ಮಾಸ್ ಲೀಡರ್ಗೆ ದನಿಯಾದ ಸ್ಟಾರ್ಸ್ಸ್
Team Udayavani, Aug 10, 2017, 2:51 PM IST
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿರುವುದರಿಂದ “ಮಾಸ್ ಲೀಡರ್’ ಚಿತ್ರದ ಪ್ರಚಾರಕ್ಕಾಗಿ, “ಈ ಮಣ್ಣಿನಲ್ಲಿ’ ಎಂಬ ಹಾಡನ್ನು ಕನ್ನಡ ನಟ-ನಟಿಯರಿಂದ ಹಾಡಿಸಿದ್ದಾರೆ. ಈ ಹಾಡಲ್ಲಿ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಗಣೇಶ್, ಶ್ರೀಮುರಳಿ, ವಿಜಯರಾಘವೇಂದ್ರ, ಪ್ರಿಯಾಂಕ ಉಪೇಂದ್ರ, ನೆನಪಿರಲಿ ಪ್ರೇಮ್, ಶರಣ್, ರಾಗಿಣಿ ಹಾಗೂ ಆಶಿಕಾ ಕಾಣಿಸಿಕೊಳ್ಳುವ ಮೂಲಕ “ಮಾಸ್ ಲೀಡರ್’ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.