ಮನಸೂರೆಗೊಂಡ ತೆಂಕು-ಬಡಗು ಗಾನ ವೈಭವ


Team Udayavani, Feb 22, 2019, 12:30 AM IST

2.jpg

ಕಾರ್ಕಳ ಮಾರಿಗುಡಿ ಆವರಣದಲ್ಲಿ ಇತ್ತೀಚೆಗೆ ಕಾರ್ಕಳದ ಯಕ್ಷ ಕಲಾರಂಗದ ಆಸರೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ಇದರ ಕಾರ್ಕಳ ಘಟಕದ ತೃತೀಯ ವಾರ್ಷಿಕೋತ್ಸವದಂಗವಾಗಿ ನಡೆದ ತೆಂಕು- ಬಡಗು ಗಾನ ವೈಭವ ಹೃನ್ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. 

“ವೀರಮಣಿ ಕಾಳಗ’ದ ಒಡ್ಡೋಲಗದ ಸನ್ನಿವೇಶದ ತುರಗವನ್ನು ಶೃಂಗರಿಸಿ ಪದ್ಯದೊಂದಿಗೆ ಬಡಗಿನ ಸುರೇಶ ಶೆಟ್ಟಿ ಶಂಕರ ನಾರಾಯಣ, ರಾಮಕೃಷ್ಣ ಹೆಗಡೆ ಹಿಲ್ಲೂರುರವರ ಗಾನ ವೈಭವವನ್ನು ಆರಂಭಿಸಿ ಮುಂದೆ ತೆಂಕಿನಲ್ಲಿ ಕು| ಕಾವ್ಯ ಶ್ರೀ ಅಜೇರು ಇವರು ಮಾಗಧ ವಧೆ ಪ್ರಸಂಗದ ಪೊಡವಿ ಪತಿ ಪದ್ಯವನ್ನು ಹೃದಯಂಗವಾಗಿ ಅನಾವರಣಗೊಳಿಸಿದರು. ಹೊಸ್ತೋಟ ಮಂಜುನಾಥ ಭಾಗವತರ ರಾಮ ನಿರ್ಯಾಣ ಪ್ರಸಂಗದ ಕೇಳಯ್ಯ ರಾಮ ಪದ್ಯದ ಸಾಲುಗಳನ್ನು ರಾಮಕೃಷ್ಣ ಹಿಲ್ಲೂರು ಹಾಡಿದರು. 

“ದûಾಧ್ವರ’ ಪ್ರಸಂಗದ “ನೋಡಿ ದ್ವಿಜರು ಪೋಪುದು’ ಎಂಬ ಪದ್ಯವನ್ನು ಸತ್ಯನಾರಾಯಣ ಪುಣಿಂಚಿತ್ತಾಯರು ಹಾಡಿದರು. ಸುರೇಶ ಶೆಟ್ಟಿ, ರಾಮಕೃಷ್ಣ ಹಿಲ್ಲೂರು “ಶಶಿಪ್ರಭ ಪರಿಣಯ’ದ “ಯಾರಿವನು ಸುಂದರ ಪುರುಷ’, ” ರತ್ನಾವತಿ ಕಲ್ಯಾಣ’ದ “ಹೇಗೆ ಪೇಳುವರೆ ಸಖೀ’, “ಭೀಷ್ಮಾರ್ಜುನ’ದ “ಶ್ರೀ ಮನೋಹರ’ ಪದ್ಯವನ್ನು ಸೊಗಸಾಗಿ ಹಾಡಿ ಕಳೆಗಟ್ಟುವಂತೆ ಮಾಡಿದರು. ಅಗರಿ ಶ್ರೀನಿವಾಸ ಭಾಗವತರ “ಶ್ರೀದೇವಿ ಮಹಾತ್ಮೆ ಪ್ರಸಂಗ’ ವೀರರಸದ ಕದಂಬ ವನದ ಸನ್ನಿವೇಶದ “ಶುಂಭನ’ ಕುರಿತಾಗಿ ಭಾಮಿನಿಯಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಕಾವ್ಯಶ್ರೀ ಅಜೇರು (ತೆಂಕು) ರಾಮಕೃಷ್ಣ ಹೆಗಡೆ ಹಿಲ್ಲೂರು ಸುರೇಶ ಶೆಟ್ಟಿ (ಬಡಗು) ಒಟ್ಟಾಗಿ ಹಾಡಿ ತೆಂಕು ಬಡಗುಗಳ ಹಾಡಿನ ವೈಭವ ಕೇಳುಗರ ಕಿವಿಯಾಲಿಗಳಿಗೆ ಕರ್ಣನಂದಕರವಾಗಿತ್ತು. ಕಾವ್ಯಶ್ರೀ ಅಜೇರು ಇವರು “ಮಾನಿಷಾ’ದ ಪ್ರಸಂಗದ ಶೃಂಗಾರ ರಸದ ಪದ್ಯ “ಪರಮಲಕ್ಷ್ಯವ‌ ತೊರೆದು’ ಸತ್ಯನಾರಾಯಣ ಪುಣಿಂಚಿತ್ತಾಯರ ನರಕಾಸುರ ವಧೆಯ “ಹರುಷವಾಯಿತು’ ಪದ್ಯವನ್ನು ಬಡಗಿನ ಶೈಲಿಯಲ್ಲಿ ಹಾಡಿ ತೆಂಕು- ಬಡಗು ತಿಟ್ಟುಗಳ ಸಮನ್ವತೆ‌ಯ ಭಾಗವತರಾಗಿ ಕಾಣಿಸಿಕೊಂಡರು. ಕೊನೆಯಲ್ಲಿ “ಸ್ಮರಿಸಯ್ಯ ರಾಮ ಮಂತ್ರ’ವ ಪದ್ಯ ಪ್ರೇಕ್ಷಕರ ತಲೆದೂಗವಂತೆ ಮಾಡಿ ಪ್ರೇಕ್ಷಕರ ಕೋರಿಕೆಯ ಮೇರೆಗೆ “ಉಂದು ತುಳುನಾಡ್‌’ ಮತ್ತು “ನಾಗತಂಬಿಲ’ ತುಳು ಪ್ರಸಂಗದ “ತೆರಿಯೊಡು’ ಪದ್ಯವನ್ನು ತುಳುವಿನಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಕಾವ್ಯಶ್ರೀಯವರು ಹಾಡಿ ಗಾನ ವೈಭವಕ್ಕೆ ತೆರೆಯೆಳೆದರು. 

ಬಡಗಿನ ಚಂಡೆಯಲ್ಲಿ ಕೋಟ ಶಿವಾನಂದರು ಏಕ ಕಾಲದಲ್ಲಿ ನಾಲ್ಕು ಚೆಂಡೆ ಹಾಗೂ ತೆಂಕಿನ ಚೆಂಡೆಯಲ್ಲಿ ಮಿಜಾರು ದೇವಾನಂದ ಭಟ್‌ ಬೆಳುವಾಯಿ ಇವರು ಆರುಚೆಂಡೆ ಬಾರಿಸಿ ಕೈಚಳಕ ಮೆರೆದರು. ತೆಂಕಿನ ಮೃದಂಗದಲ್ಲಿ ಯಕ್ಷಗುರು ಪದ್ಮನಾಭ ಉಪಾಧ್ಯಾಯ ಉಡುಪಿ ಹಾಗೂ ಬಡಗಿನ ಮದ್ದಳೆಯಲ್ಲಿ ಶಶಿ ಆಚಾರ್ಯ ಬೆಳ್ಕಳೆ ಉಡುಪಿ, ಚಕ್ರತಾಳದಲ್ಲಿ ಕಲ್ಲಡ್ಕದ ರಾಜೇಂದ್ರ ಕೃಷ್ಣ ಸಹಕರಿಸಿದರು.

ಕೆ. ದಯಾನಂದ ಪೈ 

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.