ನಂಬಿಕೆ ಎಂಬ ಸಂಸ್ಕಾರ


Team Udayavani, Sep 8, 2018, 3:38 PM IST

89.jpg

ನಂಬಿಕೆ ಎಂಬುದು ಹುಟ್ಟಿನಿಂದ ಬರಬೇಕಾದದ್ದು. ಅದಕ್ಕೆ ಶುದ್ಧವಾದ ಸಂಸ್ಕಾರವೂ ಬೇಕು. ಹಾಗಾಗಿ ರಕ್ಕಸರು ಪರಸ್ಪರ ಒಬ್ಬರನೊಬ್ಬರು ನಂಬುವುದಿಲ್ಲ. ಯಾಕೆಂದರೆ ಅವರು ಮೂಲತಃ ಸಂಸ್ಕಾರ ವಿಹೀನರಾಗಿಯೇ ಹುಟ್ಟಿರುತ್ತಾರೆ; ಬದುಕುತ್ತಿರುತ್ತಾರೆ. 

 ಜಗತ್ತು ಯಾವುದರ ಮೇಲೆ ನಿಂತಿದೆ? ಎಂದು ಕೇಳಿದರೆ ಹಲವಾರು ಉತ್ತರಗಳು ಸಾಲಾಗಿ ಹೊಳೆಯುತ್ತಲೇ ಹೋಗುತ್ತವೆ.  ಆದಿಶೇಷನ ಮೇಲೆ, ಸಮುದ್ರದಲ್ಲಿ, ಸೌರಮಂಡಲದಲ್ಲಿ, ಗುರುತ್ವಾಕರ್ಷಣೆಯಲ್ಲಿ ಹೀಗೆ ಹಲವಾರು ಉತ್ತರಗಳು ದೊರೆಯುವುದು ಸಹಜ. ದೈವಿಕವಾಗಿ ನಾವು, ಈ ಭೂಮಂಡಲವು ಆದಿಶೇಷನ ಮೇಲೆ ನಿಂತಿದೆ, ಆತನೇನಾದರೂ ತಲೆಯಲ್ಲಾಡಿಸಿ ಬಿಟ್ಟರೆ, ಭೂಮಿ ನೀರಿನಲ್ಲಿ ಮುಳುಗಿ ಸರ್ವನಾಶವಾಗುತ್ತದೆ ಎಂದು ನಂಬಿದ್ದೇವೆ. ಅಂದರೆ ಇಲ್ಲಿ ನಂಬಿಕೆ ಎಂಬುದು ಬಲವಾದ ಅಂಶ. ಯಾಕೆಂದರೆ ಮನುಷ್ಯ ಏನೇ ಸಂಶೋಧನೆ ಮಾಡಿ ಕರಾರುವಾಕ್ಕಾಗಿ ಭೂಮಿಯಲ್ಲಿನ ಘಟನೆಗಳಿಗೆ ವೈಜ್ಞಾನಿಕವಾದ ಕಾರಣಗಳನ್ನು ಎದುರಿಗಿಟ್ಟರೂ ಅವೆಲ್ಲವನ್ನೂ ಸತ್ಯವೆಂದು ಒಪ್ಪಿಕೊಳ್ಳುವಲ್ಲಿ ನಂಬಿಕೆ ಕೆಲಸ ಮಾಡಲೇಬೇಕು. ನಂಬಿಕೆ ಎಂಬುದು ಮನಸ್ಸಿಗೆ ಸಂಬಂಧಿಸಿದ್ದು. ಯಾವುದೋ ಒಂದು ಸಂಗತಿಯನ್ನುನಂಬುವುದಿಲ್ಲವೆಂದು ಮನಸ್ಸು ನಿರ್ಧರಿಸಿಬಿಟ್ಟರೆ, ಅಲ್ಲಿಗೆ ಶುದ್ಧ ಚಿನ್ನವನ್ನೇ ತಂದು ಇದಿರಿಗಿಟ್ಟರೂ ನಾವು ಅದನ್ನು ಚಿನ್ನವೆಂದು ನಂಬುವುದಿಲ್ಲ. ಯಾಕೆಂದರೆ, ಇಲ್ಲಿ ನಂಬಿಕೆ ಎಂಬುದು ಕೆಲಸ ಮಾಡುತ್ತಿರುತ್ತದೆ. ಚಿನ್ನಕ್ಕೆ ಯಾರೋ ಇದು ಚಿನ್ನ ಎಂದು ಹೆಸರಿಸಿದ್ದಾರೆ; ನಂಬಿಸಿದ್ದಾರೆ. ಹಾಗಾಗಿಯೇ ಅದನ್ನೇ ಚಿನ್ನವೆಂದು ನಂಬುತ್ತಲೇ ಬಂದಿದ್ದೇವೆ. ಅದು ಚಿನ್ನವೇ ಹೌದೋ, ಅಲ್ಲವೋ ಗೊತ್ತಿಲ್ಲ!

ಹಾಗಾಗಿಯೇ ಈ ನಂಬಿಕೆ ಎಂಬುದು ಸಂಸ್ಕಾರ. ಆದಿಶೇಷನೆಂಬುದು ನಂಬಿಕೆಯ ಪ್ರತಿರೂಪ. ನಂಬಿಕೆ ಎಂಬುದು ಹುಟ್ಟಿನಿಂದ ಬರಬೇಕಾದದ್ದು. ಅದಕ್ಕೆ ಶುದ್ಧವಾದ ಸಂಸ್ಕಾರವೂ ಬೇಕು. ಹಾಗಾಗಿ ರಕ್ಕಸರು ಪರಸ್ಪರ ಒಬ್ಬರನೊಬ್ಬರು ನಂಬುವುದಿಲ್ಲ. ಯಾಕೆಂದರೆ ಅವರು ಮೂಲತಃ ಸಂಸ್ಕಾರ ವಿಹೀನರಾಗಿಯೇ ಹುಟ್ಟಿರುತ್ತಾರೆ; ಬದುಕುತ್ತಿರುತ್ತಾರೆ. ಬದುಕಿನ ಪ್ರತಿಕ್ಷ$ಣವೂ ನಂಬಿಕೆಯ ಮೇಲೆಯೇ ನಿಂತಿದೆ. ಅಂದರೆ ಈ ಪ್ರಪಂಚವೇ ನಂಬಿಕೆ ಮೇಲೆ ನಿಂತಿದೆ. ಸಾವು ಯಾವಾಗ ಎಂಬುದನ್ನು ಯಾವುದೇ ವಿಜ್ಞಾನ ಕರಾರುವಾಕ್ಕಾಗಿ ಹೇಳದು. ಆದರೆ ನಾವು ನಾಳೆಯ ಬಗ್ಗೆ ಯೋಚಿಸುತ್ತ, ನಾಳಿನ ಅಗತ್ಯವನ್ನು ಪೂರೈಸಲು ಇಂದು ಪ್ರಯತ್ನಿಸುತ್ತಲೇ ಇರುತ್ತೇವೆ. ಕಾರಣ ಮಹತ್ತರದ್ದೇನಿಲ್ಲ; ಕೇವಲ ನಂಬಿಕೆ. ಆದ್ದರಿಂದಲೇ ನಂಬಿಕೆಯ ಸಂಸ್ಕಾರ ಪ್ರತಿಯೊಬ್ಬನಲ್ಲಿಯೂ ಇರಲೇಬೇಕು.

ನಂಬಿಕೆಯೆಂಬುದು ಮನುಷ್ಯನ ಪ್ರತಿ ಹೆಜ್ಜೆಯ ಶಕ್ತಿ. ಅದು ಸತ್ಯದೆಡೆಗೆ ಇದ್ದಾಗ ಇನ್ನೂ ಬಲವಾಗಿರುತ್ತದೆ. ಅದರ ಪರಿಣಾಮವೂ ಫ‌ಲದಾಯಕವಾಗಿರುತ್ತದೆ. ದೋಣಿಯಲ್ಲಿ ನದಿ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಟ್ಟಿರುತ್ತೇವೆ. ಆದರೆ ಏನು ಅನಾಹುತವಾಗುವುದೋ? ಅಂಬಿಗನಿಂದ ಅದನ್ನು ತಪ್ಪಿಸಲು ಸಾಧ್ಯವೇ? ಎಂಬ ಅಪನಂಬಿಕೆ ನಮ್ಮನ್ನು ಆವರಿಸಿದರೆ ನದಿಯ ದಡ ಸೇರುವತನಕವೂ ನರಕಯಾತನೆಯನ್ನೇ ಅನುಭವಿಸಬೇಕಾಗುತ್ತದೆ. ಅಥವಾ ಪಯಣವನ್ನು ಮುಂದುವರಿಸದೆ ಅಲ್ಲಿಯೇ ಮೊಟಕುಗೊಳಿಸಬೇಕಾಗುತ್ತದೆ. ಇದು ಬದುಕಿಗೆ ನೇರವಾಗಿ ಸಂಬಂಧಿಸಿದ ಹೋಲಿಕೆ. ನಾವು ದೇವರನ್ನು ನಂಬುತ್ತೇವೆ. ಆತನಿಗಿರುವ ಶಕ್ತಿಯನ್ನು ನಂಬುತ್ತೇವೆ. ಅವನನ್ನು ಆಧರಿಸಿ ಬದುಕುತ್ತ ಕಷ್ಟಗಳನ್ನು ಮರೆಯುತ್ತೇವೆ. ಆದರೆ ನಂಬಿಕೆಯ ಸಂಸ್ಕಾರ ಇನ್ನೂ ಬಲವಾಗಿಲ್ಲ ಎಂಬುದು ನನ್ನ ಅಬಿಪ್ರಾಯ. ಯಾಕೆಂದರೆ ದೇವರು ಎಲ್ಲಾ ಕಡೆಯಿದ್ದಾನೆ ಎಂಬ ನಂಬಿಕೆಯಿದ್ದರೂ ನಾವು ಅನಾಚಾರಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ. ನಮಗೆ ನಮ್ಮ ಕಷ್ಟಗಳು ಗೊತ್ತು. ಅದಕ್ಕೆ ಕಾರಣಗಳೂ ಹಲವರಿಗೆ ತಿಳಿದಿರಬಹುದು. ಯಾಕೆಂದರೆ ಸರ್ವಾಂತರ್ಯಾಮಿಯಾದ ದೇವರನ್ನು ಮರೆತು ಆತನ ಕಣ್ಣೆದುರಲ್ಲೇ ದುಷ್ಕೃತ್ಯಗಳನ್ನು ಮಾಡಿರುತ್ತೇವೆ. ಅಲ್ಲದೆ ನಂಬಿದವನಿಗೆ ಮೋಸ ಮಾಡುತ್ತೇವೆ. ಅಚಲವಾದ ನಂಬಿಕೆ ಪ್ರತಿಶತವಿದ್ದು ಅದಕ್ಕೆ ತಪ್ಪದೆ ನಡೆದುಕೊಂಡರೆ ಜೀವನ ಆನಂದಮಯವಾಗುವುದರಲ್ಲಿ ಸಂದೇಹವಿಲ್ಲ.

ನಂಬಿಕೆಯ ಶಕ್ತಿ

 ಜಗತ್ತು ನಂಬಿಕೆಯ ಮೇಲೆ ನಿಂತಿದೆ; ನಂಬಿಕೆಯೇ ದೇವರು. ನಂಬಿಕೆಯ ಸಂಸ್ಕಾರ ನಮ್ಮ ಆಚಾರದಲ್ಲಿ ಬೆನ್ನೆಲುಬಾಗಿ ನಿಂತರೆ ಜಗತ್ತು ಆನಂದದ ಬೆಳಕಿನಲ್ಲಿ ಹೊಳೆಯುತ್ತಿರುತ್ತದೆ.

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.