ಸರಕಾರಿ ಕನ್ನಡ ಶಾಲೆಗೆ ಮೆಟ್ರೋ ರೈಲಿನ ಬಣ್ಣ 


Team Udayavani, Dec 14, 2018, 5:30 PM IST

14-december-20.gif

ಬನಹಟ್ಟಿ: ಮಕ್ಕಳನ್ನು ಆಕರ್ಷಿಸಲು ಇಲ್ಲಿಯ ಕೆಎಚ್‌ಡಿಸಿ ಕಾಲೋನಿಯ ಸರಕಾರಿ ಕನ್ನಡ ಶಾಲೆಗೆ ಮೆಟ್ರೋ ರೈಲಿನ ಬಣ್ಣ ಬಳಿಯಲಾಗಿದೆ. ಇಲ್ಲಿನ ನಾಗರಿಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಮುಖ್ಯಗುರುಗಳ, ಸಹ ಶಿಕ್ಷಕರ ಸಹಕಾರದಿಂದ ಇಲ್ಲಿನ ಶಾಲೆಗೆ ಮೆಟ್ರೋ ಬಣ್ಣ ಬಳಿಯುವ ಮೂಲಕ ಅತಿ ವೇಗದ ಜ್ಞಾನದ ಕಲಿಕೆಗೆ ಮತ್ತು ಆಕರ್ಷಣಿಯವಾಗುವಂತೆ ಮಾಡಿದ್ದಾರೆ.

ಈ ರೈಲಿಗೆ ಸಭಾಂಗಣ ನಿಲ್ದಾಣ ಕಾರ್ಯಾಲಯ ನಿಲ್ದಾಣ, ಶಾಲಾ ಡ್ರೆಸ್‌ ಕೋಡ್‌ ಹೀಗೆ ನಿಲ್ದಾಣಗಳ ಹೆಸರು ಅಲ್ಲಲ್ಲಿ ಬರೆಯಲಾಗಿದೆ. ಮಕ್ಕಳಿಗೆ ಬೆಳಗ್ಗೆ ಶಾಲೆ ಆರಂಭದ ಗಂಟೆ ಬಾರಿಸುವುದಷ್ಟೆ ತಡ ಥಟ್ಟ ಅಂತ ಮೆಟ್ರೋ ರೈಲು ಎದುರು ಓಡಿ ಬಂದು ಪ್ರಾರ್ಥನೆಗೆ ನಿಲ್ಲುವರು. ಪ್ರಾರ್ಥನೆ ಮುಗಿದ ತಕ್ಷಣ ಮೆಟ್ರೋ ರೈಲು ಹತ್ತಲು ಮಕ್ಕಳು ಸರದಿಯಲ್ಲಿ ಸಜ್ಜಾಗಿ ನಿಂತು ಬಿಡುತ್ತಾರೆ. ಇದು ರೈಲು ನಿಲ್ದಾಣದಲ್ಲಿ ನಿಂತ ಹಾಗೆ ಭಾಸವಾಗಿ ಮಕ್ಕಳು ರೈಲಿನಲ್ಲಿ ಹತ್ತುವರು. ನಂತರ ವಿಶ್ರಾಮದ ಗಂಟೆ, ಭೋಜನದ ಗಂಟೆ, ಶಾಲೆ ಬಿಡುವ ಗಂಟೆ ಭಾರಿಸಿದ ತಕ್ಷಣ ಮುಂದಿನ ಊರು ಅಥವಾ ನಿಲ್ದಾಣ ಬಂತೆಂದು ಭಾವಿಸಿ ಇಳಿಯುವರು.

ಶಾಲೆಯಲ್ಲಿ ನಿತ್ಯ ಪ್ರಾರ್ಥನೆ ವೇಳೆಯಲ್ಲಿ ಪಂಚಾಂಗ ಪಠಣ ಸಾಮಾನ್ಯ. ಈ ಶಾಲೆಯಲ್ಲಿ ಪ್ರಚಲಿತ ವಿದ್ಯಮಾನಗಳ ಹಾಗೂ ರಸಪ್ರಶ್ನೆಯಂತಹ ಕಾರ್ಯಕ್ರಮಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಪ್ರಾರ್ಥನೆ ವೇಳೆಯಲ್ಲಿಯೆ ಅನೇಕ ಮಾಹಿತಿ ಪಡೆದುಕೊಳ್ಳಲು ನೆರವಾಗುತ್ತಿದೆ.

ಕೆಎಚ್‌ಡಿಸಿ ಶಾಲೆಗೆ ಮೆಟ್ರೋ ರೈಲಿನ ಬಣ್ಣ ಬಳಿದಿರುವುದು ಮಕ್ಕಳಿಗೆ ಖುಷಿ ಕೊಡುವಂತಹ ವಿಚಾರ, ಮಕ್ಕಳು ಸುಂದರ ಬದುಕನ್ನು ಕಟ್ಟಿಕೊಡುವಂತಹ ಶಿಕ್ಷಣ ನೀಡಲು ಶಿಕ್ಷಕರು ಮತ್ತಷ್ಟು ಕಾರ್ಯೋನ್ಮುಖರಾಗಿ ಪ್ರಯತ್ನಿಸಬೇಕು.
. ಸಿದ್ದು ಸವದಿ, ಶಾಸಕರು 

ಶಾಲೆ ಗೋಡೆಗೆ ಮೆಟ್ರೋ ರೈಲಿನ ಬಣ್ಣ ಬಳಿಯುವ ಮೂಲಕ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ನೆರವಾಗಿದೆ. ಶಿಕ್ಷಕರು ಕಲಿಕೆಯಲ್ಲಿ ವಿನೂತನ ಪ್ರಯೋಗ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು.
.ಎಂ. ಬಿ. ಮೋರಟಗಿ,
ಕ್ಷೇತ್ರ ಶಿಕ್ಷಣಾಧಿಕಾರಿ

ಮಕ್ಕಳ ಸುಂದರ ಭವಿಷ್ಯದ ಏಳ್ಗೆಗಾಗಿ ವಿನೂತನ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಇಲ್ಲಿನ ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು.
. ವಿಜಯಕುಮಾರ ವಂದಾಲ,
 ಕ್ಷೇತ್ರ ಸಮನ್ವಯಾಧಿಕಾರಿ.

ಹೊಸತನದ ರಂಗು ಮಕ್ಕಳಲ್ಲಿ ಮೂಡಬೇಕು, ಅದು ಆಕರ್ಷಣಿಯವಾಗಿರಬೇಕು. ಮಕ್ಕಳು ತಪ್ಪದೆ ಶಾಲೆಗೆ ನಿಯಮಿತವಾಗಿ ಬರುವಂತಾಗಲಿ, ಅವರು ಶಿಸ್ತು ಕಂಡುಕೊಳ್ಳಬೇಕು ಎಂಬ ಕಾರಣದಿಂದ ಎಲ್ಲ ಶಿಕ್ಷಕರ ಎಸ್‌ಡಿಎಂಸಿಯವರ ಸಹಕಾರ ಪಡೆದು ಮೆಟ್ರೊ ರೈಲಿನ ಬಣ ¡ಬಳಿದಿದ್ದೇವೆ. ಇದು ಈಗ ಮಕ್ಕಳ ಗಮನವನ್ನಷ್ಟೆ ಅಲ್ಲ ಶಾಲೆ ನೋಡುಗರ ಗಮನ ಸೆಳೆಯುತ್ತಿದೆ.
.ಬಿ. ಎಂ. ಪಾಟೀಲ,
ಮುಖ್ಯಗುರುಗಳು

ಹೊಸ ಹೊಸ ಮಾದರಿಯ ಶಿಕ್ಷಕರ ಪ್ರಯೋಗಗಳು ಮಕ್ಕಳಿಗೆ ಮನ ಮುಟ್ಟಲಿ. ಇಂತಹ ಒಳ್ಳೆಯ ಪ್ರಯತ್ನಗಳು ಇನ್ನೊಂದು ಶಾಲೆಗೆ ಮಾದರಿಯಾಗಲಿ.
.ಶ್ರೀಶೈಲ ಬುರ್ಲಿ,
ಶಿಕ್ಷಣ ಸಂಯೋಜಕ

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.