂತಿ ರಾಗದಲ್ಲಿ ಮೋಹಕವಾದ ಆಲಾಪನೆಯೊಂದಿಗೆ ಮೂಡಿ ಬಂತು. 

 ವಾಗಧೇಶ್ವರಿ ರಾಗದ ಪರಮಾತುಡು ಕೃತಿಯನ್ನು ಪ್ರಧಾನ ರಾಗವಾಗಿ ಆಯ್ದುಕೊಂಡು ಸುದೀರ್ಘ‌ ಆಲಾಪನೆ, ನೆರವಲ್‌,ಸ್ವರ ಪ್ರಸ್ತಾರಗಳಿಂದ ಸವಿಸ್ತಾರವಾಗಿ ಪ್ರಸ್ತುತ ಪಡಿಸಿದ್ದು ವಿ| ವಿಷ್ಣುದೇವರವರ ಪ್ರಬುದ್ಧ ಗಾಯನ ಮತ್ತು ಪಕ್ವತೆಯನ್ನು ಪರಿಚಯಿಸಿತು. ಗಾಯನದ ಭಾವವನ್ನು ಧ್ವನಿಸಿದ ತನಿ ಆವರ್ತನ ವಿ| ಕಾಂಚನ ಈಶ್ವರ ಭಟ್‌ ಅವರ ವಿದ್ವತ್‌ ಚಾತುರ್ಯದಿಂದ ಲಯಬದ್ಧ ಗತಿಯಲ್ಲಿ ಮೂಡಿಬಂದು ಪರಿಣಾಮಕಾರಿಯಾದ ಛಾಪನ್ನುಂಟುಮಾಡಿ ಮೈನವಿರೇಳಿಸಿತು. ವಿ| ಮತ್ತೂರು ಶ್ರೀನಿಧಿಯವರ ವಯೊಲಿನ್‌ ವಾದನವೂ ಮೆಚ್ಚುಗೆ ಪಡೆಯಿತು.

ನಂತರ ದುರ್ಗಾರಾಗದ ಮಂದಮತಿಯು ನಾನು ದೇವರನಾಮವನ್ನು ಶರಣಾಗತಿಯ ಭಾವದಲ್ಲಿ ಹಾಡಿದ್ದು ಸೂಕ್ಷ್ಮ ಸಂವೇದನೆಗಳನ್ನು ನೀಡಿತು.ಅನಂತರ ನೀಲಾಂಬರಿ ರಾಗದಲ್ಲಿ ಕಾಂತ ನೋಡು ಚೆನ್ನು ಮೆಲ್ಲೆ ಸ್ವಾತಿ ತಿರುನಾಳ್‌ ರಚನೆಯನ್ನು ಭಕ್ತಿಭಾವರಸ ತುಂಬಿ ನಿರೂಪಿಸಿದರು. 

ಕೊನೆಯದಾಗಿ ಪುರಂದರದಾಸರ ರಚನೆಯ ದೇವರನಾಮವನ್ನು ಗೋವಿಂದ ನಿನ್ನ ನಾಮವೇ ಚಂದ ಜನ ಸಮ್ಮೊàದಿನಿ ರಾಗದಲ್ಲಿ ಮನೋಹರವಾಗಿ ಹಾಡಿದರು. ಪವಮಾನದೊಂದಿಗೆ ಈ ಭಕ್ತಿರಸ ಭರಿತ ಭಾವಪೂರ್ಣ ಸಂಗೀತ ಕಛೇರಿ ಸಂಪನ್ನಗೊಂಡಿತು. 

ಕಲಾವಿದರು ಎಲ್ಲಾ ಪ್ರಸ್ತುತಿಯಲ್ಲೂ ತಾರಸ್ಥಾಯಿಯಲ್ಲೂ ಮಂದ್ರಸ್ಥಾಯಿಯಲ್ಲೂ ಸ್ವರವನ್ನು ಕಾಯ್ದುಕೊಂಡು ಸುಲಲಿತವಾಗಿ ಲವಲವಿಕೆಯಿಂದ ನಿರರ್ಗಳವಾಗಿ ಹಾಡಿದ್ದು ಶ್ರೋತೃಗಳಲ್ಲಿ ನೆನಪುಳಿಯುವ ಭಾವ- ಸಂಗೀತದಲೆಗಳನ್ನು ಸೃಷ್ಟಿಸಿತು. 

ಮಮತಾ ದೇವ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.