ಕನ್ನಡ ಚಿತ್ರಗಳಿಗೆ ಸಖತ್‌ ಸ್ಪರ್ಧೆ


Team Udayavani, Jan 15, 2018, 1:30 PM IST

15-22.jpg

ಮುಂದಿನ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನುವುದು ಹೌದು. ಪರೀಕ್ಷೆಗಳಿರಲಿ, ಚುನಾವಣೆಯಾಗಲಿ ಅಥವಾ ಕ್ರಿಕೆಟ್‌ ಬರಲಿ … ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ.
 
 ಕನ್ನಡದಲ್ಲಿ ಸಾಲುಸಾಲು ಚಿತ್ರಗಳು ಬಿಡುಗಡೆಗೆ ನಿಂತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ 15 ದಿನಗಳಲ್ಲಿ ಬಿಡುಗಡೆಯಾಗಿರುವುದು ಕೇವಲ ಆರು ಚಿತ್ರಗಳಾದರೂ, ಮುಂದಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ. ಅದರಲ್ಲೂ ಮಾರ್ಚ್‌ ಒಳಗೆ ಚಿತ್ರಗಳನ್ನು ಬಿಡುಗಡೆ ಮಾಡಿಬಿಡಬೇಕೆಂದು ಹಲವು ನಿರ್ಮಾಪಕರು ತುದಿಗಾಲಲ್ಲಿ ನಿಂತಿ¨ªಾರೆ. ಅದೇನಾದರೂ ತಪ್ಪಿದರೆ, ಮುಂದಿನ ಮೂರು ತಿಂಗಳುಗಳ ಕಾಲ ಪ್ರೇಕ್ಷಕರ ಅಭಾವ ಕಾಡಬಹುದು ಎಂಬ ಭಯ ಹಲವು ನಿರ್ಮಾಪಕರಲ್ಲಿದೆ.

 ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳು ಬಂದರೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಸಣ್ಣ ನಡುಕ ಇದ್ದಿದ್ದೇ. ಅದಕ್ಕೆ ಕಾರಣ ಪರೀಕ್ಷೆಗಳು ಮತ್ತು ಕ್ರಿಕೆಟ್‌. ಈ ಬಾರಿ ಕನ್ನಡ ಚಿತ್ರರಂಗಕ್ಕೆ ಅವೆರಡೂ ಭಯಗಳ ಜೊತೆಗೆ ಇನ್ನೊಂದು ಭಯ ಕೂಡಾ ಸೇರಿದೆ. ಅದೇ ಅಸೆಂಬ್ಲಿ ಚುನಾವಣೆ. ಮೇ ತಿಂಗಳಲ್ಲಿ ಕರ್ನಾಟಕದ ಅಸೆಂಬ್ಲಿ ಚುನಾವಣೆಗಳು ನಡೆಯುವುದು ಖಾತ್ರಿಯಾಗಿದೆ. ಹಾಗಾಗಿ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಸ್ವಲ್ಪ ರಿಸ್ಕಿ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಅದೇ ಕಾರಣಕ್ಕೆ ಮಾರ್ಚ್‌ ತಿಂಗಳಿಗೂ ಮುನ್ನವೇ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಲೆಕ್ಕಾಚಾರ ನಡೆಯುತ್ತಿದ್ದು, ಅದಕ್ಕೆ ಸೂಕ್ತ ತಯಾರಿಗಳು ನಡೆಯುತಿವೆ.

 ಹಾಗೆ ನೋಡಿದರೆ, ಫೆಬ್ರವರಿ ತಿಂಗಳಿನಿಂದಲೇ ಕನ್ನಡ ಚಿತ್ರಗಳಿಗೆ ಸವಾಲು ಶುರುವಾಗಲಿದೆ. ಏಕೆಂದರೆ, ಫೆಬ್ರವರಿ 1ರಿಂದ 24ರವರೆಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ದಿನದ ಮತ್ತು ಟಿ20 ಪಂದ್ಯಗಳು ನಡೆಯಲಿವೆ. ಎರಡು ಘಟಾನುಘಟಿ ತಂಡಗಳು ಎದುರುಬದುರಾಗುತ್ತಿರುವುದರಿಂದ, ಸಹಜವಾಗಿಯೇ ಜನರಿಗೆ ಆ ಕಡೆ ಹೆಚ್ಚು ಗಮನವಿರುತ್ತದೆ. ಇನ್ನು ಮಾರ್ಚ್‌ನಲ್ಲಿ ಪರೀಕ್ಷೆಗಳಿರುವುದರಿಂದ, ಆ ತಿಂಗಳು ಸಹಜವಾಗಿಯೇ ಚಿತ್ರರಂಗದ ಪಾಲಿಗೆ ಸ್ಲಾಗ್‌ ಓವರ್‌ ಎಂದರೆ ತಪ್ಪಿಲ್ಲ. ಆ ತಿಂಗಳಲ್ಲಿ ಬೇರೆ ತರಗತಿಯ ಪರೀಕ್ಷೆಗಳ ಜೊತೆಗೆ ಹತ್ತನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಮತ್ತು ಅವರ ಹೆತ್ತವರ ನಿ¨ªೆಗೆಡಿಸಿರುತ್ತವೆ. ಏಪ್ರಿಲ್‌ ನಾಲ್ಕರಿಂದ, ಮೇ 27ರವರೆಗೆ ಐಪಿಲ್‌ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯಲಿವೆ. ಈ ಎರಡು ತಿಂಗಳು ಕ್ರಿಕೆಟ್‌ ಪ್ರಿಯರ ಪಾಲಿಗೆ ಹಬ್ಬ ಎಂದರೆ ತಪ್ಪಿಲ್ಲ. ಇನ್ನು ಮೇನಲ್ಲಿ ಚುನಾವಣೆಯ ಸಮಯ. ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಜನರ ಗಮನವೆಲ್ಲಾ ಆ ಕಡೆ ಕೇಂದ್ರೀಕೃತವಾಗಿರುವುದರಿಂದ ಚಿತ್ರಗಳ ಕಡೆ ಗಮನ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗಾಗಿ ಈ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ರಿಸ್ಕ್ ಜಾಸ್ತಿ ಎಂಬ ಭಯ ನಿರ್ಮಾಪಕರದ್ದು.

 ಹಾಗಂತ ಈ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನುವುದು ಹೌದು. ಪರೀಕ್ಷೆಗಳಿರಲಿ, ಚುನಾವಣೆಯಾಗಲಿ ಅಥವಾ ಕ್ರಿಕೆಟ್‌ ಬರಲಿ … ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ. ಈ ಹಿಂದಿನ ವರ್ಷಗಳಲ್ಲಿ ಕ್ರಿಕೆಟ್‌ ಸೀಸನ್‌ ಇ¨ªಾಗ, ಪರೀಕ್ಷೆಗಳು ನಡೆಯುತ್ತಿ¨ªಾಗ ಕೆಲವು ಪ್ರದರ್ಶನಗಳು ಖಾಲಿ ಹೊಡೆಯುತ್ತಿವೆ ಎಂದು ನಿರ್ಮಾಪಕರೇ ಬೇಸರಿಸಿಕೊಂಡಿದ್ದು ಉಂಟು. ಅದರಲ್ಲೂ ಸ್ವಲ್ಪ ನಿರೀಕ್ಷಿತ ಅಥವಾ ಹೆಸರಾಂತ ಕಲಾವಿದರ ಚಿತ್ರಗಳಿಗೆ ಅಷ್ಟೇನೂ ಬಿಸಿ ತಟ್ಟುವುದಿಲ್ಲ. ಹೊಸಬರ, ಹೆಚ್ಚು ಪ್ರಚಾರ ಮಾಡದವರ, ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದವರ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರ ಅಭಾವ ದೊಡ್ಡ ಮಟ್ಟದಲ್ಲಿ ಕಾಡುವುದು ನಿಜ.

 ಹಾಗಂತ ಹಿಂದಿನ ವರ್ಷಗಳಲ್ಲಿ ಈ ತರಹದ ಸಂದರ್ಭಗಳಲ್ಲಿ ಚಿತ್ರ ಬಿಡುಗಡೆ ಮಾಡಿದವರೆಲ್ಲಾ ಸೋತಿಲ್ಲ ಅಥವಾ ನೆಲಕಚ್ಚಿಲ್ಲ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದ ಚಿತ್ರಗಳ ಉದಾಹರಣೆಗಳೂ ಹಲವು ಇವೆ. ಆದರೆ, ಈ ಬಾರಿ ಕ್ರಿಕೆಟ್‌, ಪರೀಕ್ಷೆ, ಚುನಾವಣೆ ಎಲ್ಲವೂ ಒಂದರಹಿಂದೊಂದು ಬರುತ್ತಿರುವುರಿಂದ, ಚಿತ್ರ ಮಾಡಿ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿರುವ ಕೆಲವು ನಿರ್ಮಾಪಕರಲ್ಲಾದರೂ ಆತಂಕ ಸಷ್ಟಿಸಿದೆ. ಹಾಗಾಗಿ ಇನ್ನೊಂದೆರೆಡು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿದ್ದು, ಒಂದು ಪಕ್ಷ ಸ್ವಲ್ಪ ತಡವಾದರೆ, ಮೇ ನಂತರ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿ¨ªಾರೆ ಎಂದು ಹೇಳಲಾಗುತ್ತಿದೆ.

 ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಜೂನ್‌ನಲ್ಲಿ ಶಾಲೆ ಆರಂಭ, ಮಳೆ … ಎಂಬ ಹೊಸ ಸವಾಲುಗಳು ಕನ್ನಡ ಚಿತ್ರಗಳ ಮುಂದೆ ಹಾಜರಾಗುತ್ತವೆ. ಇಷ್ಟು ವರ್ಷಗಳ ಕಾಲ ಚಿತ್ರರಂಗ ಇವನ್ನೆಲ್ಲಾ ಮೆಟ್ಟಿ ನಿಂತಿವೆ. ಈ ಬಾರಿಯೂ ಅದು ಮುಂದುವರೆಯುತ್ತದೆ ಅಷ್ಟೇ.
 
 ಯಾವ್ಯಾವ ತಿಂಗಳು, ಏನೇನು? 
 ಫೆಬ್ರವರಿ: ಕ್ರಿಕೆಟ್‌
 ಮಾರ್ಚ್‌- ಏಪ್ರಿಲ್‌: ಪರೀಕ್ಷೆಗಳು ಮತ್ತು ಕ್ರಿಕೆಟ್‌
 ಏಪ್ರಿಲ್‌-ಮೇ: ಕ್ರಿಕೆಟ್‌ ಮತ್ತು ಚುನಾವಣೆ
 
ಬಿಡುಗಡೆಗೆ ಸಜ್ಜಾಗುತ್ತಿರುವ ನಿರೀಕ್ಷಿತ ಚಿತ್ರಗಳು
ಟಗರು, ರಾಜರಥ, ಪ್ರೇಮ ಬರಹ, ರ್‍ಯಾಂಬೋ 2, ಜಾನಿ ಜಾನಿ ಎಸ್‌ ಪಾಪ, ಸಂಹಾರ, ದಳವಾಯಿ

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.