ರವಿಶಂಕರ್‌ ಫ್ಯಾನ್‌ ಆಫ್ ರಾಜಕುಮಾರ್‌!


Team Udayavani, Oct 23, 2017, 6:36 PM IST

RLR-(2).jpg

ಖಳನಟ ರವಿಶಂಕರ್‌ ತೆರೆಯ ಮೇಲೆ ಎಷ್ಟು ಗಂಭೀರವಾಗಿ, ಭಯಂಕರವಾಗಿ ಕಾಣುತ್ತಾರೋ, ಅಷ್ಟೇ ಆಪ್ತವಾಗಿ, ಹಾಸ್ಯದ ಹೊನಲೆಬ್ಬಿಸುತ್ತಾರೆ. ಅನೇಕ ಚಿತ್ರಗಳಲ್ಲಿ ಹೀರೋಗಳಿಗೆ ಸಖತ್‌ ಕಿರಿಕ್‌ ಕೊಟ್ಟಿರುವ ರವಿಶಂಕರ್‌, ಬೆರಳೆಣಿಕೆ ಚಿತ್ರಗಳಲ್ಲೂ ವಿಲನ್‌ಗಳಿಗೆ ಅಷ್ಟೇ ಕ್ವಾಟ್ಲೆ ಕೊಟ್ಟಿದ್ದಾರೆ.

ಹೌದು, “ಅಧ್ಯಕ್ಷ’, “ವಿಕ್ಟರಿ’ ಬಳಿಕ ರವಿಶಂಕರ್‌ಗೆ ಮತ್ತೂಂದು ಅಂಥದ್ದೇ ಪಾತ್ರ ಸಿಕ್ಕಿದೆ. ಔಟ್‌ ಅಂಡ್‌ ಔಟ್‌ ಕಾಮಿಡಿಯಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರವಿಶಂಕರ್‌. ಅದು ವಿಜಯ್‌ ರಾಘವೇಂದ್ರ, ರಾಧಿಕಾ ಪ್ರೀತಿ ನಾಯಕ-ನಾಯಕಿಯರಾಗಿ ನಟಿಸಿರುವ “ರಾಜ ಲವ್ಸ್‌ ರಾಧೆ’ ಚಿತ್ರ.

ಈ ಚಿತ್ರದಲ್ಲಿ ರವಿಶಂಕರ್‌ ಅವರದು ಹೀರೋ ಹಾಗು ಆತನ ಗೆಳೆಯರಿಗೆ ಸಹಾಯ ಮಾಡುವ ಪಾತ್ರ. ಅದಷ್ಟೇ ಅಲ್ಲ, ಈ ಸಿನಿಮಾದಲ್ಲಿ ರವಿಶಂಕರ್‌ ಅವರು ಪಕ್ಕಾ ಡಾ.ರಾಜಕುಮಾರ್‌ ಅಭಿಮಾನಿಯಾಗಿ ಚಿತ್ರದಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದಾರೆ.

ಅವರು ಹರಿಬಿಡುವ ಮಾತುಗಳ ನಡುವೆ ಅಣ್ಣಾವ್ರ ಕೆಲ ಸಿನಿಮಾಗಳ ಡೈಲಾಗ್‌ಗಳನ್ನು ಹೇಳುವ ಮೂಲಕ ಪಕ್ಕಾ ಅಣ್ಣಾವ್ರ ಅಭಿಮಾನಿಯಾಗಿ ನಟಿಸಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೊಡ್ಡ ಫೈಟ್‌ ಸೀನ್‌ ಗಂಭೀರವಾಗಿದ್ದರೂ, ರವಿಶಂಕರ್‌ ಮತ್ತು ಅವರ ಹೀರೋ ಗೆಳೆಯರ ಎಂಟ್ರಿಯಿಂದ ಅದು ಹಾಸ್ಯಕ್ಕೆ ತಿರುಗುತ್ತದೆ.

ಆ ಫೈಟ್‌ನಲ್ಲಿ ರವಿಶಂಕರ್‌ ಅವರು ಡಾ.ರಾಜಕುಮಾರ್‌ ಅವರ ಮುಖವಾಡ ಧರಿಸಿಕೊಂಡು ರೌಡಿಗಳನ್ನು ಹಿಗ್ಗಾಮುಗ್ಗ ಥಳಿಸುತ್ತಾರೆ. ಅಷ್ಟೇ ಅಲ್ಲ, ಡಾ. ರಾಜಕುಮಾರ್‌ ಸಿನಿಮಾಗಳ ಡೈಲಾಗ್‌ ಹರಿಬಿಡುತ್ತಲೇ, ಎದುರಾಳಿಗಳನ್ನು ಎರ್ರಾಬಿರ್ರಿ ಹೊಡೆದುರುಳಿಸುತ್ತಾರೆ.

ಅವರಷ್ಟೇ ಅಲ್ಲ, ತಬಲಾ ನಾಣಿ, “ಮಜಾ ಟಾಕೀಸ್‌’ ಪವನ್‌ ಕುಮಾರ್‌, “ಕುರಿ’ ಸುನೀಲ್‌, “ಕುರಿ’ ರಂಗ ಇವರೆಲ್ಲರೂ ಶಿವರಾಜಕುಮಾರ್‌, ಸುದೀಪ್‌ ಹಾಗು ದರ್ಶನ್‌ ಅವರ ಮುಖವಾಡ ಧರಿಸಿಕೊಂಡು, ಅವರ ಚಿತ್ರಗಳ ಡೈಲಾಗ್‌ ಹರಿಬಿಡುತ್ತಲೇ ಫೈಟ್‌ ಮಾಡುತ್ತಾರೆ. ರವಿಶಂಕರ್‌ ಎಷ್ಟೋ ಚಿತ್ರಗಳಲ್ಲಿ ಹೀರೋಗಳ ವಿರುದ್ಧ ಆರ್ಭಟಿಸಿ ಹೊಡೆದಾಡುವುದನ್ನು ಕಾಣಬಹುದು.

ಆದರೆ, “ರಾಜ ಲವ್ಸ್‌ ರಾಧೆ’ ಚಿತ್ರದಲ್ಲಿ ಅವರು ನಕ್ಕು, ನಗಿಸುತ್ತಲೇ ಪೈಟ್‌ ಮಾಡಿರೋದು ವಿಶೇಷ. ಎಚ್‌.ಎಲ್‌.ಎನ್‌. ರಾಜ್‌ ಹೆಸರಘಟ್ಟ ನಿರ್ಮಾಣದ ಈ ಚಿತ್ರಕ್ಕೆ ರಾಜಶೇಖರ್‌ ನಿರ್ದೇಶಕರು. ಥ್ರಿಲ್ಲರ್‌ ಮಂಜು ಈ ಸಾಹಸ ದೃಶ್ಯವನ್ನು ನಿರ್ದೇಶಿಸಿದ್ದಾರೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.  

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.