ಪಾಲಿಗೆ ಬಂದಿದ್ದೇ ಪಂಚಾಮೃತ ಬಕೆಟ್‌ ಹಿಡಿಯಲ್ಲ; ಅವಕಾಶ ಕೇಳಲ್ಲ


Team Udayavani, Sep 23, 2017, 3:24 PM IST

Mamatha-Rahuth-(4).jpg

ಬಹುಶಃ ಕನ್ನಡದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವ ಹೀರೋಯಿನ್‌ ಎಂದರೆ ಅದು ಮಮತಾ ರಾಹುತ್‌ ಇರಬೇಕು. ಪ್ರತಿವರ್ಷ ಆಕೆಯ ಐದಾರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಆ ಚಿತ್ರಗಳು ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಆದರೂ ಮಮತಾ ರಾಹುತ್‌ಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಮಮತಾ ಅಭಿನಯದ “ರೂಪಾ’ ಎಂಬ ಚಿತ್ರ ಬಿಡುಗಡೆಯಾಗಿದೆ. ಇನ್ನು ಸದ್ಯದಲ್ಲೇ “ಗ್ಯಾಪಲ್ಲೊಂದು ಸಿನಿಮಾ’, “ನಮ್ಮೂರ ಹೈಕ್ಳು’ ಎಂಬ ಚಿತ್ರಗಳು ಬಿಡುಗಡೆಯಾಗಿವೆ. “ಶಿವನ ಪಾದ’ ಎಂಬ ಚಿತ್ರ ಸೆಟ್ಟೇರಿದೆ. 

ಇನ್ನು “ಧರ್ಮಸ್ಯ’ದಲ್ಲೊಂದು ಐಟಂ ಸಾಂಗು, ಇನ್ನಾವುದೋ ಚಿತ್ರದಲ್ಲೊಂದು ಕಾಮಿಡಿ ಸೀನು … ಹೀಗೆ ಮಮತಾ ರಾಹುತ್‌ ಒಂದಲ್ಲ ಒಂದು ಸಿನಿಮಾ ಮತ್ತು ಒಂದಲ್ಲೊಂದು ಪಾತ್ರದಲ್ಲಿ ಬಿಝಿಯಾಗಿಯೇ ಇದ್ದಾರೆ. ಎಲ್ಲಾ ಸರಿ, ಇದುವರೆಗೂ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಎಷ್ಟಾಗಿರಬಹುದು ಎಂದರೆ, ಕಾಮಿಡಿ ಪಾತ್ರಗಳಲ್ಲಿ 40 ಮತ್ತು ನಾಯಕಿಯಾಗಿ 60 ಎಂಬ ಉತ್ತರ ಅವರಿಂದ ಬರುತ್ತದೆ. ಅಲ್ಲಿಗೆ, ಸಂಖ್ಯೆ 60 ದಾಟುತ್ತದೆ.

ಅಷ್ಟೊಂದಾಗಿದೆಯಾ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಅವರ ಉತ್ತರ ಹೀಗಿದೆ. “ನಾನು ಚಿತ್ರರಂಗಕ್ಕೆ ಬಂದು 14 ವರ್ಷಗಳಾಯಿತು. 2005ರಲ್ಲಿ ಬಿಡುಗಡೆಯಾದ “ಪುಟಾಣಿ ಫೋರ್ಸ್‌ ಎ ಟು ಝಡ್‌’ ನನ್ನ ಮೊದಲ ಸಿನಿಮಾ. ಆಗ ಅವಕಾಶ ಸಿಗೋದೇ ಕಷ್ಟವಾಗಿತ್ತು. ಸಿಕ್ಕಿದ್ದನ್ನು ಮಾಡಿದೆ. ತುಂಬಾ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದೆ. ಎಷ್ಟೋ ಜನ ಅವಮಾನ ಮಾಡಿದ್ರು, ಕಾಲೆಳೆದ್ರು. ನಾನು ಏನಾದ್ರೂ ಸಾಧನೆ ಮಾಡಬೇಕು ಎಂದು ಅದ್ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಕೆಲಸ ಮಾಡುತ್ತಾ ಹೋದೆ’ ಎನ್ನುತ್ತಾರೆ ಅವರು.

ಹೀಗೇ ಅಭಿನಯಿಸುವಾಗ ಕ್ರಮೇಣ ಹೀರೋಯಿನ್‌ ಪಾತ್ರಗಳು ಸಿಕ್ಕವಂತೆ. ಅದೂ ಸಹ ದೊಡ್ಡ ಚಿತ್ರಗಳೇನಲ್ಲ. “ಕನ್ನಡದವರಿಗೆ ಅದ್ಯಾಕೆ ಅವಕಾಶ ಸಿಗುವುದಿಲ್ಲವೋ ಗೊತ್ತಿಲ್ಲ. ಅದೇನೋ ಹೇಳ್ತಾರಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಬೇರೆ ಕಡೆ ತುಪ್ಪಕ್ಕೆ ಹುಡುಕ್ತಾರೆ ಅಂತ. ನಮ್ಮದೂ ಅದೇ ಪರಿಸ್ಥಿತಿ. ಎಲ್ಲೆಂಲಿಂದಲೋ ನಾಯಕಿಯರನ್ನು ಹುಡುಕಿಕೊಂಡು ಬರ್ತಾರೆ. ಹಾಗಂತ ನಾನು ಧೂಷಣೆ ಮಾಡೋಲ್ಲ. ಏಕೆಂದರೆ, ನಾನು ಸಹ ತೆಲುಗು ಸಿನಿಮಾದಲ್ಲಿ ಮಾಡಿದ್ದೀನಿ. ನಾನು ಮೂಲತಃ ಇಲ್ಲಿಯವಳಾದರೂ, ಹೈದರಾಬಾದ್‌ ನನ್ನ ಎರಡನೆಯ ಮನೆ ಆಗಿಬಿಟ್ಟಿದೆ. ಇನ್ನೂ ಎರಡೂಮೂರು ತೆಲುಗು ಚಿತ್ರಗಳಲ್ಲಿ ನಟಿಸುವುದಕ್ಕೆ ಆಫ‌ರ್‌ ಬಂದಿದೆ. ಒಂದೇ ಸಿನಿಮಾದಲ್ಲಿ ನಾನು ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ನಟಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಮತಾ.

ಮಮತಾಗೆ ಸಿನಿಮಾ ಹಿನ್ನೆಲೆ ಇಲ್ಲವಂತೆ. ತಂದೆ ನೇಕಾರರು, ಗಾರ್ಮೆಂಟ್ಸ್‌ ಇಟ್ಟುಕೊಂಡವರು. ಈಗ ಅವರಿಗೆ ರೆಸ್ಟ್‌ ಕೊಟ್ಟು, ಮನೆಯ ಜವಾಬ್ದಾರಿ ಇವರು ತಗೊಂಡಿದ್ದಾರಂತೆ. “ಅವರು ನಮಗಾಗಿ ಸಾಕಷ್ಟು ದುಡಿದಿದ್ದಾರೆ. ಹಾಗಾಗಿ ಈಗ ಅವರಿಗೆ ರೆಸ್ಟ್‌. ನನ್ನ ಸಂಭಾವನೆ ಎಲ್ಲಾ ಅವರೇ ನೋಡ್ಕೊತಾರೆ. ನಾನು ಅವರ ಬಳಿ ತಿಂಗಳಿಗೆ ಇಷ್ಟು ಅಂತ ಪಾಕೆಟ್‌ ಮನಿ ತಗೋತೀನಿ. ಇಷ್ಟು ಸಿನಿಮಾಗಳಲ್ಲಿ ನಟಿಸಿರಬೇಕಾದರೆ, ತುಂಬಾ ದುಡ್ಡು ದುಡಿದಿರಬಹುದು ಅಂತ ಎಲ್ಲರೂ ಅಂದೊಳ್ಳೋದು ಸಹಜ. ಆದರೆ, ನಮಗೆ ಅಷ್ಟೊಂದು ಸಂಭಾವನೆ ಯಾರು ಕೊಡುತ್ತಾರೆ ಹೇಳಿ. ಎಲ್ಲರೂ ಲೋ ಬಜೆಟ್‌ ಸಿನಿಮಾ ಮಾಡ್ತೀವಿ ಅಂತಲೇ ಬರುತ್ತಾರೆ. ಇನ್ನು ಕಡಿಮೆ ಕೊಟ್ಟರೂ, ಬರಬೇಕಾಗಿರೋದೇ 15 ಲಕ್ಷದವರೆಗೂ ಇದೆ. ಅದೆಲ್ಲಾ ಹೇಗೆ ಕೇಳ್ಳೋದು ಹೇಳಿ’ ಎಂಬ ಪ್ರಶ್ನೆ ಅವರಿಂದ ಬರುತ್ತದೆ.

ದೊಡ್ಡ ಚಿತ್ರಗಳಲ್ಲಿ ಮತ್ತು ದೊಡ್ಡ ಹೀರೋಗಳ ಜೊತೆಗೆ ಅವಕಾಶ ಸಿಕ್ಕಿಲ್ಲ ಎಂಬ ಸಣ್ಣ ಬೇಸರವಿದ್ದರೂ, ಮಮತಾ ತೋರಿಸಿಕೊಳ್ಳುವುದಿಲ್ಲ. “ದೊಡ್ಡ ಅವಕಾಶ ಸಿಗದಿದ್ದರೂ ಪರವಾಗಿಲ್ಲ. ನಾನು ಬಕೆಟ್‌ ಹಿಡಿಯುವುದಿಲ್ಲ. ಅವಕಾಶ ಕೊಡಿ ಅಂತ ಕೇಳಲ್ಲ. ಸಿನಿಮಾ ಇಲ್ಲ ಅಂದ್ರೂ ನೋ ಪ್ರಾಬ್ಲಿಮ್‌. ಟ್ಯೂಶನ್‌ ಹೇಳಿಕೊಡಬಲ್ಲೆ. ಅಡುಗೆ ಮಾಡಬಲ್ಲೆ. ಅದರಿಂದಲೇ ಬದುಕು ಕಟ್ಟಿಕೊಳ್ಳಬಹುದು ಅಂತ ನಂಬಿಕೆ ಇದೆ’ ಎನ್ನುತ್ತಾರೆ ಮಮತಾ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.