ಹೊಂಬಾಳೆ – ಪುನೀತ್ ಬ್ಯಾನರ್ನಲ್ಲಿ ಅರ್ಧ ಸತ್ಯ
Team Udayavani, Mar 20, 2017, 3:45 PM IST
ಪುನೀತ್ರಾಜಕುಮಾರ್ ಹೊಸ ಬ್ಯಾನರ್ ಹುಟ್ಟುಹಾಕಿ ಆ ಮೂಲಕ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಹಾಗೂ ಆ ಚಿತ್ರವನ್ನು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನಿರ್ದೇಶಿಸಿದ ಹೇಮಂತ್ ರಾವ್ ನಿರ್ದೇಶಿಸಲಿದ್ದಾರೆಂಬ ಸುದ್ದಿಯನ್ನು ನೀವು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಓದಿದ್ದೀರಿ.
ಆದರೆ ಚಿತ್ರಕ್ಕೆ ಟೈಟಲ್ ಫೈನಲ್ ಆಗಿರಲಿಲ್ಲ. ಈಗ ಚಿತ್ರಕ್ಕೆ “ಅರ್ಧಸತ್ಯ’ ಎಂಬ ಶೀರ್ಷಿಕೆ ಇಡಲಾಗಿದೆ. ಹೊಂಬಾಳೆ ಫಿಲಂಸ್ ಹಾಗೂ ಪುನೀತ್ ರಾಜಕುಮಾರ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಫಿಲಂಸ್ ಪುನೀತ್ ಅವರ “ನಿನ್ನಿಂದಲೇ’ ಹಾಗೂ “ರಾಜ್ ಕುಮಾರ’ ಚಿತ್ರ ನಿರ್ಮಿಸಿದ್ದು, “ರಾಜ್ಕುಮಾರ’ ಈ ವಾರ ತೆರೆಕಾಣುತ್ತಿದೆ. ಈಗ ಹೇಮಂತ್ ಸಿನಿಮಾವನ್ನು
ನಿರ್ಮಿಸುತ್ತಿದೆ.
“ಅರ್ಧಸತ್ಯ’ ಎಂಬ ಟೈಟಲ್ನಡಿ ಹೇಮಂತ್ ಏನು ಹೇಳಲು ಹೊರಟಿದ್ದಾರೆಂಬುದು ಸದ್ಯಕ್ಕೆ ಸಸ್ಪೆನ್ಸ್.
ಚಿತ್ರದಲ್ಲಿ ಒಂದಷ್ಟು ಹೊಸ ಮುಖಗಳಿಗೂ ಅವಕಾಶ ಸಿಗಲಿದೆಯಂತೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ,
ಅದ್ವೆ„ತ್ ಗುರುಮೂರ್ತಿ ಛಾಯಾಗ್ರಹಣವಿದೆ. ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು,
ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ