ಈ ಬಾರಿ ರಾಜೇಶ್ ಕೃಷ್ಣನ್ ಬದಲು ಹಂಸಲೇಖ!
Team Udayavani, Dec 9, 2017, 3:54 PM IST
ಕಳೆದ ಕೆಲವು “ಸರಿಗಮಪ ಲಿಟ್ಲ ಚಾಂಪ್ಸ್’ನ ಸೀಸನ್ಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ವಿಜಯಪ್ರಕಾಶ್ ಅವರುಗಳು ತೀರ್ಪುಗಾರರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಇದೇ ಕಾರ್ಯಕ್ರಮದ 14ನೇ ಸೀಸನ್ನಲ್ಲಿ ರಾಜೇಶ್ ಕೃಷ್ಣನ್ ಬದಲು ಹಂಸಲೇಖ ಮಹಾಗುರುವಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಹೌದು, ಜೀ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲೊಂದಾದ “ಸರಿಗಮಪ ಲಿಟ್ಲ ಚಾಂಪ್ಸ್’ನ 14ನೇ ಸೀಸನ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಬಾರಿಯ “ಸರಿಗಮಪ ಲಿಟ್ಲ ಚಾಂಪ್ಸ್’ನ ತೀರ್ಪುಗಾರರಾಗಿ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರ ಜೊತೆಗೆ ಮಹಾಗುರುಗಳಾಗಿ ಹಂಸಲೇಖ ಇರುತ್ತಾರೆ. ಇನ್ನು ಅನುಶ್ರೀ ಅವರು ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
“ಸರಿಗಮಪ ಲಿಟ್ಲ ಚಾಂಪ್ಸ್’ನ ಈ ಬಾರಿಯ ಸೀಸನ್ ಪೋಷಕರಿಗೆ ಅರ್ಪಣೆ ಮಾಡಲಾಗುತ್ತಿದ್ದು, ಎಂದಿನಂತೆ ಮೊದಲ ಸಂಚಿಕೆಯಲ್ಲಿ ಮೆಗಾ ಆಡಿಷನ್ ನಡೆಯಲಿದೆ. ಈ ಮೆಗಾ ಆಡಿಷನ್ನಲ್ಲಿ 30 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಯಾರು ತಮ್ಮ ಇಂಪಾದ ದನಿಯಿಂದ ತೀರ್ಪುಗಾರರ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆಸುತ್ತಾರೋ, ಅವರು ಸೀಸನ್ನಲ್ಲಿ ಮುಂದುವರೆಯುತ್ತಾರೆ.
ಈ ವೇದಿಕೆಯಲ್ಲಿ ಈ ಬಾರಿಯೂ 15 ಜ್ಯೂರಿ ಸದಸ್ಯರುಗಳು ಇದ್ದು, ಪ್ರತಿಯೊಬ್ಬ ಸ್ಪರ್ಧಿಗೂ ಈ 15 ಜ್ಯೂರಿ ಸದಸ್ಯರು ತಮ್ಮ ಅಂಕಗಳನ್ನು ನೀಡುತ್ತಾರೆ. ಈ “ಸರಿಗಮಪ ಲಿಟ್ಲ ಚಾಂಪ್ಸ್’ನ ಈ ಬಾರಿಯ ಸೀಸನ್ ಇಂದು ರಾತ್ರಿ ಶುರುವಾಗಲಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು