“ಕಾಲ ಜಾಡು’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Team Udayavani, Nov 24, 2017, 3:10 PM IST
ಮುಸರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕವನ ಆಚಾರ್ಯ ಅವರು ನಿರ್ಮಿಸುತ್ತಿರುವ “ಕಾಲಜಾಡು ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ಕರ್ನಾಟಕದಾದ್ಯಂತ 55ದಿನಗಳ ಚಿತ್ರೀಕರಣ ನಡೆಯಲಿದೆ.
ರಂಗಭೂಮಿ ಮೂಲದವರಾದ ಉದಯಶಂಕರ್ ಅವರು ಕಥೆ, ಚಿತ್ರಕಥೆ ಬರೆದು, ಸಂಕಲನದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಎನ್.ಸಿ.ರಾಜು(ಬೆಳಗಾವಿ) ಸಹ ನಿರ್ದೇಶನದೊಂದಿಗೆ ಸಂಭಾಷಣೆ ಬರೆದಿದ್ದಾರೆ. ಗುರುದತ್ ಮುಸರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶರಣ್ ಹಿರೇಮಠ ಸಂಗೀತ ನೀಡಿದ್ದಾರೆ.
ಶರಣ್ ಹಿರೇಮಠ ಹಾಗೂ ಶಿವಕುಮಾರ್ ಶೆಟ್ಟಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹಾರರ್ ಕಥಾ ಹಂದರವುಳ್ಳ ಈ ಚಿತ್ರದ ತಾರಾಬಳಗದಲ್ಲಿ ಅನಿರೀಶ್, ಐಶ್ವರ್ಯ, ಸಂಗೀತ, ವಿನಯಾ ರಾಮ್ಪ್ರಸಾದ್, ಮಮತ, ವಿಶ್ವನಾಥ್, ಪ್ರೇಮ, ಕವನ ಆಚಾರ್ಯ ಮುಂತಾದವರಿದ್ದಾರೆ.