ಅಭಿಷೇಕ್ ಈಗ ಅಮರ್
Team Udayavani, Feb 13, 2018, 9:30 PM IST
ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಅಭಿಷೇಕ್ ಹೀರೋ ಆಗುತ್ತಾರೆಂಬುದು ಪಕ್ಕಾ ಆದ ದಿನದಿಂದಲೇ ಅವರ ಸಿನಿಮಾಕ್ಕೆ ಯಾವ ಟೈಟಲ್ ಇಡಬಹುದೆಂಬ ಚರ್ಚೆ, ಸುದ್ದಿಗಳು ಓಡಾಡುತ್ತಲೇ ಇವೆ. ಆರಂಭದಲ್ಲಿ ಚಿತ್ರಕ್ಕೆ “ಜಲೀಲ’ ಎಂದು ಟೈಟಲ್ ಇಡಲಾಗುತ್ತದೆ ಎಂಬ ಸುದ್ದಿ ಓಡಾಡುತ್ತಿತ್ತು. “ನಾಗರಹಾವು’ ಚಿತ್ರದಲ್ಲಿ ಅಂಬರೀಶ್ ಅವರ ಪಾತ್ರದ ಹೆಸರಿದು.
ಆದರೆ, “ಜಲೀಲ’ ಎಂಬ ಹೆಸರಿನಲ್ಲಿ ಈಗಾಗಲೇ ಹೊಸಬರ ಸಿನಿಮಾವೊಂದು ಆರಂಭವಾಗಿದೆ. ಅದರ ಬೆನ್ನಲ್ಲೇ “ತಿರುಗುಬಾಣ’ ಎಂಬ ಶೀರ್ಷಿಕೆ ಇಡುತ್ತಾರೆ ಎಂಬ ಸುದ್ದಿಯೂ ಇತ್ತು. ಇದು ಕೂಡಾ ಅಂಬರೀಶ್ ಅವರ ಸಿನಿಮಾ. ಈಗ ಮತ್ತೂಂದು ಟೈಟಲ್ ಜೋರಾಗಿ ಕೇಳಿಬರುತ್ತಿದೆ ಮತ್ತು ಬಹುತೇಕ ಅದು ಅಂತಿಮವಾಗುವ ಸಾಧ್ಯತೆಯೂ ಇದೆ. ಅದು “ಅಮರ್’.
ಇದು ಅಭಿಷೇಕ್ ಅವರ ಮೊದಲ ಚಿತ್ರಕ್ಕೆ ಇಟ್ಟಿದ್ದಾರೆನ್ನಲಾದ ಟೈಟಲ್. ಅಮರ್ ಟೈಟಲ್ಗೂ ಅಂಬರೀಶ್ ಅವರಿಗೂ ಒಂದು ಸಂಬಂಧವಿದೆ ಎಂದರೆ ತಪ್ಪಲ್ಲ. ಮೊದಲನೇಯದಾಗಿ ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್. ಇದು ಒಂದು ಅಂಶವಾದರೆ ಸಿನಿಮಾ ವಿಷಯದಲ್ಲೂ ಅಮರ್ಗೂ ಅಂಬರೀಶ್ ಅವರಿಗೂ ತುಂಬಾನೇ ನಂಟಿದೆ.
“ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’ ಹಾಗೂ “ಅಮರನಾಥ್’ ಎಂಬ ಸಿನಿಮಾಗಳಲ್ಲೂ ಅಂಬರೀಶ್ ನಟಿಸಿದ್ದಾರೆ. ಇದರ ಹೊರತಾಗಿಯೂ ಅಮರನಾಥ್ ಎಂಬ ಪಾತ್ರಗಳಲ್ಲೂ ಅಂಬರೀಶ್ ಕಾಣಿಸಿಕೊಂಡಿದ್ದರು. “ಚಕ್ರವ್ಯೂಹ’ ಹಾಗೂ “ಬುಲ್ಬುಲ್’ ಚಿತ್ರಗಳಲ್ಲಿ ಅಂಬರೀಶ್ ಅವರ ಪಾತ್ರದ ಹೆಸರು ಕೂಡಾ ಅಮರನಾಥ್.
ಹೀಗೆ ಅಮರ್ ಹೆಸರಿಗೂ ಅಂಬರೀಶ್ ಅವರಿಗೂ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಈಗ ಅವರ ಮಗನ ಮೊದಲ ಚಿತ್ರಕ್ಕೂ “ಅಮರ್’ ಎಂದು ಟೈಟಲ್ ಇಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರದ ನಿರ್ಮಾಪಕರು. ಈ ತಿಂಗಳಾಂತ್ಯ ಅಥವಾ ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ