ನಂಗೆ ನಾನೇ ಕಟ್ಟಿ ಕೊಂಡೆ ಗೋರಿ..ಕ್ರ್ಯಾಕ್ ಸಿನಿಮಾಗೆ ಶರಣ್ ಗಾನ
Team Udayavani, Jun 22, 2017, 4:30 PM IST
ಶರಣ್ ಇತ್ತೀಚೆಗೆ ಹಾಡುವ ಮೂಡ್ ನಲ್ಲಿದ್ದಾರೆ. ಕಳೆದ ವಾರವಷ್ಟೇ ಅವರು “ಮುಗುಳು ನಗೆ’ ಚಿತ್ರಕ್ಕಾಗಿ ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಿದ್ದರು. ಈಗ ವಿನೋದ್ ಪ್ರಭಾಕರ್ ಅಭಿನಯದ “ಕ್ರ್ಯಾಕ್’ ಚಿತ್ರಕ್ಕೆ ಹಾಡಿದ್ದಾರೆ. ರಾಮ್ನಾರಾಯಣ್ ನಿರ್ದೇಶನದ ಚಿತ್ರಕ್ಕೆ ಗಾಯಕಿ ಶಮಿತಾ ಮಲಾ°ಡ್ ಸಂಗೀತ ನೀಡಿದ್ದಾರೆ.
ರಾಮ್ನಾರಾಯಣ್ ಬರೆದ “ನಂಗೆ ನಾನೇ ಕಟ್ಟಿಕೊಂಡೆ ಗೋರಿ ಬಿಟ್ಟು ಕೊಟ್ಟೆ ನನ್ನಾ ಕಾವೇರಿ, ಕಾವೇರಿ… ಸೋ ಸಾರಿ …’ ಎಂಬ ಹಾಡಿಗೆ ಯಾರ ಧ್ವನಿ ಸೂಕ್ತವಾಗುತ್ತೆ ಅನ್ನುವ ಚರ್ಚೆ ನಡೆಸುತ್ತಿರುವಂತೆಯೇ, ಶರಣ್ ವಾಯ್ಸ ಈ ಹಾಡಿಗೆ ಸೂಕ್ತ ಎಂದು ಅವರಿಂದಲೇ ಹಾಡಿಸಲಾಗಿದೆ. ಈ ಹಿಂದೆ ಎರಡು ಕಲಾತ್ಮಕ ಚಿತ್ರಗಳಿಗೆ ಸಂಗೀತ ಕೊಟ್ಟಿರುವ ಶಮಿತಾ ಮಲಾ°ಡ್ ಅವರಿಗೆ “ಕ್ರ್ಯಾಕ್’ ಮೊದಲ ಕಮರ್ಷಿಯಲ್ ಸಿನಿಮಾ. ಹಾಗಾಗಿ, ಇಲ್ಲಿರುವ ಪ್ರತಿಯೊಂದು ಹಾಡೂ ಸಹ ಹೊಸತನದಿಂದ ಕೂಡಿವೆ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, “ಟೈಸನ್’ ನಂತರ ನಿರ್ದೇಶಕ ರಾಮ್ನಾರಾಯಣ್ ಹಾಗೂ ವಿನೋದ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ “ಕ್ರ್ಯಾಕ್’. ವಿನೋ¨ …ಪ್ರಭಾಕರ್ ಇಲ್ಲಿ ವಿಭಿನ್ನವಾಗಿ ವರ್ತಿಸುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಹಾಗಾಗಿ, ಚಿತ್ರಕ್ಕೆ “ಕ್ರ್ಯಾಕ್’ ಎಂದು ನಾಮಕರಣ ಮಾಡಿದ್ದಾರೆ.
ವಿನೋದ್ಗೆ ಜೋಡಿಯಾಗಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ಮುಗಿದಿದ್ದು, ರಿಲೀಸ್ಗೆ ರೆಡಿಯಾಗಿದೆ. ಚಿತ್ರಕ್ಕೆ ವಿಜಯ್ ಕುಮಾರ್ ಹಾಗೂ ಶಂಕರ್ ಇಳಕಲ್ ನಿರ್ಮಾಪಕರು. ಜಬೇಜ್ ಗಣೇಶ್ ಕ್ಯಾಮೆರಾ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ