ವಿದೇಶದಲ್ಲೂ ರಾಜು ಕಲರವ! ಜ.19 ರಂದು 200 ಚಿತ್ರಮಂದಿರದಲ್ಲಿ ರಿಲೀಸ್


Team Udayavani, Jan 11, 2018, 4:35 PM IST

Raju-Kannada-Medium-(3).jpg

ಆಗ, ಈಗ ಅಂತ ಅನ್ನುತ್ತಿದ್ದ “ರಾಜು ಕನ್ನಡ ಮೀಡಿಯಂ’ ಈಗ ಕೊನೆಗೂ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಜನವರಿ 19ರಂದು ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆದಿದೆ. ಎರಡು ವಾರದ ಬಳಿಕ ವಿದೇಶದಲ್ಲೂ ರಾಜು ವಿಹರಿಸಲಿದ್ದಾನೆ ಎನ್ನುವುದು ವಿಶೇಷ.

ಕನ್ನಡ ಮಾಧ್ಯಮದಲ್ಲಿ ಓದಿದ ಹಳ್ಳಿ ಹುಡುಗನೊಬ್ಬ, ವಿದೇಶಕ್ಕೆ ಹೋಗಿ ಏನೆಲ್ಲಾ ಸಾಧನೆ ಮಾಡುತ್ತಾನೆ. ಆ ಸಾಧನೆ ಮಧ್ಯೆ ಎಷ್ಟೆಲ್ಲಾ ತೊಂದರೆಗಳು ಎದುರಾಗುತ್ತವೆ ಎನ್ನುವ ಕಥೆ ಇರುವ “ರಾಜು ಕನ್ನಡ ಮೀಡಿಯಂ’ನಲ್ಲಿ ನಾಯಕನಾಗಿ “ಫ‌ಸ್ಟ್‌ ರ್‍ಯಾಂಕ್‌ ರಾಜು’ ಖ್ಯಾತಿಯ ಗುರುನಂದನ್‌ ನಟಿಸಿದ್ದಾರೆ. “ಇದು ಟೀಮ್‌ ವರ್ಕ್‌ನಿಂದ ಮೂಡಿಬಂದ ಸಿನಿಮಾ. ನಿರ್ಮಾಪಕ ಹಾಗೂ ನಾಯಕಿ ಹೊರತುಪಡಿಸಿ, “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರದ ಸಕ್ಸಸ್‌ ತಂಡ ಸೇರಿಕೊಂಡು ಈ ಸಿನಿಮಾ ಮಾಡಿದೆ. ಎಲ್ಲರ ನಿರೀಕ್ಷೆ ಚಿತ್ರದ ಮೇಲಿದೆ. ಇಲ್ಲಿ ಒಂದೊಳ್ಳೆಯ ಸಂದೇಶವಿದೆ. ಆ ಸಂದೇಶವನ್ನು ಸಿನಿಮಾ ಮೂಲಕವೇ ತಿಳಿದುಕೊಳ್ಳಬೇಕು. 

ಇನ್ನು, ಸುದೀಪ್‌ ಅವರಿಲ್ಲಿ ಒಬ್ಬ ಶ್ರೀಮಂತ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಸ್ಪೂರ್ತಿ ಪಡೆವ ಹಳ್ಳಿ ಹುಡುಗ ಎಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂಬುದು ಸಿನಿಮಾ ಸಾರಾಂಶ’ ಎನ್ನುತ್ತಾರೆ ಗುರುನಂದನ್‌.

ನಿರ್ಮಾಪಕ ಕೆ.ಎ.ಸುರೇಶ್‌ ಅವರಿಗೆ, ಇದೊಂದು ಬೇರೆ ರೀತಿಯ ಚಿತ್ರ ಆಗುತ್ತೆ ಅಂತ ಕಥೆ ಕೇಳಿದಾಗಲೇ ಅನಿಸಿತ್ತಂತೆ. ಅದು ನಿಜವಾಗುವ ಲಕ್ಷಣಗಳೂ ಗೋಚರಿಸುತ್ತಿವೆ ಎಂಬುದು ಅವರ ಹೇಳಿಕೆ. “ಇಲ್ಲಿ ವಿಶೇಷ ಪಾತ್ರವೊಂದರಲ್ಲಿ ಸುದೀಪ್‌ ಅವರು ಕಾಣಿಸಿಕೊಂಡಿದ್ದಾರೆ. ಅದು ಚಿತ್ರದ ಇನ್ನೊಂದು ಪ್ಲಸ್‌. ಚಿತ್ರದ ಬಗ್ಗೆ ಹೇಳುವುದೇನೂ ಇಲ್ಲ, ಸಿನಿಮಾ ನೋಡಿದ ಮೇಲೆ, ಚಿತ್ರದ ಬಗ್ಗೆ ಇತರರು ಹೇಳಬೇಕಷ್ಟೇ’ ಎನ್ನುತ್ತಾರೆ ಸುರೇಶ್‌.

ಕೊಡೆ ಕುರಿತು ಒಂದು ಕವಿತೆ ಬರೆದಿದ್ದರಂತೆ ಗೀತರಚನೆಕಾರ ಹೃದಯಶಿವ. ಅದು ಚಿತ್ರದ ಒಂದು ಸನ್ನಿವೇಶಕ್ಕೆ ಸರಿಹೊಂದುತ್ತದೆ ಅಂತ ಸಂಗೀತ ನಿರ್ದೇಶಕ ಕಿರಣ್‌ ರವೀಂದ್ರನಾಥ್‌ ಇಲ್ಲಿ ಬಳಸಿಕೊಂಡಿದ್ದಾರೆ. ಕವಿಯ ಹಿಂದೆ ಸಾಕಷ್ಟು ನೋವಿರುತ್ತೆ. ಹಾಗಾಗಿ ಬೇಸರದ ಹಾಡು ಬರೆಯೋಕೆ ಒಂಥರಾ ಖುಷಿಯಾಗುತ್ತೆ ಅನ್ನೋದು ಹೃದಯ ಶಿವ ಮಾತು.

ನಟಿ ಆಶಿಕಾಗೆ ಈ ಚಿತ್ರದ ಕಥೆ ಕೇಳಿ ಒಪ್ಪಿಕೊಂಡಾಗ, ಸುದೀಪ್‌ ಅವರು ನಟಿಸುತ್ತಾರೆ ಅನ್ನೋದು ಗೊತ್ತಿರಲಿಲ್ಲವಂತೆ. “ಆಮೇಲೆ ಸುದೀಪ್‌ ಕಾಣಿಸಿಕೊಳ್ಳುತ್ತಾರೆ ಅಂದಾಗ ಹೆಚ್ಚು ಖುಷಿಯಾಯ್ತು. ಈ ಚಿತ್ರ ನೋಡೋಕೆ ನಾನು ತುದಿಗಾಲ ಮೇಲೆ ನಿಂತಿದ್ದೇನೆ’ ಅನ್ನುತ್ತಲೇ ಜೋರು ನಗೆ ಚೆಲ್ಲಿ ಸುಮ್ಮನಾಗುತ್ತಾರೆ ಆಶಿಕಾ.

ಕಿರಣ್‌ ರವೀಂದ್ರನಾಥ್‌ ಇಲ್ಲಿ ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಇನ್ನು, ಇಲ್ಲಿ ದಡೂತಿ ದೇಹದ ಅಮಿತ್‌, ಗೆಳಯನ ಪಾತ್ರಕ್ಕಾಗಿ 90 ಕೆಜಿ ಇದ್ದ ತೂಕವನ್ನು 73 ಕೆಜಿ ತೂಕಕ್ಕೆ ಇಳಿಸಿಕೊಂಡ ಬಗೆ ಹೇಳಿಕೊಂಡು ಎಂದಿನ ಶೈಲಿಯಲ್ಲಿ ನಕ್ಕರು ಅಮಿತ್‌.

ಟಾಪ್ ನ್ಯೂಸ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.