ಹಾಸ್ಯದ ಗಣಿ ಕಿನ್ನಿಗೋಳಿಗೆ ಅರಾಟೆ ಪ್ರಶಸ್ತಿ 


Team Udayavani, Jan 25, 2019, 12:30 AM IST

w-7.jpg

ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ ಪಡೆದಿರುವ ಕಿನ್ನಿಗೋಳಿ ಮುಖ್ಯಪ್ರಾಣ ಅವರು 2019ನೇ ಸಾಲಿನ ದಿ|ಅರಾಟೆ ಮಂಜುನಾಥ ಸಂಸ್ಮರಣೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ದಿ| ಅರಾಟೆ ಮಂಜುನಾಥ ಅವರ ಹೆಸರಿನಲ್ಲಿ ಕುಟುಂಬ ವರ್ಗದ ಸಂಯೋಜನೆಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈ ಬಾರಿ ಜ. 30ರಂದು ಬಿದ್ಕಲ್‌ಕಟ್ಟೆ ಸಮೀಪದ ಗಾವಳಿಯಲ್ಲಿರುವ ಅರಾಟೆಯವರ ಮನೆ ಯಕ್ಷಕುಟೀರದ ಸಮೀಪ ನಡೆಯಲಿದೆ. 

ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಕವಿ ಡಾ| ಎನ್‌.ನಾರಾಯಣ ಶೆಟ್ಟಿಯವರನ್ನು ಯಕ್ಷ ಗುರುಗಳಾಗಿ ಸ್ವೀಕರಿಸಿ, ಸುರತ್ಕಲ್‌ ಸೂರಪ್ಪ ಶೆಟ್ಟಿಗಾರ್‌ ಅವರಿಂದ ತೆಂಕಿನ ಹೆಜ್ಜೆಗಾರಿಕೆಯನ್ನು ಕಲಿತು ಯಕ್ಷಪಯಣವನ್ನು ಆರಂಭಿಸಿದರು. ಅನಂತರ ಮಿಜಾರು ಆಣ್ಣಪ್ಪ ಅವರಿಂದ ಹಾಸ್ಯದ ತರಬೇತಿ, ಕವತ್ತಾರು ದಿ| ಸೀತಾರಾಮ್‌ ಶೆಟ್ಟಿಗಾರ್‌ ಅವರಿಂದ ಅರ್ಥಗಾರಿಕೆಯ ತರಬೇತಿ ಪಡೆದು ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು. ತೆಂಕು ತಿಟ್ಟಿನ ಕುರಿತು ಸಂಪೂರ್ಣ ಒಲವು ಹೊಂದಿದ್ದ ಇವರಿಗೆ ಬಡಗಿನ ಹೆಜ್ಜೆಗಾರಿಕೆಯನ್ನು ಪರಿಚಯಿಸಿದವರು ದಿ|ಬ್ರಹ್ಮಾವರ ರಾಮ ನಾೖರಿಯವರು. ಹೀಗೆ ಹಂತ-ಹಂತವಾಗಿ ಬೆಳೆದು ತೆಂಕು-ಬಡಗು ಎರಡು ತಿಟ್ಟಿನ ಸಮರ್ಥ ಕಲಾವಿದರಾಗಿ ಇವರು ರೂಪುಗೊಂಡರು. ಆರಂಭದಲ್ಲಿ 4 ವರ್ಷ ಹವ್ಯಾಸಿ ಕಲಾವಿದರಾಗಿ ಸೇವೆಸಲ್ಲಿಸಿ ಅನಂತರ ಕಟೀಲು ಮೇಳದ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು. 

ಇರಾ ಸೋಮನಾಥೇಶ್ವರ ಮೇಳ, ಸುಬ್ರಹ್ಮಣ್ಯ ಮೇಳ, ಮಂತ್ರಾಲಯ ಮೇಳ, ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಕುಮುಟ ಮೇಳ, ಕದ್ರಿ ಮೇಳ, ಮಂದಾರ್ತಿ ಮೇಳ ಹಾಗೂ ಇದೀಗ ಮತ್ತೆ ಕಟೀಲು ಮೇಳದಲ್ಲಿ 78ರ ಇಳಿವಯಸ್ಸಿನಲ್ಲೂ ಯಕ್ಷಪಯಣವನ್ನು ಮುಂದುವರಿಸಿದ್ದಾರೆ. ಸುಮಾರು ಮೂರ್‍ನಾಲ್ಕು ತಲೆಮಾರುಗಳ ಪ್ರಸಿದ್ಧ ಕಲಾವಿದರ ಒಡನಾಟ ಇವರಿಗಿದ್ದು, ಅವರಿಗೆಲ್ಲ ಗುರುವಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಹಿರಿಯರಾದ ನರಸಿಂಹ ಭಾಗವತರು, ಕಾಳಿಂಗ ನಾವಡರು, ಕಡತೋಕ ಮಂಜುನಾಥ ಭಾಗವತ, ಸುಬ್ರಹ್ಮಣ್ಯ ಧಾರೇಶ್ವರ, ಶಿರಿಯಾರ ಮಂಜುನಾಯ್ಕ, ಮುರೂರು ದೇವರು ಹೆಗ್ಡೆ, ಜಳವಳ್ಳಿ ವೆಂಕಟೇಶ್‌ ರಾವ್‌, ಕುಂಜಾಲು ರಾಮಕೃಷ್ಣ ಇವರ ಮೆಚ್ಚಿನ ಕಲಾವಿದರು. 

ಇದರ ಜತೆಗೆ ಆರು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ ಕೆಲವೇ ಕೆಲವು ಕಲಾವಿದರಲ್ಲಿ ಇವರೊಬ್ಬರು ಎನ್ನುವ ಹೆಗ್ಗಳಿಕೆ ಇವರಿಗಿದ್ದು, ಈ ಯಕ್ಷ ಪಯಾಣದಲ್ಲಿ ಸಾವಿರಾರು ಪಾತ್ರಗಳಿಗೆ ಇವರು ಜೀವ ತುಂಬಿದ್ದಾರೆ. ಆದರೆ ನಾಗಶ್ರೀಯ ಕೈರವನ ಪಾತ್ರ ಇವರಿಗೆ ಅತ್ಯಂತ ತೃಪ್ತಿ ತಂದ ಪಾತ್ರವಾಗಿದೆ. ಜತೆಗೆ ನಳದ ಮಯಂತಿಯ ಬಾವುಕ, ವಿಜಯ, ರಜಕ, ಶನೀಶ್ವರ ಮಹಾತ್ಮೆಯ ಶನಿಪೀಡಿತ ವಿಕ್ರಮ, ಚೆಲುವೆ ಚಿತ್ರಾವತಿಯ ಅಡುಗೋಲಜ್ಜಿ ಹೀಗೆ ಹಲವಾರು ಪಾತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.