ರಂಗದಲ್ಲಿ ಮಿಂಚಿದ ಶ್ರೀ ರಾಮಾಯಣ ದರ್ಶನಂ


Team Udayavani, Mar 22, 2019, 12:30 AM IST

ramayana-1.jpg

ಕುವೆಂಪು ರಚಿಸಿದ “ಶ್ರೀ ರಾಮಾಯಣ ದರ್ಶನಂ’ ಇದರ ರಂಗಪ್ರದರ್ಶನ ವಿಶಿಷ್ಟ ಹಾಗೂ ವಿಭಿನ್ನ ಪ್ರಯೋಗವಾಗಿದೆ. ಈ ಮಹಾಕಾವ್ಯವನ್ನು ಯಥಾವತ್ತಾಗಿ ಕುವೆಂಪು ಅವರ ಭಾಷಾಶೈಲಿಯಲ್ಲಿಯೇ ರಂಗಪ್ರದರ್ಶನ ಮಾಡುವ ಮಹತ್ಕಾರ್ಯದ ಸಾಹಸ ಮಾಡಿದವರು ರಂಗಾಯಣ ಮೈಸೂರು ಇವರು.  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ. 11ರಂದು ಕೆ.ಎಸ್‌.ಎಸ್‌. ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಕಲಾಸಕ್ತರ ಮನ ರಂಜಿಸಿದರು. 

ಸ್ವಲ್ಪ ದೀರ್ಘ‌ವೇ ಎನ್ನಿಸಬಹುದಾದ ಐದು ಗ‌ಂಟೆಗಳ ಅವಧಿಯಲ್ಲಿ ಯಾವುದೇ ರಸಭಂಗವಾಗದೇ ಪ್ರೇಕ್ಷಕರನ್ನು ಮೂಕವಿಸ್ಮಿತರಾಗಿ ತಡೆಹಿಡಿದಿದ್ದುದು ನಾಟಕ ನಿರ್ದೇಶಕರ ಕತೃìತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇವರೊಂದಿಗೆ ರಂಗಪಠ್ಯ ನಿರೂಪಕರು, ಸಂಗೀತ ನಿರ್ದೇಶಕರು, ನೃತ್ಯ ಸಂಯೋಜಕರು, ಪ್ರಸಾಧನ, ವಸ್ತ್ರಾಲಂಕಾರ ಪರಿಣತರು ಒಂದು ಸಮೂಹ ಶಕ್ತಿಯಾಗಿ ದುಡಿದದ್ದು ಕನ್ನಡ ನಾಟಕರಂಗ ಮುಂದೆ ಸಾಗಬೇಕಾದ ಹಾದಿಗೆ ದಾರಿದೀಪವಾಗುವುದು ನಿಶ್ಚಿತ. ರಂಗದ ಮೇಲೂ ಅಷ್ಟೇ, ಪಾದರಸದಂತೆ ಚುರುಕಾಗಿ ಓಡಾಡುವ ಪಾತ್ರಧಾರಿಗಳು, ನಿರರ್ಗಳವಾದ ಭಾಷಾ ಪ್ರಯೋಗ, ಮಾನವರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ಜಿಂಕೆ, ಮಾರೀಚ, ಜಟಾಯು, ಹಕ್ಕಿಗಳ ಚಿಲಿಪಿಲಿ ಇವೆಲ್ಲ ಪ್ರೇಕ್ಷಕರನ್ನು ಒಂದು ಗಂಧರ್ವ ಲೋಕಕ್ಕೆಂಬಂತೆ ಕೊಂಡುಹೋದದ್ದು ಸುಳ್ಳಲ್ಲ.

ರಾಮಾಯಣದ ಕಥೆಯೊಂದಿಗೆ ಇಲ್ಲಿ  ಕುವೆಂಪು ಅವರ ವೈಚಾರಿಕ ದರ್ಶನವೂ ಚೆನ್ನಾಗಿ ಪ್ರತಿಫ‌ಲಿಸಿದೆ. ಬೇಡನ ಬಾಣಕ್ಕೆ ಗುರಿಯಾದ ಕ್ರೌಂಚಪಕ್ಷಿ ಇಲ್ಲಿ ಸಾಯುವುದಿಲ್ಲ, ಮತ್ತೆ ಆಕಾಶದಲ್ಲಿ ಹಾರುತ್ತದೆ. ಎಲ್ಲರಿಂದ ಛೀ…ಥೂ… ಎನ್ನಿಸಿಕೊಂಡ ಮಂಥರೆ ಕೊನೆಯಲ್ಲಿ ಭರತನಿಗೆ ರಾಮಾಗಮನದ ಸುವಾರ್ತೆಯನ್ನು ಹೇಳಿ ಪ್ರೇಮದಂತ‌ಃಕ‌ರ‌‌ಣವನ್ನು ಪ್ರದರ್ಶಿಸುತ್ತಾಳೆ. ತನ್ನ ಅಂತಿಮ ಕ್ಷಣದಲ್ಲಿ ವಾಲಿ ತನ್ನೊಳಗನ್ನು ಬಿಚ್ಚಿಟ್ಟಾಗ ರಾಮ ಆತನಲ್ಲಿ ಕ್ಷಮೆಯಾಚಿಸುವುದು ಮನಕಲಕುವ ಭಾಗವೇ. ರಾವಣನು ವಿಧಿನಿಯಮದಂತೆ ಪಾಪಗಳನ್ನೆಸಗಿದರೂ ಸೃಷ್ಟಿಯ ಮಹದ್‌ ವ್ಯೂಹ ರಚನೆಯಲ್ಲಿ ಪಾಪಿಗೆ ಉದ್ಧಾರವಿಹುದು ಎಂಬುದಕ್ಕೆ ಸಾಕ್ಷಿಯಾಗುತ್ತಾನೆ. 

ಕುವೆಂಪು ಅವರೇ ಹೇಳುವಂತೆ, ಇದು ಕುವೆಂಪುವನ್ನು ಸೃಜಿಸಿದ, ಮಹಾಛಂದಸ್ಸಿನ ಮೇರು ಕೃತಿ. ಜಗತ್ತಿನ ವೈಚಾರಿಕ ಚಿಂತನೆಗಳನ್ನು ತನ್ನೊಡಲೊಳಗೆ ಕೇಂದ್ರೀಕರಿಸಿ ಕೊಂಡ ಜಾಗತಿಕ ಕಾವ್ಯ. ಆಕೃತಿಯಲ್ಲಿಯಂತೆ ರಂಗ ಪ್ರಸ್ತುತಿಯಲ್ಲಿಯೂ ತಪೋವಲಯ, ಪ್ರಕೃತಿ-ಪುರುಷ, ಸಾಂಸ್ಕೃತಿಕ ವಿಲೀನತೆ, ಜೀವನ ಪೂರ್ಣತ್ವ, ಪಾಪಪುಣ್ಯ ಪ್ರಜ್ಞೆ, ಪಾತ್ರಗಳ ಮನೋ ತಾಕಲಾಟ ಇಂತಹ ಅನೇಕ ಸಂಗತಿಗಳನ್ನು ಸಂಕೇತಗಳ ಮೂಲಕ ಅರ್ಥೈಸುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಆದರೆ ದೊಡ್ಡದಾದ ರಂಗಮಂಟಪದ ತುಂಬೆಲ್ಲಾ ಓಡಾಡುವ ಪಾತ್ರಗಳು ಗಂಭೀರವಾದ ಹಳೆಗನ್ನಡ ಭಾಷೆ, ಕ್ಷಣಮಾತ್ರದಲ್ಲಿ ಬದಲಾಗುವ ದೃಶ್ಯಗಳು, ಬೆಳಕು-ನೆರಳಿನ ವಿನ್ಯಾಸ ಮೊದಲಾದವುಗಳನ್ನು ಅದೇ ವೇಗದಲ್ಲಿ ಅರ್ಥೈಸಿಕೊಳ್ಳುವುದು ಹಳ್ಳಿಯ ಸಾಮಾನ್ಯ ಪ್ರೇಕ್ಷಕನಿಗೆ ಕಷ್ಟಕರವಾಗಿ ಕಾಣುವುದಾದರೂ, ಇವು ಯಾವುವೂ ಇಂತಹ ರಂಗ ಪ್ರಯೋಗದ ಮಹಾನ್‌ ಸಾಧನೆಯಲ್ಲಿ ದೋಷಗಳಾಗುವುದಿಲ್ಲ.

– ಕೆ.ಎಸ್‌.ಎನ್‌ ಉಡುಪ 

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.