ಪ್ರೌಢಿಮೆ ಮೆರೆದ ಅಂಬಲಪಾಡಿ ಯಕ್ಷಗಾನ ಸಂಘದವರ ಪ್ರದರ್ಶನ


Team Udayavani, Feb 8, 2019, 12:30 AM IST

9.jpg

ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ ಗಟ್ಟಿಯಾಗಿ ನೆಲೆಗೊಳ್ಳುವುದರ ಭರವಸೆ ಹುಟ್ಟಿಸಿತು.

ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯವರು ಇತ್ತೀಚಿಗೆ ಅಂಬಲಪಾಡಿಯಲ್ಲಿ 61ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಸುಧನ್ವಕಾಳಗ- ಹಿಡಿಂಬಾ ವಿವಾಹ – ಅಂಗಾರವರ್ಮ ಕಾಳಗ ಶ್ರದ್ಧೆಯಿಂದ ಯಕ್ಷಗಾನ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗಬಲ್ಲರೆಂಬುವುದನ್ನು ದೃಢಪಡಿಸಿತು.
 

ಮೊದಲ ದಿನ ಪ್ರದರ್ಶಿಸಿದ ಸುಧನ್ವ ಕಾಳಗ ಪ್ರಸಂಗ ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ ಗಟ್ಟಿಯಾಗಿ ನೆಲೆಗೊಳ್ಳುವುದರ ಭರವಸೆ ಹುಟ್ಟಿಸಿತು. ಸುಗರ್ಭ (ದೀಪಾ), ಕುವಲೆ(ಮಾನ್ಯ) ಪಾತ್ರಧಾರಿಗಳು ಪಾತ್ರಗಳಿಗೆ ನ್ಯಾಯ ಒದಗಿಸಿದರು. ಸುಧನ್ವ ಪಾತ್ರಧಾರಿ (ಕೆ.ಜಿ. ದೀಪ್ತ) ಪ್ರವೇಶದಿಂದಲೇ ಆಸಕ್ತಿ ಬೆಳೆಸಿದರಲ್ಲದೆ ಪ್ರಸಂಗದುದ್ದಕ್ಕೂ ಚಪ್ಪಾಳೆ ಗಿಟ್ಟಿಸಿಕೊಂಡರು. ಪ್ರಭಾವತಿ(ದೀಕ್ಷಾ) ಸುಧನ್ವನ ಮನಗೆಲ್ಲುವಲ್ಲಿ ಯಶಸ್ವಿಯಾಗುವಂತೆ ಅಭಿನಯಿಸಿದ್ದಲ್ಲದೆ ಪ್ರಭಾವತಿ ಸುಧನ್ವರ ಸಂವಾದ ಪ್ರಸಂಗದ ಗೆಲುವಿಗೆ ಕಾರಣವಾಯಿತು. ಅರ್ಜುನ (ಅರವಿಂದ) ತಮ್ಮ ಗತ್ತುಗಾರಿಕೆಯಿಂದ ಹಿರಿಯ ಕಲಾವಿದರನ್ನು ನೆನಪಿಗೆ ತಂದರು. ಅರ್ಜುನ ಹಾಗೂ ಸುಧನ್ವರ ಯುದ್ಧ ಸಂದರ್ಭದ ನೃತ್ಯ ಸಂಭಾಷಣೆ ಬಹುಕಾಲ ನೆನಪಿನಲ್ಲಿರುವಂತೆ ಮಾಡಿತು. ಕೃಷ್ಣ ಪಾತ್ರಧಾರಿಯ ಪ್ರವೇಶದಿಂದ ಪ್ರಸಂಗಕ್ಕೆ ಇನ್ನಷ್ಟು ಗೌರವ ಬಂದಿತಲ್ಲದೆ ಕೊನೆಗೆ ಭಾರೀ ಚಪ್ಪಾಳೆ ಬಾಲಕಲಾವಿದರು ಯಶಸ್ವಿಯಾದುದಕ್ಕೆ ಸಾಕ್ಷಿ ನೀಡಿತು. ಬಾಲಕಲಾವಿದರಿಗೆ ಉತ್ತಮ ತರಬೇತಿ ನೀಡಿದ ಕೆ.ಜೆ. ಗಣೇಶ್‌ರವರ ಭಾಗವತಿಕೆ, ಕೆ.ಜೆ. ಸುಧೀಂದ್ರರ ಮದ್ದಳೆ , ಕೆ.ಜೆ. ಕೃಷ್ಣರವರ ಚೆಂಡೆ ಮುದ ನೀಡಿತು.ಆರಂಭಕ್ಕೆ ಮುನ್ನ ಪ್ರದರ್ಶಿಸಿದ ಪೂರ್ವರಂಗ, ಒಡ್ಡೋಲಗ ಕುಣಿತ ಮರೆಯಾಗುತ್ತಿರುವ ಕಲಾಪ್ರಕಾರವನ್ನು ಮತ್ತೆ ನೆನಪಿಸಿತು. 

ಎರಡನೇ ದಿನ ಪ್ರದರ್ಶಿತವಾದ ಹಿಡಿಂಬಾ ವಿವಾಹ- ಅಂಗಾರವರ್ಮ ಕಾಳಗ ಪ್ರಸಂಗವು ಸಂಘದ ಬಗ್ಗೆ ಗೌರವವನ್ನು ಇನ್ನಷ್ಟು ಹೆಚ್ಚಿಸಿತು. ಪಾಂಡವರ ಪರಂಪರಾಗತ ಒಡ್ಡೋಲಗದಿಂದಲೇ ಪ್ರರಂಭವಾದ ಕಲಾಪ್ರೌಢಿಮೆಯನ್ನು ಪ್ರಸಂಗದುದ್ದಕ್ಕೂ ಎಲ್ಲ ಕಲಾವಿದರು ಅಂತ್ಯದವರೆಗೂ ಉಳಿಸಿಕೊಂಡರು ಪಂಚಪಾಂಡವರ ಪಾತ್ರಧಾರಿಗಳೆಲ್ಲರೂ ತಮ್ಮ ಪಾತ್ರದ ಔಚಿತ್ಯಕ್ಕನುಗುಣವಾಗಿ ಅಭಿನಯಿಸಿದರು. ಅರಗಿನ ಅರಮನೆ ಭಸ್ಮವಾದ ಬಳಿಕ ಭೀಮ (ರಮಣ ಆಚಾರ್ಯ) ತಮ್ಮನವರನ್ನೆಲ್ಲ ಹೊತ್ತುಕೊಂಡು ಹಿಡಿಂಬಾ ವನಕ್ಕೆ ಸಾಗಿಸಿ ಅವರನ್ನೇ ಕಾಯುವ ದೃಶ್ಯಾಭಿನಯವು ಪ್ರೇಕ್ಷಕರ ಕುತೂಹಲ ಹೆಚ್ಚಿಸಿತು. ಹಿಡಿಂಬಾಸುರನ ಪ್ರವೇಶದಿಂದ ಪ್ರಸಂಗಕ್ಕೆ ಹೊಸ ಕಳೆ ಬಂದಿತು. ಹಿಡಿಂಬಾಸುರ ಪಾತ್ರಧಾರಿಯ (ಕೆ. ಅಜಿತ್‌ ಕುಮಾರ್‌) ಅಬ್ಬರದ ಪ್ರವೇಶ ಹಾಗೂ ಪ್ರಸಂಗದುದ್ದಕ್ಕೂ ತೋರಿದ ಅಭಿನಯ ಬಣ್ಣದ ವೇಷದ ಹಿರಿಯ ಕಲಾವಿದರನ್ನು ನೆನಪಿಸಿತು. ಹಿಡಿಂಬೆ (ಪ್ರವೀಣ್‌ ಉಪಾಧ್ಯಾಯ) ಲವಲವಿಕೆಯಿಂದ ಅಭಿನಯಿಸಿ ನೃತ್ಯ ಸಂಭಾಷಣೆಗಳೆರಡರಲ್ಲಿಯೂ ಮನಗೆದ್ದರು. ಮಾಯಾ ಹಿಡಿಂಬೆ (ಜಯ ಕೆ.) ಹಿತಮಿತವನ್ನರಿತು ಅಭಿನಯಿಸಿದರು. ಭೀಮ ಹಾಗೂ ಹಿಡಿಂಬಾಸುರ ಯುದ್ಧ ಕೊನೆಗೆ ಹಿಡಿಂಬೆಯನ್ನು ಭೀಮ ವಿವಾಹವಾಗುವ ಸಂದರ್ಭ ಕಲಾವಿದರ ಪ್ರೌಢಿಮೆ ನಿದರ್ಶನವಾಗಿತ್ತು. ವೇಷ ಮರೆಸಿ ಪಾಂಡವರು ರಾತ್ರಿ ತೆರಳುವ ದೃಶ್ಯವಂತೂ ಮನತಟ್ಟಿತು. ಗಂಧರ್ವ ರಾಜ ಅಂಗಾರವರ್ಮನ (ಜಗದೀಶ ಆಚಾರ್ಯ) ಪ್ರವೇಶ ಪ್ರಸಂಗಕ್ಕೆ ಹೊಸ ಹುಮ್ಮಸ್ಸು ಹುಟ್ಟಿಸಿತು. ಅಂಗಾರವರ್ಮನ ಪಾತ್ರಧಾರಿಯಂತೂ ವಿವಿಧ ಬಗೆಯ ನೃತ್ಯ ಹಾಗೂ ಅಭಿನಯಗಳಿಂದ ಮನಗೆದ್ದರು. ಅಂಗಾರವರ್ಮ ರಾತ್ರಿವೇಳೆ ಭೂಲೋಕಕ್ಕೆ ಬಂದು ಸಖೀಯರೊಂದಿಗೆ ಜಲಕ್ರೀಡೆಯಾಡುವ ಸಂದರ್ಭ ಪ್ರಯಾಣದಲ್ಲಿದ್ದ ಪಾಂಡವರನ್ನು ಕಂಡು ಯುದ್ಧಕ್ಕಿಳಿದಾಗ ಅರ್ಜುನನ (ಮುರಲಿ ಕಡೆಕಾರ್‌) ವಿಶೇಷ ಹಳೆ ಶೈಲಿಯ ನೃತ್ಯ ಹಾಗೂ ಸಂಭಾಷಣೆಗಳಿಂದ ಪ್ರಸಂಗದ ಮುನ್ನಡೆಗೆ ಹೊಸ ಆಯಾಮ ಸಿಕ್ಕಿದಂತಾಯಿತು. ಅರ್ಜುನನ ಕಾಳಗದ ನೃತ್ಯಶೈಲಿ ಸಂಭಾಷಣೆಗಳನ್ನು ಹಿಂದಿನ ಕಲಾ ಬಯಲಾಟದ ಮೇಳಗಳ ಕಲಾವಿದರನ್ನೇ ಜ್ಞಾಪಕಕ್ಕೆ ತಂದಿತು. ಅಂಗಾರವರ್ಮನ ಸೋಲಿನಿಂದ ಮುಕ್ತಾಯಗೊಂಡು ಪಾಂಡವರ ಪ್ರಯಾಣದ ಮುನ್ನಡೆಗೆ ಮಂಗಳ ಹಾಡಿದ ಪ್ರಸಂಗವನ್ನು ಪ್ರೇಕ್ಷಕರು ಕೊನೆಯವರೆಗೂ ವೀಕ್ಷಿಸಿದ್ದು ಪ್ರಸಂಗದ ಯಶಸ್ವಿಗೆ ಸಾಕ್ಷಿಯಾದುದರಲ್ಲಿ ಸಂಶಯವಿಲ್ಲ. ಕೆ.ಜೆ. ಸಹೋದರರ ಹಿಮ್ಮೇಳ ಪ್ರಸಂಗದ ಯಶಸ್ವಿಗೆ ಮುಖ್ಯ ಕಾರಣವಾಗಿತ್ತು.     

ಬಾ. ಸಾಮಗ 

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.