ದೌಲತ್‌ ಮಹಲ್‌ನಲ್ಲಿ ಹಾರರ್‌ ಮಂತ್ರಂ


Team Udayavani, Nov 19, 2017, 10:07 AM IST

mantram.jpg

ಅದು ರಾಯಚೂರಿನಲ್ಲಿರುವ ಸುಮಾರು 300 ವರ್ಷಗಳ ಹಳೆಯ ಮಹಲ್‌. 50 ಬಾಗಿಲು, 150 ಕಿಟಕಿಗಳಿರುವ ಮಹಲ್‌ ಅದು. ಆ ಮಹಲ್‌ಗೆ ಇಟ್ಟಿರುವ ಹೆಸರು ದೌಲತ್‌ ಮಹಲ್‌. ಕಾಜನ್‌ ಗೌಡ್ರು ಆ ಮಹಲ್‌ನ ಯಜಮಾನ. ಆ ಮಹಲ್‌ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಬರಬಹುದು. ವಿಷಯ ಇರೋದೇ ಆ ದೌಲತ್‌ ಮಹಲ್‌ನಲ್ಲಿ. ಆ ಮಹಲ್‌ ಈಗ ಸುದ್ದಿಯಾಗೋಕೆ ಕಾರಣ, “ಮಂತ್ರಂ’ ಚಿತ್ರ.

ಹೊಸಬರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಆ ದೌಲತ್‌ ಮಹಲ್‌ ಮುಖ್ಯ ಆಕರ್ಷಣೆ. ಹೇಳಿ ಕೇಳಿ “ಮಂತ್ರಂ’ ಹಾರರ್‌ ಚಿತ್ರ. ಈ ಚಿತ್ರದ ಮೂಲಕ ಸಜ್ಜನ್‌ ನಿರ್ದೇಶಕರಾದರೆ, ಅಮರ್‌ ಚೌಧರಿ ನಿರ್ಮಾಪಕರು. ಇಬ್ಬರಿಗೂ ಇದು ಮೊದಲ ಪ್ರಯತ್ನ. ಚಿತ್ರದ ಕಥೆಗೊಂದು ಹಳೇ ಬಂಗಲೆ ಬೇಕಿತ್ತು. ಆ ತಂಡದ ಕಣ್ಣಿಗೆ ಬಿದ್ದಿದ್ದು ಇದೇ ದೌಲತ್‌ ಮಹಲ್‌. ಸಾಮಾನ್ಯವಾಗಿ ಹಾರರ್‌ ಚಿತ್ರ ಮಾಡುವಾಗ, ಒಂದಷ್ಟು ಕೆಟ್ಟ ಮತ್ತು ಭಯಾನಕ ಘಟನೆಗಳು ನಡೆಯೋದು ಸಹಜ.

ಅಂತಹ ಘಟನೆಗಳು “ಮಂತ್ರಂ’ ಚಿತ್ರೀಕರಣದಲ್ಲೂ ನಡೆದಿವೆ. ಹಳೆಯದಾದ ಆ ಮಹಲ್‌ನಲ್ಲಿ ಸುಮಾರು ನೂರು ವರ್ಷಗಳಿಂದ ಯಾರೂ ವಾಸ ಮಾಡಿಲ್ಲವಂತೆ. ಹಾಗಾಗಿ ಆ ಮಹಲ್‌ ಪಾಳು ಬಿದ್ದಿದೆ. ಆ ಮಹಲ್‌ನಲ್ಲಿ ಸುಮಾರು ಹದಿನಾಲ್ಕು ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿತ್ತು. ಮೊದಲ ಹಂತವಾಗಿ ಏಳು ದಿನಗಳ ಚಿತ್ರೀಕರಣದ ಯೋಜನೆ ಹಾಕಿಕೊಂಡಿದ್ದರು.

ಮೊದಲ ದಿನ ಮೂರು ದೃಶ್ಯ ಮುಗಿಸುವ ಗುರಿ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ಸಾಧ್ಯವಾಗಿದ್ದು, ಕೇವಲ ಅರ್ಧ ಸೀನ್‌ ಮಾತ್ರ. ಕಾರಣ, ಹಲವು ತೊಂದರೆಗಳು. ಕೆಲವರಿಗೆ ಇದ್ದಕ್ಕಿದ್ದಂತೆ ಜ್ವರ ಬಂದರೆ, ಇನ್ನೂ ಕೆಲವರು ಭಯಗೊಂಡು ತಲೆ ತಿರುಗಿ ಬಿದ್ದರಂತೆ. ಶೂಟ್‌ ಮಾಡಿದ ಯಾವುದೇ ದೃಶ್ಯ ಕಂಪ್ಲೀಟ್‌ ಆಗದಿರುವುದರಿಂದ ಎಲ್ಲರಿಗೂ ಭಯ ಕಾಡೋಕೆ ಶುರುವಾಯಿತಂತೆ. ಅದಕ್ಕೂ ಮುನ್ನ, ರಸ್ತೆ ಅಪಘಾತಗಳೂ ನಡೆದು, ಹಲವರು ಗಾಯಗೊಂಡಿದ್ದರಂತೆ.

ಕೊನೆಗೆ ಆ ಮಹಲ್‌ನಲ್ಲೇ ಏನೋ ಸಮಸ್ಯೆ ಇದೆ ಅಂದುಕೊಂಡು, ನಿರ್ಮಾಪಕ ಮತ್ತು ನಿರ್ದೇಶಕರು ಒಬ್ಬ ಗುರೂಜಿಯನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಅವರಿಗೆ ಸಿಕ್ಕ ಉತ್ತರ, ಆ ಮಹಲ್‌ ವರ್ಷಗಳಿಂದ ಖಾಲಿ ಇರುವುದರಿಂದ ಅಲ್ಲಿ ಪಾಸಿಟಿವ್‌ ಎನರ್ಜಿ ಮಾಯವಾಗಿ, ನೆಗೆಟಿವ್‌ ಎನರ್ಜಿ ತುಂಬಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. 25 ವರ್ಷ ಒಂದು ಮನೆ ಖಾಲಿ ಇದ್ದರೆ, ಅಲ್ಲಿ ಅಂತಹ ನೆಗೆಟಿವ್‌ ಎನರ್ಜಿ ಸಹಜ.

ಆದ್ದರಿಂದ ಒಂದು ಪೂಜೆ ಮಾಡಿಸಿಕೊಂಡು ಚಿತ್ರೀಕರಣ ಶುರುಮಾಡಿ ಅಂದರಂತೆ ಆ ಗುರೂಜಿ. ಕೊನೆಗೆ ಚಿತ್ರತಂಡ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗಿ ಬಂದು, ಚಿತ್ರೀಕರಣ ನಡೆಸಿದೆ. ಆದರೂ, ಅಲ್ಲಿ ಅಂದುಕೊಂಡಂತೆ ಚಿತ್ರೀಕರಿಸಲು ಸಾಧ್ಯವಾಗದೆ, ಉಳಿದ ದೃಶ್ಯವನ್ನು ಭೂತಬಂಗಲೆಯಲ್ಲಿ ಮಾಡಿದ್ದಾರೆ. ಆ ಮನೆ ಒಳಗೆ ಹೋದಾಗ, ಹಾವು, ಚೇಳು, ಬಾವಲಿಗಳದ್ದೇ ದರ್ಶನ. ದಂಗಾದ ಚಿತ್ರತಂಡ, ಎಲ್ಲವನ್ನೂ ಸ್ವತ್ಛಗೊಳಿಸಿ, ಕ್ಯಾಮೆರಾ ಆನ್‌ ಮಾಡಿದರೆ, ಒಂದೊಂದು ತೊಂದರೆ ಅನುಭವಿಸಿದೆ.

ಒಟ್ಟಾರೆ, ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಚಿತ್ರತಂಡ. ಡಿಸೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ನಾಯಕ  ಶಮಂತ್‌ ಶೆಟ್ಟಿಗೆ ಪಲ್ಲವಿ ರಾಜ್‌ ನಾಯಕಿ. ಉಳಿದಂತೆ ರಾಕ್‌ಲೈನ್‌ ಸುಧಾಕರ್‌, ಗೌರೀಶ್‌ ಅಕ್ಕಿ, ಶಶಿದೇಶಪಾಂಡೆ, ಆಯುಷ್‌, ಅನಿಲ್‌ ಇತರರು ಇದ್ದಾರೆ. ಅಂದಹಾಗೆ, ಇದೊಂದು ಹಾರರ್‌ ಚಿತ್ರವಾದರೂ, ಇಲ್ಲಿ ರಿವೇಂಜ್‌ ಸ್ಟೋರಿ ಇಲ್ಲ. ಬದಲಾಗಿ ಸಾಮಾಜಿಕ ಸಮಸ್ಯೆ ಕುರಿತು ಸಾಗಲಿದೆಯಂತೆ. ಅದಕ್ಕೊಂದು ಪರಿಹಾರವೂ ಇಲ್ಲಿದೆಯಂತೆ. ರಷೀದ್‌ ಸಂಗೀತವಿದೆ. ರವಿಬಸ್ರೂರ್‌ ಹಿನ್ನೆಲೆ ಸಂಗೀತವಿದೆ. ರಾಜ್‌ಶೇಖರ್‌ ಛಾಯಗ್ರಹಣವಿದೆ.

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.