ನೋಡ ನೋಡುತ್ತಾ 2 ವರ್ಷದ ಮಗುವಿನೊಂದಿಗೆ ಕೃಷ್ಣಾ ನದಿ ಪಾಲಾದ ತಂದೆ!
Team Udayavani, Jul 04, 2018, 3:05 PM IST

ಬಾಗಲಕೋಟೆ: ಬೀಳಗಿ ತಾಲೂಕಿನ ಕೃಷ್ಣಾ ನದಿಯ ಸೇತುವೆಯಲ್ಲಿ ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ಬೈಕ್ನಲ್ಲಿ ತೆರಳುತ್ತಿದ್ದ ತಂದೆ, ಮಗಳು ನದಿಗೆ ಬಿದ್ದು ದಾರುಣವಾಗಿ ನೀರುಪಾಲಾದ ಘಟನೆ ಬುಧವಾರ ನಡೆದಿದೆ.
ಗಲಗಲಿ -ಚಿಕ್ಕಗಲಗಲಿ ನಡುವೆ ಸಂಪರ್ಕಿಸುವ ತಡೆ ಗೋಡೆ ಇಲ್ಲದ ಸೇತುವೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಆಯತಪ್ಪಿ ಬಿದ್ದ ಮಗಳನ್ನು ರಕ್ಷಿಸಲು ಯತ್ನಿಸಿದ ವೇಳೆ ತಂದೆಯೂ ನೀರು ಪಾಲಾಗಿದ್ದಾರೆ.
ನೀರುಪಾಲಾದ 2 ವರ್ಷದ ಅನಮ್ಳ ಶವವನ್ನು ಸ್ಥಳೀಯ ಮೀನುಗಾರರು ಮೇಲಕ್ಕೆತ್ತಿದ್ದು, ತಂದೆ ದಶಗೀರಾ ಸಾಬ್ ಮೃತ ದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.