ಗಡ್ಡಪ್ಪ ಗಡ್ಡ ಬಿಟ್ಟಿದ್ದು ಯಾಕೆ ಗೊತ್ತಾ?


Team Udayavani, Feb 13, 2018, 10:52 AM IST

Gaddappa1.jpg

“ತಿಥಿ’ ಚಿತ್ರದ ಮೂಲಕ ಬೆಳಕಿಗೆ ಬಂದು, ಬಿಝಿಯಾದ ಗಡ್ಡಪ್ಪ, ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಗಡ್ಡಪ್ಪ ಅವರ ಹೈಲೈಟ್‌ ಅಂದರೆ ಅವರ ಗಡ್ಡ. ಎಲ್ಲಾ ಓಕೆ, ಗಡ್ಡಪ್ಪ ಗಡ್ಡ ಬಿಡಲು ಕಾರಣವೇನು ಎಂದು ಕೇಳಿದರೆ ಅದರ ಹಿಂದಿನ ಕಥೆಯನ್ನು ಹೇಳುತ್ತಾರೆ ಗಡ್ಡಪ್ಪ. ಮಂಡ್ಯದ ನೊದೆಕೊಪ್ಪಲಿನ ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ.

ಕೆಲ ವರ್ಷಗಳ ಹಿಂದೆ ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಗಡ್ಡಪ್ಪ ಅವರು ಸಣ್ಣ ಹೋಟೆಲ್‌ವೊಂದರನ್ನು ಇಟ್ಟಿದ್ದರಂತೆ. ಸುತ್ತಮುತ್ತ ಕಾಡು, ಹೆಚ್ಚು ಮನೆಗಳಿಲ್ಲದ ಜಾಗ, ಮನೆಯಿಂದ ದೂರದಲ್ಲಿರುವ ಹೋಟೆಲ್‌. ಸಹಜವಾಗಿಯೇ ಕಳ್ಳರ ಭಯ ಗಡ್ಡಪ್ಪ ಅವರನ್ನು ಕಾಡಿತ್ತಂತೆ. ಇನ್ನೆಲ್ಲಿ ಕಳ್ಳರು ಹೋಟೆಲ್‌ಗೆ ನುಗ್ಗುತ್ತಾರೋ ಎಂಬ ಭಯದಿಂದ ಮನಸ್ಸಿನಲ್ಲೇ ದೇವರನ್ನು ನೆನೆಸಿಕೊಂಡು, “ದೇವರೇ ಕಳ್ಳರ ಕಾಟವನ್ನು ತಪ್ಪಿಸು, ನಾನು ಗಡ್ಡ ಬಿಡುತ್ತೇನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡರಂತೆ.

ಹಾಗೆ ಬಿಟ್ಟ ಗಡ್ಡ ಹಾಗೆ ಮುಂದುವರಿದಿದೆ. ಆ ನಂತರ ಗಡ್ಡ ತೆಗೆಯುವ ಗೋಜಿಗೆ ಗಡ್ಡಪ್ಪ ಹೋಗಲಿಲ್ಲ. ಬಸ್ಸಿನ ವ್ಯವಸ್ಥೆ ಇರದ ಅವರ ಊರಿಗೆ ಗಡ್ಡಪ್ಪ ಗಡ್ಡ ಬಿಟ್ಟ ನಂತರ ಅವರಿಗೆ ಒಂದು ಬಸ್‌ ಕೂಡಾ ಬಂತಂತೆ. ಆ ಬಸ್ಸಿನ ಕಂಡಕ್ಟರ್‌ ಇವರ ಗಡ್ಡ ನೋಡಿ, ಗಡ್ಡಪ್ಪ ಎಂದು ಕರೆಯಲಾರಂಭಿಸಿದನಂತೆ. ಅಂದಿನಿಂದ ಚನ್ನೇಗೌಡ ಗಡ್ಡಪ್ಪ ಆಗಿ ಫೇಮಸ್‌ ಆಗಿದ್ದಾರೆ. 

80 ವರ್ಷದ ಗಡ್ಡಪ್ಪ ಅವರನ್ನು ಅವರ ಮಗಳು ನೋಡಿಕೊಳ್ಳುತ್ತಿದ್ದಾರೆ. ಶೂಟಿಂಗ್‌ಗೆ ಕಳುಹಿಸುವುದರಿಂದ ಹಿಡಿದು ಸಂಭಾವನೆ ವಿಚಾರವನ್ನು ಅವರೇ ನೋಡಿಕೊಳ್ಳುತ್ತಾರಂತೆ. ಹಾಗಾದರೆ ಸಿನಿಮಾದವರು ದಿನಕ್ಕೆ ಗಡ್ಡಪ್ಪ ಅವರಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂದರೆ ಗೊತ್ತಿಲ್ಲ ಎನ್ನುತ್ತಾರೆ. “ನನಗೆ ಅದೆಲ್ಲಾ ಗೊತ್ತಿಲ್ಲ. ಮಗಳು ನೋಡಿಕೊಳ್ಳುತ್ತಾಳೆ. ಸಿನಿಮಾದವರು ಕಾರು ಕಳುಹಿಸುತ್ತಾರೆ.

ಶೂಟಿಂಗ್‌ಗೆ ಅದರಲ್ಲಿ ಬಂದು ಹೋಗುತ್ತೇನೆ’ ಎನ್ನುತ್ತಾರೆ. ಸಿನಿಮಾದವರು ಸರಿಯಾಗಿ ಸಂಭಾವನೆ ಕೊಡುತ್ತಾರಾ ಎಂದರೆ, “ಕೆಲವರು ಕೊಡುತ್ತಾರೆ. ಇನ್ನು ಕೆಲವರು ಕೊಡುವುದಿಲ್ಲ. ಇವತ್ತು, ನಾಳೆ ಎನ್ನುತ್ತಾರೆ. ನಾನು ಅವರ ಜೊತೆ ಜಗಳವಾಡೋಕೆ ಆಗುತ್ತಾ’ ಎಂಬ ಉತ್ತರ ಅವರಿಂದ ಬರುತ್ತದೆ.

ಗಡ್ಡಪ್ಪ ಅವರನ್ನು ಕೆಲವು ಸಿನಿಮಾದವರು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ. ಅವರ ಬಾಯಲ್ಲಿ ಅಶ್ಲೀಲ ಸಂಭಾಷಣೆ ಹೇಳಿಸುತ್ತಾರೆ ಎಂಬ ಮಾತೂ ಇದೆ. “ನನಗೆ ಅವೆಲ್ಲಾ ಗೊತ್ತಾಗಲ್ಲ. ನಿರ್ದೇಶಕರು ಹೀಗೇ ಹೇಳಬೇಕು ಎನ್ನುತ್ತಾರೆ, ನಾನು ಹೇಳುತ್ತೇನೆ’ ಎನ್ನುತ್ತಾರೆ ಗಡ್ಡಪ್ಪ. 

ಚುನಾವಣಾ ಪ್ರಚಾರಕ್ಕೆ ಕರೆಯುತ್ತಾರೆ: ಚುನಾವಣೆ ಹತ್ತಿರ ಬಂದಿದೆ. ಪ್ರತಿ ಪಕ್ಷಗಳು ಪ್ರಚಾರ ಸಭೆಗಳಲ್ಲಿ, ರೋಡ್‌ ಶೋಗಳಲ್ಲಿ ಜನರನ್ನು ಸೆಳೆಯಲು ಏನಾದರೊಂದು ದಾರಿ ಹುಡುಕುತ್ತಲೇ ಇರುತ್ತಾರೆ. ಅದರಲ್ಲಿ ಸಿನಿಮಾ ಕಲಾವಿದರನ್ನು ಬಳಸಿಕೊಳ್ಳುವುದು ಕೂಡಾ ಒಂದು. ಈಗ ಗಡ್ಡಪ್ಪ ಅವರನ್ನು ಚುನಾವಣಾ ಪ್ರಚಾರಕ್ಕೆ ಪಕ್ಷಗಳು ಕರೆಯುತ್ತಿವೆಯಂತೆ.

“ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು ಪ್ರಚಾರಕ್ಕೆ ಬರುವಂತೆ ಕರೆಯುತ್ತಿವೆ. ಆದರೆ ನಾನು ಹೋಗುತ್ತಿಲ್ಲ. ಯಾವುದಾದರೂ ಒಂದು ಪಕ್ಷಕ್ಕೆ ಹೋದರೆ ಮತ್ತೂಂದು ಪಕ್ಷಕ್ಕೆ ಬೇಜಾರು. ಅದಕ್ಕೆ ನನಗೆ ಆರೋಗ್ಯ ಸರಿಯಿಲ್ಲ ಎಂದು ತಪ್ಪಿಸುತ್ತಿದ್ದೇನೆ’ ಎನ್ನುವುದು ಗಡ್ಡಪ್ಪ ಮಾತು. 

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.