ರಂಜನಿ ಎಂಬ ಸೂಫಿ
Team Udayavani, Jan 6, 2018, 10:21 AM IST
ಕಿರುತೆರೆ ನಟಿಯರು ಬೆಳ್ಳಿತೆರೆಗೆ ಬರುತ್ತಿರುವುದು ಹೊಸದೇನಲ್ಲ. ಹಾಗೆ ಬಂದವರು ಅನೇಕರು. ಆದರೆ, ಉಳಿದದ್ದು ಬೆರಳೆಣಿಕೆಯಷ್ಟು ನಟಿಯರು. ಆ ಸಾಲಿಗೆ ರಂಜನಿ ರಾಘವನ್ ಕೂಡ ಸೇರುತ್ತಾರೆ ಎನ್ನಬಹುದು. ಕಾರಣ, ರಂಜನಿ ರಾಘವನ್ ಈಗ ಮತ್ತೂಂದು ಚಿತ್ರ ಒಪ್ಪಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಎರಡು ಚಿತ್ರಗಳ ಮಾತುಕತೆಯೂ ಅಂತಿಮವಾಗಿದೆ.
“ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್, “ರಾಜಹಂಸ’ ಚಿತ್ರದ ಬಳಿಕ ಒಪ್ಪಿಕೊಂಡ ಚಿತ್ರ ಯಾವುದು ಗೊತ್ತಾ? “ಸೂಫಿ’. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಸಂಗೀತಕ್ಕೆ ಸಂಬಂಧಿಸಿದ ಪದ. ಇಲ್ಲಿ ರಂಜನಿ ಅವರು ಟೈಟಲ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷ. ಇಡೀ ಚಿತ್ರದ ಕಥೆ ಕೂಡ ಅವರ ಸುತ್ತವೇ ಸಾಗಲಿದೆ. ಇನ್ನು, ಈ ಚಿತ್ರಕ್ಕೆ ಶಿವು ಜಮಖಂಡಿ ನಿರ್ದೇಶಕರು.
ವಿಜಯ್ ರಾಘವೇಂದ್ರ ಅಭಿನಯದ “ನನ್ನ ನಿನ್ನ ಪ್ರೇಮಕಥೆ’ ಬಳಿಕ ಶಿವು ಜಮಖಂಡಿ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕೆ ವಿನೋದ್ ಪಾಟೀಲ್ ಹೀರೋ. “ಜಸ್ಟ್ ಆಕಸ್ಮಿಕ’ ಚಿತ್ರ ಮಾಡಿದ್ದ ವಿನೋದ್ ಪಾಟೀಲ್ಗೆ “ಸೂಫಿ’ ಎರಡನೇ ಚಿತ್ರ. ಇದೊಂದು ಮ್ಯೂಸಿಕಲ್ ಜರ್ನಿ ಸಿನಿಮಾ ಎನ್ನುವ ರಂಜನಿ, “ಇಡೀ ಚಿತ್ರ ಸೂಫಿ ಸಂಗೀತದ ಹಿನ್ನೆಲೆಯಲ್ಲೇ ಸಾಗಲಿದೆ. ನನ್ನ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಕೊಡಲಾಗಿದೆ.
ಅದೊಂದು ರೀತಿ ಬಜಾರಿಯಂತಹ ಪಾತ್ರವದು. “ರಾಜ ಹಂಸ’ ಚಿತ್ರದ ಬಳಿಕ ಕೇಳಿದ ಕಥೆಗಳ ಸಂಖ್ಯೆ ಎಂಟು. ಆ ಪೈಕಿ ಮಿಸ್ ಆಗಿದ್ದು ಎರಡು. ಬಿಟ್ಟಿದ್ದು ಆರು. ಮಿಸ್ ಆಗೋಕೆ ಕಾರಣ, ಡೇಟ್ಸ್. ಕೈ ಬಿಡಲು ಕಾರಣ ಕಥೆ, ಪಾತ್ರ ಹೊಂದಿಕೆಯಾಗಲ್ಲ ಎಂಬುದಕ್ಕೆ. ಸುಮ್ಮನೆ ಬಂದು ಹೋಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ, ಒಂದಷ್ಟು ಚಿತ್ರಗಳನ್ನು ಕೈ ಬಿಟ್ಟದ್ದು ನಿಜ. “ರಾಜಹಂಸ’ ನನಗೊಂದು ಒಳ್ಳೆಯ ಇಮೇಜ್ ತಂದುಕೊಡು.
ಆ ಚಿತ್ರ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಿಂದ ಒಂದಷ್ಟು ಅವಕಾಶಗಳೂ ಬಂದಿದ್ದುಂಟು. ಹಾಗೆ ಬಂದ ಅವಕಾಶಗಳಲ್ಲಿ “ಸೂಫಿ’ ಚಿತ್ರವೂ ಒಂದು’ ಎಂದು ಹೇಳಿಕೊಳ್ಳುತ್ತಾರೆ ರಂಜನಿ. ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಸುಮಾರು 50 ದಿನಗಳ ಚಿತ್ರೀಕರಣ ನಡೆಯಲಿದೆ. “ನನ್ನ ನಿನ್ನ ಪ್ರೇಮಕಥೆ’ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂಡ ಇಲ್ಲಿ ಕೆಲಸ ಮಾಡಲಿದೆ. ಚಿತ್ರದಲ್ಲಿ ದೇವರಾಜ್, ರಮೇಶ್ ಭಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ ಎನ್ನುತ್ತಾರೆ ರಂಜನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!