ಒಂದು ನಿರ್ಮಲ ಪ್ರಯತ್ನ
Team Udayavani, Feb 17, 2018, 10:40 AM IST
“ಕೇರ್ ಆಫ್ ಫುಟ್ಪಾತ್’ ಮೂಲಕ ಕಿಶನ್ ಕನ್ನಡದ ಕಿರಿಯ ನಿರ್ದೇಶಕ ಎಂಬ ಪಟ್ಟ ತಗೊಂಡಿದ್ದಾರೆ. ಈಗ ಮತ್ತೆ ಕಿರಿಯರ ಸುದ್ದಿ. ಹೌದು, ಮಕ್ಕಳೇ ಸೇರಿಕೊಂಡು ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ. ಇಲ್ಲಿ ನಿರ್ದೇಶಕ, ಸಂಗೀತ ನಿರ್ದೇಶಕಿ, ಡಿಸೈನರ್ ಎಲ್ಲರೂ ಕಿರಿಯರೇ. ಕಿರಿಯರೆಲ್ಲಾ ಸೇರಿ ಮಾಡುತ್ತಿರುವ ಈ ಚಿತ್ರದ ಹೆಸರು “ನಿರ್ಮಲ’. ಚಿತ್ರಕ್ಕೆ “ಮುದ್ದು ಮನಸುಗಳ ಕನಸು’ ಎಂಬ ಟ್ಯಾಗ್ಲೈನ್ ಇದೆ.
ಅಂದಹಾಗೆ, “ನಿರ್ಮಲ’ ಚಿತ್ರವನ್ನು ನಿರ್ಮಿಸುತ್ತಿರುವುದು ಭಾ.ಮ. ಹರೀಶ್ ಅವರ ಪುತ್ರ ಉಲ್ಲಾಸ್. ಉಲ್ಲಾಸ್ ಒಂದೆರೆಡು ವರ್ಷಗಳ ಹಿಂದೆ ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಎಂಬ ನಟನಾ ತರಬೇತಿ ಶಾಲೆಯನ್ನು ಪ್ರಾರಂಭಿಸಿದ್ದರು. ಆ ಶಾಲೆಯಲ್ಲಿ ನಟನೆ, ಸಂಗೀತ ಕಲಿಯಲು ಬಂದ ಮಕ್ಕಳೊಂದಿಗೆ ಯಾಕೆ ಸಿನಿಮಾ ಮಾಡಬಾರದು ಎಂದು ಯೋಚಿಸಿ, ಆಯಾ ಕ್ಷೇತ್ರದಲ್ಲಿ ಆಸಕ್ತಿ ಇರುವವರನ್ನೇ ಹುಡುಕಿ, ಅವರಿಂದಲೇ ಕೆಲಸ ಮಾಡಿಸಿದ್ದಾರೆ.
ಚಿತ್ರವನ್ನು ನಿರ್ದೇಶಿಸಿರುವುದು ಲೋಹಿತ್ ಎಂಬ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿ. ಅವರಿಗೆ ಕಿರುತೆರೆ ನಿರ್ದೇಶಕ ಪ್ರೀತಂ ಶೆಟ್ಟಿಯಿಂದ ತರಬೇತಿ ಕೊಡಿಸಿ, ಚಿತ್ರ ನಿರ್ದೇಶನ ಮಾಡಿಸಲಾಗುತ್ತಿದೆ. ಇನ್ನು ಸಂಗೀತ ನಿರ್ದೇಶಕಿ ವರ್ಷಶ್ರೀ, ಸಂಕಲನಕಾರ ಲೋಹಿತ್ ಶಂಕರ್, ಪೋಸ್ಟರ್ ಡಿಸೈನರ್ ಅಂಕಿತ ನಾಯ್ಡು ಮುಂತಾದವರಿಗೆ ಹಿರಿಯರಿಂದ ಸೂಕ್ತ ತರಬೇತಿ ಕೊಡಿಸಿ, ಅವರಿಂದಲೇ ಕೆಲಸ ಮಾಡಿಸಲಾಗುತ್ತಿದೆ.
ಈ ತಂಡದಲ್ಲಿ ಅನುಭವಿ ಎಂದರೆ, ಛಾಯಾಗ್ರಾಹಕ ಪವನ್ ಕುಮಾರ್ ಮತ್ತು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ವೆಂಕಗಿರಿ ಬ್ರದರ್ಸ್ ಮಾತ್ರ. ಮಿಕ್ಕಂತೆ ಸಾಕಷ್ಟು ಹೊಸಬರು ಮತ್ತು ಅದರಲ್ಲೂ ಮಕ್ಕಳೇ ಇರುವುದು ವಿಶೇಷ.
“ನಿರ್ಮಲ’ ಚಿತ್ರದ ಚಿತ್ರೀಕರಣ ಏಪ್ರಿಲ್ನಿಂದ ಆರಂಭವಾಗಲಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ಬಿಡುಗಡೆ ಮಾಡುವುದಕ್ಕೆ ನಟಿ ಪ್ರೇಮ ಬಂದಿದ್ದರು. ನಿರ್ಮಾಪಕ ಎಸ್.ವಿ. ಬಾಬು, ಜೀ ಕನ್ನಡದ “ಡ್ರಾಮಾ ಜ್ಯೂನಿಯರ್’ ನಿರ್ದೇಶಕ ಶರಣಯ್ಯ, ಭಾ.ಮ. ಹರೀಶ್, ಉಲ್ಲಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ