ವಾಸಿಸುವುದುಒಂದು ವಾರ್ಡ್‌ನಲ್ಲಿ;ಮತದಾನ ಪಟ್ಟಿಇನ್ನೊಂದು ವಾರ್ಡ್‌ನಲ್ಲಿ


Team Udayavani, Sep 1, 2018, 3:46 PM IST

secptember-18.jpg

ಬಾಗಲಕೋಟೆ: ನಾವು ವಾಸಿಸುವುದು ಒಂದು ವಾರ್ಡ್‌ ನಲ್ಲಿ. ನಮ್ಮ ಹೆಸರು ಇರುವುದು ಇನ್ನೊಂದು ವಾರ್ಡ್‌ನ ಮತದಾರರ ಪಟ್ಟಿಯಲ್ಲಿ. ಈ ಬಾರಿ ಹಿಂಗ್ಯಾಕ್‌ ಮಾಡ್ಯಾರ್‌…! ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಮತದಾನ ಮಾಡಲು ಬಂದಿದ್ದ ಬಹುತೇಕರು ಈ ರೀತಿ ಕೇಳುತ್ತಿದ್ದ ಪ್ರಸಂಗ, ಮತದಾನ ಕೇಂದ್ರಗಳ ಹೊರಗೆ ನಡೆಯುತ್ತಿತ್ತು.

ಮನೆ ಇಲ್ಲಿ; ಓಟ್‌ ಅಲ್ಲಿ: ಕಳೆದ ಬಾರಿ 31 ವಾರ್ಡ್‌ಗಳಿದ್ದ ಬಾಗಲಕೋಟೆ ನಗರಸಭೆಯಲ್ಲಿ ಈ ಬಾರಿ ಪುನರ್‌ವಿಂಡಗಣೆ ಬಳಿಕ 35 ವಾರ್ಡ್‌ಗಳ ರಚನೆ ಮಾಡಲಾಗಿದೆ. ಅಲ್ಲದೇ ಮೊದಲಿದ್ದ ಕ್ರಮ ಸಂಖ್ಯೆ ವಾರ್ಡ್‌ಗಳು, ಈ ಬಾರಿ ಸಂಪೂರ್ಣ ಬದಲಾಗಿವೆ. ಮೊದಲು ವಾರ್ಡ್‌ ನಂ.1 ಇದ್ದರೆ, ಈಗ ಅದು ವಾರ್ಡ್‌ ನಂ.19 ಆಗಿದೆ. ಇನ್ನು ಕಳೆದ ಬಾರಿ ವಾರ್ಡ್‌ ನಂ.10 ಇದ್ದ ಬಡಾವಣೆ, ಈಗ ವಾರ್ಡ್‌ ನಂ. 18 ಆಗಿದೆ. ವಾರ್ಡ್‌ಗಳ ಸಂಖ್ಯೆ ಬದಲಾಗಿದ್ದಷ್ಟೇ ಅಲ್ಲ, ಹಲವು ಮತದಾರರೂ ಬೇರೆ ಬೇರೆ ವಾರ್ಡ್‌ಗೆ ಹಂಚಿಕೆಯಾಗಿದ್ದಾರೆ. ಹೀಗಾಗಿ ಮತದಾನ ಮಾಡಲು ಮತದಾರ ಪ್ರಭುಗಳು ಪರದಾಡುವಂತಾಯಿತು.

ನಗರದ ವಾರ್ಡ್‌ ನಂ. 18, ಈ ಹಿಂದೆ 10ನೇ ವಾರ್ಡ್‌ ಆಗಿತ್ತು. ಆದರೆ, ಈ ವಾರ್ಡ್‌ನಲ್ಲಿ ಇರುವ ಸುಮಾರು 55ಕ್ಕೂ ಹೆಚ್ಚು ಮತದಾರರನ್ನು ವಾರ್ಡ್‌ ನಂ.17ರ ಮತದಾರರ ಪಟ್ಟಿಗೆ ವಿಂಗಡಿಸಲಾಗಿದೆ. ಹೀಗಾಗಿ 18ನೇ ವಾರ್ಡ್‌ನ ಮತಗಟ್ಟೆ ಹೋಗಿ, ತಮ್ಮ ಹೆಸರು ಅಲ್ಲಿರದೇ ಇರುವುದನ್ನು ಕಂಡು ಮರಳಿ ಹೋದರು. ಮಧ್ಯಾಹ್ನದ ಬಳಿಕ ಅವರ ಹೆಸರು ಯಾವ ವಾರ್ಡ್‌ನಲ್ಲಿದೆ ಎಂಬುದನ್ನು ಕೆಲವರು ಪತ್ತೆಮಾಡಿ, ಭಾಗ ಸಂಖ್ಯೆ, ಅನುಕ್ರಮ ಸಂಖ್ಯೆಯ ಚೀಟಿ ಒದಗಿಸಿದರು. ಆಗ ಬೇರೆ ವಾರ್ಡ್‌ನ ಮತಗಟ್ಟೆಗೆ ಮತದಾನ ಮಾಡಿ ಮರಳಿದರು.

96 ಜನ ಭವಿಷ್ಯ ನಿರ್ಧಾರ: ಬಾಗಲಕೋಟೆ ನಗರಸಭೆಯ ಒಟ್ಟು 35 ವಾರ್ಡ್‌ಗಳಲ್ಲಿ 2ನೇ ವಾರ್ಡ್‌ ಗೆ ಅವಿರೋಧ ಆಯ್ಕೆ ನಡೆದಿದ್ದು, 34 ವಾರ್ಡ್‌ಗಳಿಗೆ ಶುಕ್ರವಾರ ಮತದಾನ ನಡೆಯಿತು. 34 ವಾರ್ಡ್‌ಗಳಿಗೆ ಕಾಂಗ್ರೆಸ್‌ನಿಂದ 34, ಬಿಜೆಪಿಯಿಂದ 34, ಜೆಡಿಎಸ್‌ ನಿಂದ 13, ಪ್ರಜಾ ಪರಿವರ್ತನಾ ಪಾರ್ಟಿಯಿಂದ 2, ಎಐಎಂಐಎಂನಿಂದ 1 ಹಾಗೂ 11 ಜನ ಪಕ್ಷೇತರರು ಕಣದಲ್ಲಿದ್ದರು. ನಗರ, ನವನಗರ ಹಾಗೂ ವಿದ್ಯಾಗಿರಿ ಒಳಗೊಂಡು ಒಟ್ಟು 99,891 ಮತದಾರರಿದ್ದು, ಅದರಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಒಟ್ಟು ಶೇ.41.13 ಮತದಾನವಾಗಿತ್ತು.

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ನಗರದ ವಾರ್ಡ್‌ ನಂ. 16ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೈ ಕೈ ಮಿಸಲಾಯಿಸುವ ಹಂತಕ್ಕೂ ಹೋಗಿತ್ತು. ಮತಗಟ್ಟೆ ಎದುರು ಬಿಜೆಪಿ ಕಾರ್ಯಕರ್ತ ಶಿವು ವಡ್ಡರ ಮೇಲೆ ಕಾಂಗ್ರೆಸ್‌ನ ಪರಶುರಾಮ ಮತ್ತು ವಿಠuಲ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ವಿಷಯ ತಿಳಿದು ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು, ಶಾಂತತೆ ಕಾಪಾಡಲು ಮನವಿ ಮಾಡಿದರು. ಕೆಲವರು ಪೊಲೀಸರೊಂದಿಗೂ ವಾಗ್ವಾದ ನಡೆಸಿದರು.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.