ಗ್ರಾಮೀಣ ಭಾಗದಲ್ಲಿ ಮೇಳೈಸಿದ ಮಹಿಳೆಯರ ಯಕ್ಷ ವೈಭವ 


Team Udayavani, Mar 22, 2019, 12:30 AM IST

shirur-yakshagana-2.jpg

ಶಿರೂರಿನ ಪದವಿ ಪೂರ್ವ ಕಾಲೇಜು ವೇದಿಕೆಯಲ್ಲಿ ನಡೆದ ಜೆಸಿಐ ಮಹಿಳೆಯರ ಯಕ್ಷಗಾನ ಕಲಾಸಕ್ತರ ಮನಸೂರೆಗೊಂಡಿದ್ದು ಮಾತ್ರವಲ್ಲದೆ ಯಕ್ಷಗಾನದ ಗಂಧಗಾಳಿಯು ತಿಳಿಯದ ಮೊದಲ ಬಾರಿಗೆ ಹೆಜ್ಜೆಕಟ್ಟಿ ಕುಣಿದ ನಾರಿಯರ ಉತ್ಸಾಹಕ್ಕೆ ಸಭಿಕರು ಬೇಷ್‌ ಎಂದರು. 

ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಇಲ್ಲಿನ ಜೆಸಿಐ ಸಂಸ್ಥೆ ಈ ಬಾರಿ ಜೆಸಿರೇಟ್‌ಗಳು ಯಕ್ಷಗಾನ ಪ್ರದರ್ಶಿಸುವ ದೈರ್ಯ ಮಾಡಿತ್ತು.ಬಹುತೇಕವಾಗಿ ಕಲೆಯಲ್ಲಿ ಅಷ್ಟೇನೂ ತೊಡಗಿಸಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿರುವ ಇಲ್ಲಿನ ಸ್ತ್ರೀಯರು ಇತ್ತೀಚಿನ ಯಕ್ಷಗಾನದ ಹೊಸತನಗಳ ಆಸಕ್ತಿಯಿಂದ ಈ ಪ್ರದರ್ಶನದ ಮನಸ್ಸು ಮಾಡಿದ್ದರು.ಗುರುಗಳಾದ ಶ್ರೀಧರ ದೇವಾಡಿಗ ಬಿಜೂರು ತರಬೇತಿ ನೀಡಿದ್ದರು.ಮಾಯಾಪುರಿ ಪ್ರಸಂಗ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಬಾಲ ಕಲಾವಿದರಾದ ನಿರ್ಮಿತ್‌, ಸಮೃದ್ದ, ಲೋಹಿತ್‌, ನಿಶ್ಚಿತ್‌ರ ಸಮಯ ಪ್ರಜ್ಞೆಯ ಅಭಿನಯ ಆಸಕ್ತಿ ಭವಿಷ್ಯದಲ್ಲಿ ಉತ್ತಮವಾಗಿ ಮೂಡಿಬರುವಂತಿತ್ತು.ರಂಗದ ಚೌಕಟ್ಟಿಗೆ ಕಿಂಚಿತ್ತು ಲೋಪ ಬರದಂತೆ ಪ್ರದರ್ಶನ ನೀಡಿದ್ದರು. 

ಮದನಾಕ್ಷಿಯಾಗಿ ಜಾನ್ವಿ ಪ್ರಭು, ತಾರಾವಳಿಯಾಗಿ ರೂಪಾ ರೇವಣರ್‌ ಅಚ್ಚುಕಟ್ಟಾದ ಸೊಗಸಾದ ಅಭಿನಯ ನೀಡಿದ್ದರು.ಇವರ ಪ್ರದರ್ಶನಕ್ಕೆ ಬಡಗುತಿಟ್ಟಿನ ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರು ಕೂಡ ಸಾಕ್ಷಿಯಾಗಿದ್ದರು.ಇವೆರಡು ಪಾತ್ರಧಾರಿಗಳಲ್ಲಿ ಕಲೆ ರಕ್ತಗತವಾಗಿ ಬಂದಂತೆ ಭಾಸವಾಗಿತ್ತು. ವೀರಮ್ಮ ಪುಷ್ಕಳಗೆ ಆರಂಭದಲ್ಲಿ ಅಳುಕು ಕಂಡು ಬಂದರೂ ಅನಂತರ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು.ಮದನಾಕ್ಷಿ, ತಾರಾವಳಿಯರ ಮಾತೆಯಾಗಿ ವಿಶಿಷ್ಟ ಪಾತ್ರ ಪೋಷಣೆ ಮಾಡಿದವರು ಗೃಹಿಣಿ ನಾಗರತ್ನ .ಒಂದು ಸಣ್ಣ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಸೈ ಎನಿಸಿಕೊಂಡರು.ಸಂಧ್ಯಾ ವಿಶ್ವನಾಥ ಹಾಸ್ಯ ಪಾತ್ರ ಸೊಗಸಾದರೂ ಸಹ ಇನ್ನಷ್ಟು ತರಬೇತಿ ಬೇಕು ಎನ್ನುವಂತಿತ್ತು.ಶುಭಾಂಗ,ರುಕಾ¾ಂಗ ಪಾತ್ರದಲ್ಲಿ ನಿರೀಕ್ಷಾ, ನಿಶ್ಚಿತ ಪಾತ್ರಕೊಪ್ಪುವ ಅಭಿನಯದಿಂದ ನೃತ್ಯ,ಮಾತುಗಾರಿಕೆಯಿಂದ ನೋಡುಗರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದರು.ಇನ್ನು ಒಂದಿಷ್ಟು ಕುಣಿಯ ಬಾರದೇ ಎಂದೆನಿಸುತ್ತಿತ್ತು. ನಾರದ ಪಾತ್ರದಲ್ಲಿ ಸಮೃದ್ಧಾ ಮಾತುಗಾರಿಕೆಯಿಂದ ಗುರುತಿಸಿಕೊಂಡು ಯಶಸ್ವಿ ಅಭಿನಯ ನೀಡಿದ್ದರು. ಧಮನ ಪಾತ್ರಧಾರಿ ಲಕ್ಷ್ಮೀ ನಾಗೇಶ್‌ ಕೆ. ಹಿತವರಿತ ಮಾತು,ಕುಣಿತ ರಂಗಸ್ಥಳದಲ್ಲಿ ಕೆಂಪು ಮುಂಡಾಸು ವೇಷದ ಗತ್ತುಗಾರಿಕೆ ತೋರಿಸುವಲ್ಲಿ ಸಫಲರಾಗಿದ್ದಾರೆ.ಸುಮಾರು 6 ತಿಂಗಳ ತರಬೇತಿಯಲ್ಲಿ ಎರಡೂವರೆ ತಾಸು ನೀಡಿದ ಪ್ರದರ್ಶನ ಶಿರೂರಿನ ಯಕ್ಷಗಾನದ ಕ್ಷೇತ್ರದಲ್ಲಿ ಹೊಸತನ ಮೂಡಿಸಿತ್ತು. 

– ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.