ಮಾಲಿನಿಯ ದೂತನ ಮುಖದಲ್ಲಿ “ಎರಡು ಮುಖ’ 


Team Udayavani, Jan 18, 2019, 12:30 AM IST

6.jpg

ಯಕ್ಷಗಾನದಲ್ಲಿ ಉತ್ತಮ ಬಣ್ಣಗಾರ ಅಥವಾ ಕಲೆಗಾರನಿಗೆ ತನ್ನ ಕುಂಚ ನೈಪುಣ್ಯವನ್ನು ಸಾದರಪಡಿಸಲು ಇರುವ ಅವಕಾಶವೆಂದರೆ ಕಾಟು ರಕ್ಕಸನ ಬಣ್ಣದ ವೇಷ ಹಾಗೂ ಹಾಸ್ಯಗಾರನ ವೇಷ. ಈ ಪಾತ್ರಗಳಲ್ಲಿ ಕಲಾವಿದ ಚಿತ್ರಕಲೆಯ ಕಲ್ಪನೆಯನ್ನು ಉತ್ತಮವಾಗಿ ಬಿಂಬಿಸಲು ಸಾಧ್ಯವಿದೆ . ಸಮರ್ಥ ಬಣ್ಣದ ವೇಷಧಾರಿಗಳು ಕಾಟುರಕ್ಕಸನ ಪಾತ್ರದಲ್ಲಿ ಈ ಮೊದಲೇ ತಮ್ಮ ಅದ್ಭುತ ಕಲ್ಪನೆಯ ಮೂಲಕ ಬಣ್ಣಗಾರಿಕೆ ಮಾಡುತ್ತಿರುವುದು ಉಲ್ಲೇಖನೀಯ. ಕಟೀಲು ಆರನೇ ಮೇಳದ ಪ್ರಧಾನ ಹಾಸ್ಯಗಾರರಾದ ಪೂರ್ಣೇಶ ಆಚಾರ್ಯರು ಇತ್ತೀಚೆಗೆ ಪುತ್ತೂರಿನಲ್ಲಿ ಜರಗಿದ ಶ್ರೀದೇವಿ ಮಹಾತ್ಮೆಪ್ರಸಂಗದಲ್ಲಿ ಮಾಲಿನಿ ದೂತನಾಗಿ ಅದ್ಭುತ ಬಣ್ಣಗಾರಿಕೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . 

 ಮಾಲಿನಿ ದೂತನು ಸಾಮಾನ್ಯವಾಗಿ ನಿರ್ವಹಿಸುವ ವಿಧಾನವನ್ನೇ ಬದಲಾಯಿಸಿರುವ ಪೂರ್ಣೇಶರ ಬಣ್ಣಗಾರಿಕೆ , ಸಂಭಾಷಣೆ , ನಾಟ್ಯ – ಎಲ್ಲದರಲ್ಲೂ ಪರಂಪರೆ ಮೀರದ ಹೊಸತನವಿದೆ .ಮುಖದಲ್ಲಿ ಫ‌ುಟ್‌ಬಾಲ್‌ನ ಚಿತ್ರ , ಬೋಳು ತಲೆಯ ಮೇಲೆ ಕೊಂಬು , ತಾನೇ ಸ್ವತಃ ಪೀಲಿಯಿಂದ ರಚಿಸಿದ ಕಿರೀಟ , ಕಿವಿ , ಮೂಗುಗಳ ಬಳಕೆ – ಇವೆಲ್ಲಾ ಪೂರ್ಣೇಶರ ಅನ್ವೇಷಣೆಗಳು . 

ಮಾಲಿನಿ ದೂತನಾಗಿ ಪೂರ್ಣೇಶರ ಬಣ್ಣಗಾರಿಕೆ ಗಮನಿಸಿ. ಈ ಫೋಟೋ ಮೇಲಿನಿಂದ ಕೆಳಗೆ ತಿರುಗಿಸಿ ನೋಡಿ . ಬೇರೆಯೇ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ . ಮುಖದಲ್ಲಿ ಉಲ್ಟಾ ಬಣ್ಣಗಾರಿಕೆ ಮಾಡಿ ಮೇಲಿನಿಂದ ನೋಡಿದರೂ , ಕೆಳಗಿನಿಂದ ನೋಡಿದರೂ ಬೇರೆ ಬೇರೆ ಮುಖವೇ ಕಾಣುವಂತೆ ಮುಖವರ್ಣಿಕೆ ಮಾಡಿದ್ದಾರೆ . ನಾವು ಇಂಥಹ ಚಿತ್ರಗಳನ್ನು ನೋಡಿದ್ದೇವೆ . ಆದರೆ  ಇಂಥದ್ದನ್ನು ಮಾಡಲೂ ಸಾಧ್ಯ ಎಂದು ಪೂರ್ಣೇಶರು ತಮ್ಮದೇ ಕಲ್ಪನೆಯ ಮೂಲಕ ತೋರಿಸಿದ್ದಾರೆ . ಹಾಸ್ಯ ಪಾತ್ರಗಳ ಬಣ್ಣಗಾರಿಕೆಯಲ್ಲಿ ಈ ತರದ ಸೃಜನಶೀಲತೆ ಪ್ರಥಮ ಎನ್ನಬಹುದು . ಹಿಂದೆ ದಿ.ವಿಟ್ಲ ಗೋಪಾಲಕೃಷ್ಣ ಜೋಷಿಯವರು ಹಾಸ್ಯ ಪಾತ್ರಗಳಲ್ಲಿಯ ವೇಷಭೂಷಣಗಳಲ್ಲಿ ಆಮೂಲಾಗ್ರ ಬದಲಾವಣೆ ತಂದವರು . ತಮ್ಮ ಮುಖವನ್ನು ಅಗಲವಾಗಿ ಕಾಣುವಂತೆ ವಿಶಿಷ್ಠವಾದ ಬಣ್ಣಗಾರಿಕೆ ಮಾಡುತ್ತಿದ್ದರು. ಆದರೆ ಇದು ಅದಕ್ಕಿಂತಲೂ ಭಿನ್ನವಾಗಿದೆ. ಪೂರ್ಣೇಶರ ಈ ಪಾತ್ರ ಯಕ್ಷಗಾನದಲ್ಲಿಯ ಸೃಜನಶೀಲತೆಯ ಬಣ್ಣಗಾರಿಕೆಗೆ ಇನ್ನೊಂದು ಉದಾಹರಣೆ.ಹೊಸತನದ ಈ ಬಣ್ಣಗಾರಿಕೆಗೆ ಅವರು ಸುಮಾರು 30 ನಿಮಿಷ ವ್ಯಯಿಸಿ¨ªಾರೆ. ಮುಖದಲ್ಲಿರುವ ನಿಜವಾದ ಕಣ್ಣನ್ನು ಬಣ್ಣದ ಮೂಲಕ ಮರೆಮಾಚಿ , ನೈಜ ಕಣ್ಣಿನ ಕೆಳಗೆ ಬಣ್ಣದಲ್ಲೇ ಕಣ್ಣನ್ನು ಚಿತ್ರಿಸಿದ್ದಾರೆ. ರಂಗಸ್ಥಳದಲ್ಲಿ ಕಣ್ಣನ್ನು ಮುಚ್ಚಿಯೇ ಸುಮಾರು 15 ನಿಮಿಷಗಳ ಕಾಲ ನಾಟ್ಯಾಭಿನಯ ನೀಡಿದ್ದಾರೆ .  

 ಎಂ .ಶಾಂತರಾಮ ಕುಡ್ವ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.