ಪಿಒಪಿ ಗಣೇಶ ಮೂರ್ತಿ ಸಂಪೂರ್ಣ ನಿಷೇಧ: ಕಾಸೆ
Team Udayavani, Sep 8, 2018, 4:06 PM IST
ಜಮಖಂಡಿ: ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ಜಿಲ್ಲಾಡಳಿತ ಕಡ್ಡಾಯವಾಗಿ ನಿಷೇಧಿಸಿದ್ದು, ವ್ಯಾಪಾರಸ್ಥರು ಪ್ರಸಕ್ತ ವರ್ಷ ಮಣ್ಣಿನ ಗಣಪತಿ ಮಾರಾಟ ಮಾಡಿ, ಪರಿಸರ ಮಾಲಿನ್ಯ ಕಡಿಮೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಹೇಳಿದರು.
ಸ್ಥಳೀಯ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಜಮಖಂಡಿ ಗಣಪತಿ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಡ್ಡಾಯವಾಗಿ ಪಿಒಪಿಯಿಂದ ನಿರ್ಮಿತ ಗಣಪತಿಯನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ್ದು, ಕಾನೂನು ಉಲ್ಲಂಘಿಸಿ ನಗರದಲ್ಲಿ ಯಾರಾದರೂ ಪಿಒಪಿ ಗಣಪತಿ ಮಾರಾಟ ಮಾಡಿದ್ದಲ್ಲಿ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ, ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ಗಣಪತಿ ವ್ಯಾಪಾರಸ್ಥರಾದ ಉದಯ ಕುಲಕರ್ಣಿ, ಬಸವರಾಜ ಕುಂಬಾರ, ಶಿವಮೂರ್ತಿ ಸುತಾರ, ಶಿವಾಜಿ ಜಾಧವ, ಸಚಿನ ಅಸುಗಡೆ, ಸುರೇಶ ಸೋನಾವಣೆ, ಲಕ್ಷ್ಮೀಕಾಂತ ಸೋನಿ, ಸುನೀಲ ಕೋಲ್ಲಾಪುರ, ಶಶಿಕಾಂತ ಸೋನಾವಣೆ, ಸಚಿನ್ ಆಲಬಾಳ, ಸಚೀನ ಚೋಪಡೆ ಸಹಿತ ಹಲವರು ಇದ್ದರು.
ಭಕ್ತರಿಗೆ ಗಣಪತಿ ಬೇಕು
ನಗರದ ಮನೆ-ಮನೆಯಲ್ಲಿ ಪ್ರತಿಷ್ಠಾಪನೆಗೆ ಅಂದಾಜು 8 ಸಾವಿರ ಗಣೇಶ ವಿಗ್ರಹಗಳು ಅವಶ್ಯಕತೆಯಿದೆ. ಪಿಒಪಿ ಗಣೇಶ ವಿಗ್ರಹ ನಿಷೇಧಗೊಳಿಸಿರುವ ಜಿಲ್ಲಾಡಳಿತ, ಭಕ್ತರ ಭಕ್ತಿಯ ಮನಸ್ಸಿಗೆ ಘಾಸಿ ಮಾಡಿದೆ. ಪರಿಸರ ಮಾಲಿನ್ಯ ನೆಪದಲ್ಲಿ ಪರಂಪರೆಯ ಪೂಜೆ, ಪುರಸ್ಕಾರಗಳಿಗೆ ಕಂಟಕ ಬಂದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಗೊಂಡು ಅವಶ್ಯಕತೆಯಿರುವ ಜೇಡಿಮಣ್ಣು ಪೂರೈಸುವ ಮೂಲಕ ಪಿಒಪಿ ಗಣೇಶ ವಿಗ್ರಹಗಳನ್ನು ನಿಷೇಧಿಸಲಿ. ಒಟ್ಟಿನಲ್ಲಿ ಭಕ್ತರ ಪೂಜೆಗೆ ಗಣಪತಿ ವಿಗ್ರಹ ಬೇಕೆಬೇಕು.
ಭಕ್ತರು, ವ್ಯಾಪಾರಸ್ಥರು, ಜಮಖಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
MUST WATCH
ಹೊಸ ಸೇರ್ಪಡೆ
Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು