ಒಂದೇ ಕಥೆ: ಹಲವು ಆಯಾಮಗಳು


Team Udayavani, Jan 14, 2018, 10:47 AM IST

3-gante.jpg

“3 ಗಂಟೆ 30 ದಿನ 30 ಸೆಕೆಂಡ್‌’ ಎಂಬ ಟೈಟಲ್‌ನಲ್ಲೇ ಕುತೂಹಲ ಹುಟ್ಟಿಸಿರುವ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಅನುಭವಿರುವ, ಎರಡು ಸಾವಿರಕ್ಕೂ ಹೆಚ್ಚು ಆ್ಯಡ್‌ ಫಿಲಂಗಳನ್ನು ಮಾಡಿರುವ ಜಿ.ಕೆ.ಮಧುಸೂಧನ್‌ ಈ ಚಿತ್ರದ ನಿರ್ದೇಶಕರು.

ಚಂದ್ರಶೇಖರ್‌ ಆರ್‌ ಪದ್ಮಶಾಲಿ ನಿರ್ಮಾಣದ ಈ ಚಿತ್ರದಲ್ಲಿ ಅರುಣ್‌ ಗೌಡ ಹಾಗೂ ಕಾವ್ಯ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ಹಿಟ್‌ ಆಗಿದ್ದು, ಚಿತ್ರ ಜನವರಿ 19 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ಮಧುಸೂಧನ್‌ ಮಾತನಾಡಿದ್ದಾರೆ ….

ಸಮೃದ್ಧ ಕಥೆ ಇರುವ ಸಿನಿಮಾ: ಸಾಮಾನ್ಯವಾಗಿ ಒಂದು ಸಿನಿಮಾ ಆರಂಭವಾಗಿ ಅದರ ಕಥೆ ತೆರೆದುಕೊಳ್ಳುವಷ್ಟರಲ್ಲಿ ಇಂಟರ್‌ವಲ್‌ ಬಂದಿರುತ್ತದೆ. ಸಿನಿಮಾಗಳ ಮೊದಲರ್ಧ ಬಹುತೇಕ ಹೀರೋ ಎಂಟ್ರಿ, ಬಿಲ್ಡಪ್‌, ಸಾಂಗ್‌ನಲ್ಲೇ ಮುಗಿದು ಹೋಗುತ್ತದೆ. ಆದರೆ, “3 ಗಂಟೆ 30 ದಿನ 30 ಸೆಕೆಂಡ್‌’ ಸಿನಿಮಾವನ್ನು ಅದರಿಂದ ಹೊರತಾಗಿಸಿದ್ದಾರಂತೆ ನಿರ್ದೇಶಕ ಮಧುಸೂಧನ್‌. ಹಾಗಾಗಿ, ಚಿತ್ರ ಆರಂಭವಾದ ಪ್ರತಿ 20 ನಿಮಿಷಕ್ಕೊಂದು ಕಥೆ ನಿಮಗೆ ಸಿಗುತ್ತದೆ.

ಹಾಗಂತ ಇಲ್ಲಿ ಎಷ್ಟು ಕಥೆ ಇದೆ ಎಂದು ನೀವು ಕೇಳಬಹುದು. ಕಥೆ ಒಂದೇ. ಆದರೆ, ಅದು ವಿಧವಿಧವಾಗಿ ಸಾಗುತ್ತದೆಯಂತೆ. “ನಾನು ಜಾಹೀರಾತು ಕ್ಷೇತ್ರದವನು. ಅಲ್ಲಿ ಪ್ರತಿ ಸೆಕೆಂಡ್‌ ಕೂಡಾ ತುಂಬಾ ಮುಖ್ಯವಾಗುತ್ತದೆ. ಒಂದು ಸೆಕೆಂಡ್‌ ಕೂಡಾ ನಾವು ಸುಮ್ಮನೆ ಕಳೆಯುವಂತಿಲ್ಲ. ಪ್ರತಿ ಸೆಕೆಂಡ್‌ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದು ನನ್ನ ತಲೆಯಲ್ಲಿ ಬಂದ ಕೂಡಲೇ ಅದನ್ನಿಟ್ಟುಕೊಂಡು ಒಂದು ಕಥೆ ಮಾಡಿ, ಸಿನಿಮಾ ಯಾಕೆ ಮಾಡಬಾರದು ಎಂದು ಆಲೋಚಿಸಿದೆ.

ಅದನ್ನು ನಿರ್ಮಾಪಕ ಚಂದ್ರಶೇಖರ್‌ ಅವರಿಗೆ ಹೇಳಿದಾಗ, “ಬೇರೆಯವರಿಗೆ ಯಾಕೆ ಹೇಳುತ್ತೀರಿ. ನಾವೇ ಮಾಡುವ’ ಎಂದರು. ಹಾಗೆ ಶುರುವಾಗಿದ್ದು ಈ ಸಿನಿಮಾ. ನನ್ನ ಪ್ರಕಾರ, ಸಿನಿಮಾದಲ್ಲಿ ಕಥೆಯೇ ಮುಖ್ಯ. ಅದನ್ನು ನೀಟಾಗಿ ಮಾಡಿಕೊಂಡರೆ ಉಳಿದೆಲ್ಲವೂ ಸುಲಭವಾಗುತ್ತದೆ. ಹಾಗಾಗಿ, ಸುಮಾರು ಒಂದು ವರ್ಷ ಕುಳಿತು ಕಥೆ ಮಾಡಿದೆವು.

ಎಂಟು ವರ್ಶನ್‌ಗಳಲ್ಲಿ ಕಥೆ ಮಾಡಿಕೊಂಡೆವು. ನಮಗೆ ತೃಪ್ತಿಯಾದ ನಂತರ ಚಿತ್ರೀಕರಣ ಆರಂಭಿಸಿದೆವು. ಇಲ್ಲಿ ನಿಮಗೆ ಸಮೃದ್ಧವಾದ ಕಥೆ ಸಿಗುತ್ತದೆ. ಸಿನಿಮಾ ಆರಂಭವಾದಾಗಿನಿಂದಲೇ ಕಥೆ ತೆರೆದುಕೊಳ್ಳುತ್ತದೆ. ಅನಾವಶ್ಯಕವಾಗಿ ನಾವು ಟೈಮ್‌ ವೇಸ್ಟ್‌ ಮಾಡಿಲ್ಲ. ಪ್ರತಿ ಸೆಕೆಂಡ್‌ ಅನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ’ ಎಂದು ಸಿನಿಮಾ ಆರಂಭವಾದ ಬಗ್ಗೆ ಹೇಳುತ್ತಾರೆ ಮಧುಸೂಧನ್‌.

ಹೀರೋ ವರ್ಸಸ್‌ ಹೀರೋಯಿನ್‌: “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಈ ಬಗ್ಗೆಯೂ ನಿರ್ದೇಶಕ ಮಧುಸೂಧನ್‌ ಮಾತನಾಡುತ್ತಾರೆ. ಅವರು ಹೇಳುವಂತೆ, ಇದು ಹೀರೋ ವರ್ಸಸ್‌ ಹೀರೋಯಿನ್‌ ಸಿನಿಮಾ. ಹಾಗಂತ ಅವರಿಬ್ಬರು ಫೈಟ್‌ ಮಾಡುತ್ತಾರಾ ಎಂದು ನೀವು ಕೇಳುವಂತಿಲ್ಲ.

ಇಲ್ಲಿ ನಾಯಕ-ನಾಯಕಿಯರ ಸಿದ್ಧಾಂತ, ಅವರ ಆಲೋಚನೆಗಳು ಎರಡೂ ವಿರುದ್ಧವಾಗಿರುತ್ತವೆಯಂತೆ. ಆ ಮೂಲಕ ಸಿನಿಮಾ ಸಾಗುತ್ತದೆ. “ಚಿತ್ರದಲ್ಲಿ ನಾಯಕ-ನಾಯಕಿಯ ಆಲೋಚನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ನಾಯಕಿ ಪಕ್ಕಾ ಪ್ರಾಕ್ಟಿಕಲ್‌ ಆಗಿ ಆಲೋಚಿಸುವವಳು. ಜೀವನದಲ್ಲಿ ಕಾಸು ಮುಖ್ಯ, ಕಾಸಿದ್ದರೆ ಬದುಕಬಹುದು, ಸಂಬಂಧಗಳಿಗಿಂತ ಹಣ ಮತ್ತು ಅಂತಸ್ತಿಗೆ ಹೆಚ್ಚಿನ ಬೆಲೆ ಕೊಡುವವಳು.

ಆದರೆ, ನಾಯಕ ಮಾತ್ರ ಅದಕ್ಕೆ ತದ್ವಿರುದ್ಧ. ಆತ ಸಂಬಂಧಗಳನ್ನು ಗೌರವಿಸುವ, ಪ್ರೀತಿಸುವವ. ಕಾಸು, ಅಂತಸ್ತಿಗಿಂತ ಭಾವನೆಗಳು ಮುಖ್ಯ ಎಂದು ನಂಬಿರುವವ. ಹೀಗೆ ಇಬ್ಬರ ಮಧ್ಯೆ ಸಿದ್ಧಾಂತಗಳ ವಿಚಾರದಲ್ಲಿ ಸ್ಪರ್ಧೆಯೇ ನಡೆಯುತ್ತಿರುತ್ತದೆ. ಅಂತಿಮವಾಗಿ ಯಾವುದು ಗೆಲ್ಲುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ. 

ಕಥೆಗೆ ಸೂಕ್ತವಾದ ಟೈಟಲ್‌: ಚಿತ್ರದ ಟೈಟಲ್‌ “3 ಗಂಟೆ 30 ದಿನ 30 ಸೆಕೆಂಡ್‌’. ಈ ಟೈಟಲ್‌ನಲ್ಲೇ ಒಂದು ಕುತೂಹಲವಿದೆ. ಹೀಗಿರುವಾಗ ಸಿನಿಮಾದಲ್ಲಿ ಏನಿರಬಹುದು, ಈ ಟೈಟಲ್‌ಗ‌ೂ ಕಥೆಗೂ ಯಾವ ರೀತಿ ಲಿಂಕ್‌ ಆಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ನಿರ್ದೇಶಕರು ಹೇಳುವಂತೆ ಚಿತ್ರದ ಕಥೆಗೆ ಈ ಶೀರ್ಷಿಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆಯಂತೆ. ಅದು ಹೇಗೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು.

ಎಷ್ಟೇ ಕಷ್ಟದ ಕೆಲಸವಾದರೂ ಸುಲಭವಾಗಿ ಮಾಡುವ ನಾಯಕ, ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆಯೊಂದನ್ನು 3 ಗಂಟೆಯಲ್ಲಿ ಬಗೆಹರಿಸುತ್ತಾನಂತೆ. ಆದರೆ, ಅದು ಮತ್ತೂಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಮತ್ತು ನಾಯಕನನ್ನು ಸುತ್ತಿಕೊಳ್ಳುತ್ತದೆಯಂತೆ. ಅದು 30 ದಿನ, 30 ಸೆಕೆಂಡ್‌ವರೆಗೂ ಮುಂದುವರೆಯುತ್ತದೆಯಂತೆ. ಅದು ಹೇಗೆ ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.

ಇನ್ನು, ನಿರ್ದೇಶಕ ಮಧುಸೂಧನ್‌ ಅವರಿಗೆ ತಾವು ಮಾಡಿದ ಕೆಲಸ ತೃಪ್ತಿ ತಂದಿದೆ. ಅದಕ್ಕೆ ಸರಿಯಾಗಿ ಈಗಾಗಲೇ ಸಿನಿಮಾ ನೋಡಿದವರು ಕೂಡಾ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. “ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸಿನಿಮಾ ಮಾಡಲು ಹೊರಟೆವು. ಆದರೆ ಅದು ದೊಡ್ಡದಾಗುತ್ತಾ ಹೋಯಿತು. ಮುಖ್ಯವಾಗಿ ನಾವು ಸಿನಿಮಾವನ್ನು ಬೇಗ ಮುಗಿಸಬೇಕೆಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ನಮಗೆ ತೃಪ್ತಿಯಾಗುವಂತೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ಹಾಡು, ಟ್ರೇಲರ್‌ಗೆ ಮೆಚ್ಚುಗೆ: ಚಿತ್ರದ ಹಾಡು, ಟೀಸರ್‌, ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಸಿನಿಮಾವನ್ನು ಕೂಡಾ ಜನ ಇದೇ ರೀತಿ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದ ಟೀಸರ್‌ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಇನ್ನು, ಚಂದನ್‌ ಶೆಟ್ಟಿ ಕಾಣಿಸಿಕೊಂಡಿರುವ ಹಾಡೊಂದು 12 ಲಕ್ಷಕ್ಕೂ ಹೆಚ್ಚು ಹಿಟ್ಸ್‌ ಪಡೆದಿದೆ. “ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗುತ್ತಿದೆ. ನಮ್ಮ ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳಿಲ್ಲ. ಆದರೂ ಅವರು ಪ್ರೋತ್ಸಾಹಿಸುತ್ತಿರುವ ರೀತಿಯನ್ನು ಮೆಚ್ಚಲೇಬೇಕು’ ಎನ್ನುವುದು ಮಧುಸೂಧನ್‌ ಮಾತು. 

ಟಾಪ್ ನ್ಯೂಸ್

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.