ಎಲ್ಲವೂ ಅಭಿಮಾನಿಗಳು ಕೊಟ್ಟ ಭಿಕ್ಷೆ; ಹೊಸ ಯಜಮಾನ ಈ ದರ್ಶನ
Team Udayavani, Feb 15, 2018, 2:42 PM IST
ಒಂದೇ ಒಂದು ದಿನ ಬಾಕಿ ಇದೆ, ದರ್ಶನ್ ಅಭಿಮಾನಿಗಳ ಹಬ್ಬಕ್ಕೆ. ಅದು ದರ್ಶನ್ ಹುಟ್ಟುಹಬ್ಬ (ಫೆ.16). ಇಂದು ಮಧ್ಯರಾತ್ರಿಯಿಂದಲೇ ದರ್ಶನ್ ಮನೆಮುಂದೆ ಅಭಿಮಾನಿಗಳ ಸಂಭ್ರಮ ಆರಂಭವಾಗಲಿದೆ. ಈ ನಡುವೆಯೇ ಅವರ 51ನೇ ಸಿನಿಮಾಕ್ಕೆ “ಯಜಮಾನ’ ಎಂಬ ಟೈಟಲ್ ಕೂಡಾ ಇಡಲಾಗಿದೆ. ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಜೊತೆ “ಉದಯವಾಣಿ’ ನಡೆಸಿದ ಚಿಟ್ಚಾಟ್ ಇಲ್ಲಿದೆ …
* 50 ಚಿತ್ರಗಳನ್ನು ಮುಗಿಸಿದ್ದೀರಿ. 51ನೇ ಚಿತ್ರದ ಹೊಸ್ತಿಲಿನಲ್ಲಿದ್ದೀರಿ?
– ನಮ್ಮದೇನಿದೆ ಸ್ವಾಮಿ, ಎಲ್ಲವೂ ಅಭಿಮಾನಿಗಳು ಕೊಟ್ಟ ಭಿಕ್ಷೆ. ಅವರನ್ನು ಖುಷಿಪಡಿಸೋದಷ್ಟೇ ನಮ್ಮ ಕೆಲಸ. ಆ ನಿಟ್ಟಿನಲ್ಲಿ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಮುಂದೆಯೂ ಅದೇ ನಡೆಯುತ್ತದೆ.
* ನಾಳೆ ನಿಮ್ಮ ಹುಟ್ಟುಹಬ್ಬ. ಏನ್ ವಿಶೇಷ?
– ಅದು ಅವರ ದಿನ. ಅವರ ಪ್ರೀತಿ, ಅಭಿಮಾನಕ್ಕೆ ನಾನು ಗೌರವಿಸಬೇಕು. ಈಗಾಗಲೇ ಪೋಸ್ಟರ್, ಬ್ಯಾನರ್ ಕಟ್ಟಿದ್ದಾರೆ. ಅಂದು ಸಂಪೂರ್ಣವಾಗಿ ಅವರ ಜೊತೆ ಇರುತ್ತೇನೆ. ದೂರದ ಊರುಗಳಿಂದ ಬರುತ್ತಾರೆ. ಅದು ಅವರ ಪ್ರೀತಿ. ಅವರ ಪ್ರೀತಿಗೆ ನಾನು ಬೆಲೆಕಟ್ಟಲಾಗದು.
*”ಕುರುಕ್ಷೇತ್ರ’ ಚಿತ್ರದ ಬಗ್ಗೆ ಏನ್ ಹೇಳ್ತೀರಿ?
– ಅದೊಂದು ಹಬ್ಬ ಎಂದಷ್ಟೇ ಹೇಳಬಹುದು. ಅಷ್ಟೊಂದು ಸೊಗಸಾಗಿ ಮೂಡಿಬಂದಿದೆ. ಫ್ರೆàಮ್ ಟು ಫ್ರೆàಮ್ ಅದ್ಭುತವಾಗಿದೆ. ನನಗೆ ತುಂಬಾ ಖುಷಿಕೊಟ್ಟ ಹಾಗೂ ಒಳ್ಳೆಯ ಅನುಭವ ಕೊಟ್ಟ ಸಿನಿಮಾವದು. ನಾನು ಹೇಳುವ ಬದಲು ಸಿನಿಮಾ ಬಂದಾಗ ನೀವೇ ನೋಡಿ.
*”ಕುರುಕ್ಷೇತ್ರ’ ಸಿನಿಮಾ ಬಿಡುಗಡೆ ಮುಂದೆ ಹೋಗಿದೆಯಂತೆ?
– ನಿಮಗೆ ಗೊತ್ತಿರುವಂತೆ “ಕುರುಕ್ಷೇತ್ರ’ ದೊಡ್ಡ ಕ್ಯಾನ್ವಸ್ನ ಸಿನಿಮಾ. ಮುಖ್ಯವಾಗಿ ಇದರಲ್ಲಿ ಗ್ರಾಫಿಕ್ ಕೆಲಸ ತುಂಬಾ ಇದೆ. ಇತ್ತೀಚೆಗೆ ಒಂದು ಹಾಡು ನೋಡಿದೆವು. ತುಂಬಾ ಅದ್ಭುತವಾಗಿ ಬಂದಿದೆ. ಅದರ ಗ್ರಾಫಿಕ್ಗೆ ಸಾಕಷ್ಟು ಸಮಯ ಹಿಡಿದಿದೆ. ಇನ್ನು ಇಡೀ ಸಿನಿಮಾ ಗ್ರಾಫಿಕ್ ಮಾಡಲು ಸಾಕಷ್ಟು ಸಮಯ ಬೇಕು.
* ನಿಮ್ಮನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದ ಅಭಿಮಾನಿಯೊಬ್ಬ ತೀರಿಕೊಂಡಿದ್ದಾರೆ?
– ಹೌದು, ತುಂಬಾ ಬೇಸರವಾಯಿತು. ಕೊನೆಯ ಗಳಿಗೆಯಲ್ಲಿ ನನಗೆ ಅವರ ವಿಚಾರ ಗೊತ್ತಾಯಿತು. ಫೋನ್ನಲ್ಲಿ ಮಾತನಾಡಿದ್ದೆ. ಮೊದಲೇ ಗೊತ್ತಿದ್ದರೆ ನಮ್ಮ ಕಡೆಯಿಂದ ಏನಾಗುತ್ತದೋ ಅದು ಮಾಡಬಹುದಿತ್ತು.
*ನೀವೀಗ “ಯಜಮಾನ’ ಆಗಿದ್ದೀರಿ. ಏನ್ ಹೇಳ್ತೀರಿ?
– (ನಗು) ನನ್ನ ಒಂದು ಸಿನಿಮಾ ಬಿಡುಗಡೆಗೆ ಮುನ್ನ ಇನ್ನೊಂದು ಸಿನಿಮಾ ಬಗ್ಗೆ ನಾನು ಮಾತನಾಡಲ್ಲ ಎಂದು ನಿಮ್ಗೂ ಗೊತ್ತು. ಈಗ “ಕುರುಕ್ಷೇತ್ರ’ ರೆಡಿಯಾಗುತ್ತಿದ್ದೆ. ಅದು ಬಂದು ಬಿಡಲಿ. ಆ ನಂತರ ಮಾತನಾಡೋಣ …
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು