ಮುಂದೆ ಬಂದ್ರೆ ಹಾಯ್ ಬಹುದು
Team Udayavani, Jan 11, 2017, 11:02 AM IST
ಒಂದೆರಡು ವರ್ಷಗಳ ಹಿಂದೆ “ಹಾಯ್’ ಎಂಬ ಸಿನಿಮಾವೊಂದು ಸೆಟ್ಟೇರಿದ ಬಗ್ಗೆ ನಿಮಗೆ ನೆನಪಿರಬಹುದು. ಆ ಸಿನಿಮಾ ಏನಾಯಿತು ಎಂದು ನೀವು ಕೇಳುವ ಹೊತ್ತಿಗೆ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ಆಗಿದೆ. ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿ ಖುಷಿಪಟ್ಟಿದೆ. ರಾಘವೇಂದ್ರ ಕಠಾರೆ ಹಾಗೂ ಸಿ.ರಾಜೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿ.ಎನ್. ರುದ್ರೇಶ್ ಈ ಸಿನಿಮಾದ ನಿರ್ದೇಶಕರು. ಯಶ್ರಾಜ್ ದೇವ್ ಹಾಗೂ ಸಾನ್ಯ ಈ ಚಿತ್ರದ ನಾಯಕ-ನಾಯಕಿ.
ನಿರ್ದೇಶಕ ರುದ್ರೇಶ್ ಹೇಳುವಂತೆ, “ಹಾಯ್’ ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವ ವಿಶ್ವಾಸವಿದೆಯಂತೆ. ಚಿತ್ರದಲ್ಲಿ ಲವ್ಸ್ಟೋರಿ ಜೊತೆಗೆ ಕಾಮಿಡಿಯೂ ಇದ್ದು, ಇಂದಿನ ಟ್ರೆಂಡ್ಗೆ ತಕ್ಕಂತೆ ಮೂಡಿಬಂದ ವಿಶ್ವಾಸ ನಿರ್ದೇಶಕರದು. ನಿರ್ಮಾಪಕ ರಾಘವೇಂದ್ರ ಕಠಾರೆ ತಮಗೆ ಬೆಂಬಲವಾಗಿ ನಿಂತವರಿಗೆ ಥ್ಯಾಂಕ್ಸ್ ಹೇಳುವಷ್ಟಕ್ಕೆ ತಮ್ಮ ಮಾತು ಮುಗಿಸಿದರು. ನಾಯಕ ಯಶ್ರಾಜ್ಗೆ ಈ ಸಿನಿಮಾ ಮೂಲಕ ಗೆಲುವು ಸಿಗುವ ವಿಶ್ವಾಸವಿದೆಯಂತೆ.
ಅವರ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆಯಂತೆ. ಎಲ್ಲರ ಪ್ರೋತ್ಸಾಹದಿಂದ ಚೆನ್ನಾಗಿ ನಟಿಸಿದ್ದೇನೆ ಎಂಬ ವಿಶ್ವಾಸ ಯಶ್ರಾಜ್ ಅವರಿಗಿದೆಯಂತೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಹಾಡುಗಳು ಸೊಗಸಾಗಿ ಮೂಡಿಬಂದಿವೆಯಂತೆ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ದಾವಣಗೆರೆ, ಮಂಗಳೂರು, ಚಿಕ್ಕಮಗಳೂರು ಹಾಗೂ ಬ್ಯಾಂಕಾಕ್ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ