ಎಲ್‌ಇಡಿ ಲೈಟ್‌; ಸವಾರರಿಗೆ ಕಿರಿಕ್‌


Team Udayavani, Mar 19, 2019, 9:25 AM IST

bagal.jpg

ಗುಳೇದಗುಡ್ಡ: ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್‌ ಬಳಸುವಂತಿಲ್ಲ. ಇದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿದ ವಾಹನ ಸವಾರರು ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳನ್ನು ಬೈಕ್‌, ಟಂಟಂ ಸೇರಿದಂತೆ ಹಲವು ವಾಹನಗಳಿಗೆ ಅಳವಡಿಸಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ವಾಹನಗಳಿಗೆ ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳ ಬಳಕೆ ಹೆಚ್ಚುತ್ತಿದ್ದು, ಇದರಿಂದ ಎದುರಿಗೆ ಬರುವ ವಾಹನ ಸವಾರ ಭಯದಲ್ಲೇ ಸಂಚರಿಸುವಂತಾಗಿದೆ. ಸಂಬಂಧಪಟ್ಟವರು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲವಾಗಿದೆ. 

ಏನು ಹೇಳುತ್ತೆ ನಿಯಮ: ಆರ್‌ಟಿಒ ಅಧಿಕಾರಿಗಳೇ ಹೇಳುವಂತೆ ವಾಹನ ತಯಾರಿಸುವಾಗ ಆ ಕಂಪನಿ ನೀಡಿರುವ ಲೈಟ್‌ ಬಿಟ್ಟರೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಬೇರೆ ಲೈಟ್‌ ಅಳವಡಿಸುವಂತಿಲ್ಲ. ಅಷ್ಟೇ ಏಕೆ ಹಾರ್ನ್ ಕೂಡ ಬೇರೆ ಹಾಕುವಂತಿಲ್ಲ. ಇಷ್ಟೇ ಡೆಸಿಬಲ್‌ ಪ್ರಮಾಣದ ಹಾರ್ನ್ ಹಾಕುವಂತಹ ನಿಯಮಗಳಿದ್ದರೂ ಹಲವು ವಾಹನ ಸವಾರರು ಈ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಲೈಟ್‌ ಅಳವಡಿಸುತ್ತಿದ್ದಾರೆ.

ಏಕೆ ಬಳಸುತ್ತಿದ್ದಾರೆ ಈ ಲೈಟ್‌: ಬೈಕ್‌, ಟಂಟಂಗಳ ಲೈಟ್‌ಗಳು ಹೆಚ್ಚು ಬೆಳಕು ನೀಡುತ್ತಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ದೊಡ್ಡ ವಾಹನಗಳು ಎದುರಿಗೆ ಬಂದಾಗ ಆ ವಾಹನಗಳ ಲೈಟ್‌ ಮುಂದೆ ಬೈಕ್‌ಗಳ ಲೈಟ್‌ ಬೆಳಕು ಕಡಿಮೆಯಾಗುತ್ತಿರುವುದರಿಂದ ಈ ಎಲ್‌ಇಡಿ ಲೈಟ್‌ಗಳನ್ನೇ ಹೆಚ್ಚು ಬಳಸಲಾಗುತ್ತಿದೆ. ಆದರೆ ಈ ಲೈಟ್‌ಗಳಿಂದ ಒಳ್ಳೆಯದಕ್ಕಿಂತ ಅಪಾಯವೇ ಜಾಸ್ತಿ. ಆದರೂ ಸಹ ಇದರ ಬಳಕೆ ದಿನೇ ದಿನೇ ಹೆಚ್ಚುತ್ತಿದೆ.

ಅಪಾಯ ಏನು: ಎಲ್‌ಇಡಿ ಲೈಟ್‌ ಬಳಕೆ ಮಾಡುವುದರಿಂದ ಪೋಕಸ್‌ ಹೆಚ್ಚಾಗಿ ಎದುರಿಗೆ ಬರುವ ವಾಹನ ಸವಾರನಿಗೆ
ದಾರಿ ಕಾಣದಂತಾಗುತ್ತದೆ. ಇದರಿಂದ ವಾಹನ ಸವಾರ ಕೆಲವು ಸಲ ನಿಯಂತ್ರಣ ತಪ್ಪುವಂತಹ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲ ಎಲ್‌ಇಡಿಗಳು ಅತಿಯಾದ ಬೆಳಕು ಕೊಡುವುದರಿಂದ ಎದುರಿನ ವಾಹನ ಸವಾರ ರಸ್ತೆ ಪಕ್ಕಕ್ಕೆ ಸರಿಯಲು ಹೋಗಿ ಅಪಾಯ ಮಾಡಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ ಎಂಬುದು ಹಲವು ವಾಹನ ಸವಾರರ ಆರೋಪ.

ಬೈಕ್‌ ಸವಾರರ ವಾದ ಏನು: ಎದುರಿಗೆ ಕಾರು, ಲಾರಿ ಬಂದಾಗ ಆ ವಾಹನಗಳ ಸವಾರರು ಲೈಟ್‌ ಡಿಪ್‌ ಮತ್ತು ಡಿಮ್‌ ಮಾಡುವುದಿಲ್ಲ. ಇದರಿಂದ ನಮ್ಮ ಬೈಕ್‌ಗಳ ಲೈಟ್‌ಗಳ ಫೋಕಸ್‌ ಕಡಿಮೆಯಾಗುತ್ತದೆ. ಇದರಿಂದ ನಾವು ರಸ್ತೆ ಕಾಣಲಿ ಎಂದು ಎಲ್‌ಇಡಿ ಲೈಟ್‌ ಅಳವಡಿಸುತ್ತೇವೆ. ಎದುರಿಗೆ ಬರುವ ವಾಹನ ಸವಾರರು ಸಹ ತಮ್ಮ ವಾಹನಗಳ ಲೈಟ್‌ ಬೆಳಕು ಕಡಿಮೆ ಮಾಡಬೇಕು. ಅವರು ಮಾಡುವುದಿಲ್ಲ ಎಂದು ನಾವು ಎಲ್‌ಇಡಿ ಲೈಟ್‌ ಅಳವಡಿಸಿದ್ದೇವೆ ಎನ್ನುತ್ತಾರೆ ಎಲ್‌ಇಡಿ ಲೈಟ್‌ ಅಳವಡಿಸಿರುವ ಸವಾರರು. 

ಕಳೆದ ಹಲವು ತಿಂಗಳಿಂದ ಬೈಕ್‌, ಟಂಟಂ ವಾಹನ ಸವಾರರು ಎಲ್‌ಇಡಿ ಲೈಟ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರ ಕಣ್ಣಿಗೆ ಕತ್ತಲು ಆವರಿಸಿದಂತಾಗುತ್ತದೆ. ಎಲ್‌ಇಡಿ ಲೈಟ್‌ನಿಂದ ಅಪಾಯಗಳು ತಪ್ಪಿದ್ದಲ್ಲ. ಆದ್ದರಿಂದ ಈ ಎಲ್‌ಇಡಿ ಲೈಟ್‌ ನಿಷೇಧಿ ಸಿ ಜನರ ಪ್ರಾಣ ಉಳಿಸಬೇಕು. 
 ಸಂಗಪ್ಪ ಚಟ್ಟೇರ, ಸಾಮಾಜಿಕ ಕಾರ್ಯಕರ್ತ, ಗುಳೇದಗುಡ್ಡ

ಎಲ್‌ಇಡಿ ಲೈಟ್‌ ಬಳಕೆ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಲೈಟ್‌ ಬಳಸುವುದರಿಂದ ವಾಹನ ಸವಾರನ ಕಣ್ಣಿನ ರೇಟಿನಾದಲ್ಲಿ ತೊಂದರೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.  
 ಡಾ|ಜಗದೀಶ ಸತರಡ್ಡಿ, ನೇತ್ರ ತಜ್ಞರು, ದೃಷ್ಟಿ ಕಣ್ಣಿನ ಆಸ್ಪತ್ರೆ, ಬಾಗಲಕೋಟ 

 ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.