ಪತ್ನಿಯ ತಂಗಿ ಮೇಲೆ ಪತಿ ಕಣ್ಣು; ಹೆಂಡತಿ ಕೊಲೆಗೆ ಹಾವು ಖರೀದಿ!
Team Udayavani, Feb 17, 2017, 12:30 PM IST
ಬಾಗಲಕೋಟೆ:ಪತ್ನಿಯ ತಂಗಿಯ ಮೇಲಿನ ಆಸೆಯಿಂದ ಪತ್ನಿಯನ್ನೇ ಕೊಂದು, ಬಳಿಕ ಪತ್ನಿ ಹಾವು ಕಚ್ಚಿ ಸಾವನ್ನಪ್ಪಿರುವುದಾಗಿ ನಂಬಿಸಿದ್ದ. ಆದರೆ ಇದೀಗ ಪತಿಯ ಕಳ್ಳಾಟ ಬಯಲಾಗಿರುವ ಘಟನೆ ಬಾಗಲಕೋಟೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
1 ಸಾವಿರ ರೂ. ನೀಡಿ ಹಾವು ಖರೀದಿಸಿದ್ದ!
ಚಂದ್ರ ಕಿಲಬನೂರು(30) ಎಂಬಾತ ಪತ್ನಿ ರತ್ನವ್ವ(25ವರ್ಷ)ಳನ್ನು ಹತ್ಯೆಗೈದಿದ್ದ. ಆದರೆ ಪತ್ನಿ ಯನ್ನು ಕೊಲೆಗೈದಿರುವ ವಿಷಯ ತಿಳಿಯಬಾರದು ಎಂದು ಲೆಕ್ಕಚಾರ ಹಾಕಿದ್ದ ಚಂದ್ರ, ಮೊದಲೇ ಒಂದು ಸಾವಿರ ರೂಪಾಯಿ ನೀಡಿ ನಾಗರಹಾವನ್ನು ಖರೀದಿಸಿದ್ದನಂತೆ!
ಪತ್ನಿ ಹಾವು ಕಡಿದು ಸಾವನ್ನಪ್ಪಿರುವುದಾಗಿ ಎಲ್ಲರನ್ನೂ ನಂಬಿಸಲೆತ್ನಿಸಿದ್ದ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಪತಿಯ ಅಸಲಿ ಮುಖ ಬಯಲಾಗಿತ್ತು. ಗಂಡನೇ ಪತ್ನಿಯ ಕತ್ತು ಹಿಸುಕಿ ಸಾಯಿಸಿರುವುದು ಬಟಾಬಯಲಾಗಿತ್ತು. ಈ ಘಟನೆ ಫೆ.14ರಂದು ನಡೆದಿದ್ದು, ಇದೀಗ ತಡವಾಗಿ ಬಹಿರಂಗವಾಗಿದೆ.
ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಪತ್ನಿಯ ತಂಗಿಯ ಮೇಲಿನ ಆಸೆಯಿಂದ ಹೆಂಡತಿಯನ್ನು ಕೊಂದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ