ಕುಂಭಮೇಳದಲ್ಲಿ ಸರಯೂ ಯಕ್ಷವೈಭವ 


Team Udayavani, Feb 8, 2019, 12:30 AM IST

5.jpg

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ “ಗುರುದಕ್ಷಿಣೆ’ ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಈ ದೇಶದ ಬಹುರೂಪದ ಕಲೆಗಳು ಕುಂಭಮೇಳದಲ್ಲಿ ಮೇಳೈಸಿಕೊಂಡು ದೇಶದ ಸಾಂಸ್ಕೃತಿಕ ವೈಭವವನ್ನು ಸಂಪನ್ನಗೊಳಿಸಿದವು. ಇನ್ನೂ ಬಹು ದಿನಗಳ ಕಾಲ ನಡೆಯುವ ಅತ್ಯಂತ ವೈಭವದ ಕುಂಭಮೇಳದಲ್ಲಿ ಯಕ್ಷಗಾನ ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು ಮಕ್ಕಳ ಮೇಳದ ಭಾಗ್ಯ. ಗಂಗಾನದೀ ತೀರದಲ್ಲಿ, ತ್ರಿವೇಣಿ ಸಂಗಮದಲ್ಲಿ ನಮ್ಮ ಕಲೆಯ ಪ್ರದರ್ಶನದ ಭಾಗ್ಯ ಪಡೆದ ಚಿಣ್ಣರು ಉಲಿದರು, ನಲಿದರು, ಕುಣಿದರು. 

ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿಯವರ ನೇತೃತ್ವದಲ್ಲಿ ಸರಯೂ ತಂಡವು “ಗುರುದಕ್ಷಿಣೆ’ ಎಂಬ ಕಥಾ ಭಾಗವನ್ನು ಪ್ರದರ್ಶಿಸಿತು. ಕೃಷ್ಣ ಬಲರಾಮರು ಗುರು ಸಾಂದೀಪನಿ ಮಹರ್ಷಿಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 64 ದಿನಗಳಲ್ಲಿ ಶಿಕ್ಷಣ ಪಡೆದು ಊರಿಗೆ ತೆರಳಲು ಸಿದ್ಧರಾದಾಗ, ಗುರುದಕ್ಷಿಣೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. 

ಗುರು ಪತ್ನಿಯ ಮೂಲಕ ತಿಳಿದು ಬಂದ ವಿಚಾರದಂತೆ ಕಳೆದ ಗುರು ಪುತ್ರನನ್ನು ಮರಳಿ ಪಡೆಯುವುದಕ್ಕಾಗಿ ಗುರುವಿನ ಆಶೀರ್ವಾದ ಪಡೆದು ತೆರಳುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ವಾರಣಾಸಿಯ ಸಂಗಮ ಕ್ಷೇತ್ರಕ್ಕೆ ಬಂದು, ವರುಣದೇವನಲ್ಲಿ ವಿಚಾರಿಸುತ್ತಾರೆ. ಅವನು ಸಮುದ್ರಗಳ್ಳ ಪಂಚಜನನ ಬಗ್ಗೆ ತಿಳಿಸುತ್ತಾನೆ. ಕೃಷ್ಣನು ಪಂಚಜನನನ್ನು ಕೊಂದು, ಅವನ ಕೊನೆಯಾಸೆಯಂತೆ ಆತನ ಬೆನ್ನುಮೂಳೆಯಿಂದ ಶಂಖವೊಂದನ್ನು ರಚಿಸಿ, ಅದಕ್ಕೆ “ಪಾಂಚಜನ್ಯ’ ಎಂದು ಹೆಸರಿಟ್ಟು ತನ್ನ ಕೈಯಾಯುಧ ಭೂಷಣವಾಗಿ ಸ್ವೀಕರಿಸುತ್ತಾನೆ. ನಂತರ ಯಮಲೋಕಕ್ಕೆ ಬಂದು, ಗುರುಪುತ್ರನ ಬಗ್ಗೆ ಕೇಳಿದ. 

ಯಮ ನಿರಾಕರಿಸಿದಾಗ ಅವನಿಗೆ ವಿಶ್ವರೂಪವನ್ನು ತೋರುತ್ತಾನೆ. ಆಗ ಯಮಧರ್ಮನು ನಿಜ ಸಂಗತಿಯನ್ನರಿತು ಆತ್ಮಸ್ವರೂಪದಲ್ಲಿ ಗುರು ಪುತ್ರನನ್ನು ನೀಡಿ ಕಳುಹಿಸುತ್ತಾನೆ. ಕೃಷ್ಣ ಬಲರಾಮರು ಬಂದು ಗುರು ದಕ್ಷಿಣೆಯಾಗಿ ನೀಡುವುದೇ ಈ ಕಥೆಯ ಸಾರಾಂಶ. ವಾರಣಾಸಿಯಲ್ಲೇ ಈ ಕಥೆ ಜರುಗಿದ್ದುದ್ದರಿಂದ ಜನರಲ್ಲಿ ವಾಸ್ತವಿಕತೆಯನ್ನು ತಂದಿತು. 

ರವಿ ಅಲೆವೂರಾಯರ ನಿರ್ದೇಶನದ ಈ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸಂಜೀವ ಕಜೆಪದವು, ಚೆಂಡೆಯಲ್ಲಿ ಪ್ರಜ್ಞೆàಶ ಭಟ್‌ ಮದ್ದಳೆಯಲ್ಲಿ ಕೃಷ್ಣಯ್ಯ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ರವಿ ಅಲೆವೂರಾಯ ವರ್ಕಾಡಿ, ಹರ್ಷಿತ್‌ ಶೆಟ್ಟಿ, ಅಶ್ವಿ‌ತ್‌ ಶೆಟ್ಟಿ, ಅಕ್ಷಯ್‌ ಸಿ.ಪೂಜಾರಿ, ನಿಖೀಲ್‌ ಕೋಟ್ಯಾನ್‌, ವಿಜಯಲಕ್ಷ್ಮೀ ಎಲ….ನಿಡ್ವಣ್ಣಾಯ, ಮಲ್ಲಿಕಾ ಜೀವನ್‌ ಸಹಕರಿಸಿದರು. 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.