ಅದೃಷ್ಟದ ಬೆನ್ನೇರಿ ಚಮಕ್‌’; ಗಣೇಶ್, ರಶ್ಮಿಕಾ ಡಿಸೆಂಬರ್ ನಂಬಿಕೆ


Team Udayavani, Dec 28, 2017, 2:18 PM IST

Ganesh.jpg

ಡಿಸೆಂಬರ್‌ 29, 2006
ಗಣೇಶ್‌ ನಟನೆಯ “ಮುಂಗಾರು ಮಳೆ’
ಡಿಸೆಂಬರ್‌ 30, 2016
ರಶ್ಮಿಕಾ ನಟನೆಯ “ಕಿರಿಕ್‌ ಪಾರ್ಟಿ’
ಈಗ ಡಿಸೆಂಬರ್‌ 29,2017
ಗಣೇಶ್‌-ರಶ್ಮಿಕಾ ನಟನೆಯ “ಚಮಕ್‌ – ಇಬ್ಬರು ಸಹಜವಾಗಿಯೇ ಎಕ್ಸೈಟ್‌ ಆಗಿದ್ದಾರೆ. ಅದಕ್ಕೆ ಕಾರಣ “ಚಮಕ್‌’ ಮತ್ತು ಡಿಸೆಂಬರ್‌. ಹೌದು,
ಗಣೇಶ್‌-ರಶ್ಮಿಕಾ ಅಭಿನಯದ “ಚಮಕ್‌’ ಚಿತ್ರ ಈ ವಾರ (ಡಿ.29)ಕ್ಕೆ ತೆರೆಕಾಣುತ್ತಿದೆ. ಇಬ್ಬರಿಗೂ ಈ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇದೆ.

ಅದಕ್ಕೆ ಸಿನಿಮಾ ಚೆನ್ನಾಗಿ ಮೂಡಿಬಂದಿರೋದು ಒಂದು ಕಾರಣವಾದರೆ, ಡಿಸೆಂಬರ್‌ ಇಬ್ಬರ ಲೈಫ್ನಲ್ಲಿ ಲಕ್ಕಿ ಅನಿಸಿರೋದು ಮತ್ತೂಂದು ಕಾರಣ. 2006, ಡಿಸೆಂಬರ್‌ 29 ರಂದು ಗಣೇಶ್‌ ಅವರ “ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಜೊತೆಗೆ ಅವರ ಲೈಫ್ ಅನ್ನೇ ಬದಲಿಸಿದ್ದು ನಿಮಗೆ ಗೊತ್ತೇ ಇದೆ. ಇನ್ನು, ರಶ್ಮಿಕಾ ಎಂಬ ನಟಿ ಬೆಳಕಿಗೆ ಬಂದಿದ್ದು “ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ. ಈ ಚಿತ್ರ ಬಿಡುಗಡೆಯಾಗಿದ್ದು ಕೂಡಾ ಕಳೆದ ವರ್ಷ ಡಿಸೆಂಬರ್‌ನಲ್ಲಿ. ಆ ಚಿತ್ರ ರಶ್ಮಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈಗ ಮತ್ತೂಮ್ಮೆ ಡಿಸೆಂಬರ್‌ ನಿರೀಕ್ಷೆ. ಸುನಿ ನಿರ್ದೇಶನದ “ಚಮಕ್‌’ನಲ್ಲಿ ಈ ಇಬ್ಬರೂ ಒಟ್ಟಾಗಿದ್ದಾರೆ.

ಗಣೇಶ್‌ ಅವರಿಗೆ ಸಕಲೇಶಪುರ ಅದೃಷ್ಟದ ಜಾಗವಂತೆ. ಹಾಗಾಗಿ, “ಚಮಕ್‌’ ಚಿತ್ರದ ಕಥೆಯನ್ನು ಸಕಲೇಶಪುರದಲ್ಲೇ ಕೇಳಿದರಂತೆ. “ಡಿಸೆಂಬರ್‌ 29 ನನ್ನ ಬದುಕನ್ನು ಬದಲಾಯಿಸಿದ ದಿನ. ಈಗ ಅದೇ ದಿನದಂದು “ಚಮಕ್‌’ ಕೂಡಾ ಬಿಡುಗಡೆ ಯಾಗುತ್ತಿದೆ. ಈ ಚಿತ್ರದ ಮೇಲೂ
ಸಾಕಷ್ಟು ನಿರೀಕ್ಷೆ ಇದೆ. ನಿರ್ದೇಶಕ ಸುನಿ ಪ್ರತಿ ದೃಶ್ಯವನ್ನು ಸುಂದರವಾಗಿ ಹೆಣೆದಿದ್ದಾರೆ. ವೈದ್ಯನಾಗಿ ನಟಿಸಿದ್ದೇನೆ. ಸೋಶಿ ಯಲ್‌ ಮೀಡಿಯಾದಲ್ಲಿ ನೋಡಿದ ಹುಡುಗಿಯನ್ನು ನೋಡಲು ಬಂದಾಗ ಎದುರಾಗುವ ಫ‌ಜೀತಿಯನ್ನು ಸುನಿ ತುಂಬಾ ಮಜಾವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್‌ ಎಲ್ಲವೂ ಇದೆ’ ಎಂಬುದು ಗಣೇಶ್‌ ಮಾತುಗಳು.

ನಟಿ ರಶ್ಮಿಕಾ ಮಂದಣ್ಣಗೆ ಈ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾದ ಪಾತ್ರ ಸಿಕ್ಕಿದೆಯಂತೆ. “ಕಿರಿಕ್‌ ಪಾರ್ಟಿ’ಯಲ್ಲಿ ಸೀರಿಯಸ್‌, “ಅಂಜನಿಪುತ್ರ’ದಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಇಲ್ಲಿ ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ರಶ್ಮಿಕಾ ಹೇಳುವಂತೆ ಈ ಚಿತ್ರವನ್ನು ಮದುವೆ ಆಗದವರು, ಆಗುವವರು, ಆಗಿರುವವರು .

ನೋಡಲೇಬೇಕು. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಡೀಸೆಂಟ್‌ ಸಿನಿಮಾವಂತೆ. ನಿರ್ದೇಶಕ ಸುನಿ ಗಣೇಶ್‌ ಹಾಗೂ ರಶ್ಮಿಕಾ ಪಾತ್ರವನ್ನು ನೀರು ಬೆರೆಸಿದ ಓಡ್ಕಾ ಹಾಗೂ ತೀರ್ಥಗೆ ಹೋಲಿಸುತ್ತಾರೆ.  ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಮೂವೀಸ್‌ನಡಿ ಟಿ.ಆರ್‌.ಚಂದ್ರಶೇಖರ್‌ ನಿರ್ಮಿಸಿದ್ದಾರೆ. ಚಿತ್ರ ವೈಕುಂಠ ಏಕಾದಶಿಯಂದು ಬಿಡುಗಡೆಯಾಗುತ್ತಿರುವುದರಿಂದ ಸಿನಿಮಾ ರಂಗದಲ್ಲಿ ತಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆಂಬ ನಂಬಿಕೆ ಅವರಿಗಿದೆ. ನಿರ್ದೇಶಕ ಸುನಿ ಕಥೆ ಹೇಳಿದಾಗ ಅವರಿಗೆ ಸಿನಿಮಾ ನೋಡಿದಂತಾಯಿತಂತೆ. ಈಗ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದು, ಮುಂದಿನ ವಾರ ಅಮೆರಿಕಾದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.