ಪರದೇಸಿ ಪ್ರೇಮ ಪ್ರಸಂಗ!


Team Udayavani, Feb 24, 2018, 11:27 AM IST

Pardesi.jpg

ಒಂದು ಸಿನಿಮಾ ಬಳಿಕ ಪುನಃ ಅದೇ ತಂಡ ಸೇರಿಕೊಂಡು ಮತ್ತೂಂದು ಸಿನಿಮಾ ಮಾಡುವುದು ತೀರಾ ವಿರಳ. ಆದರೆ, “ಪರದೇಸಿ ಕೇರಾಫ್ ಲಂಡನ್‌’ ಚಿತ್ರ ಅದನ್ನು ಸುಳ್ಳು ಮಾಡಿದೆ. ಈ ಹಿಂದೆ, “ರಾಜ ಲವ್ಸ್‌ ರಾಧೆ’ ಚಿತ್ರ ಮಾಡಿದ್ದ ತಂಡ, ಆ ಚಿತ್ರದ ಬಿಡುಗಡೆಗೂ ಮುನ್ನವೇ ಈಗ “ಪರದೇಸಿ ಕೇರಾಫ್ ಲಂಡನ್‌’ ಚಿತ್ರಕ್ಕೆ ಅಣಿಯಾಗಿದೆ. ಬುಧವಾರ ಚಿತ್ರಕ್ಕೆ ಮುಹೂರ್ತವೂ ನಡೆದಿದೆ.

ಮಾಜಿ ಶಾಸಕ ಸೋಮಶೇಖರ್‌ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ವಿಜಯ್‌ ರಾಘವೇಂದ್ರ ಹೀರೋ. ಎಂ. ರಾಜಶೇಖರ್‌ ನಿರ್ದೇಶಕರು. ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಬಿ. ಬದರಿನಾರಾಯಣ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಮನರಂಜನೆ ಚಿತ್ರ.

ಜತೆಗೆ ಫ್ಯಾಮಿಲಿ ಡ್ರಾಮ ಕೂಡ ಇದೆ. ಇಲ್ಲಿ ಶುದ್ಧ ಮನರಂಜನೆಗೆ ಒತ್ತು ಕೊಡಲಾಗಿದೆ. ಸಿನಿಮಾ ನೋಡಲು ಬರುವ ಪ್ರೇಕ್ಷಕನಿಗೆ ಬೇಕಿರುವುದು, ಅಪ್ಪಟ ಮನರಂಜನೆ. ಅದನ್ನು ಇಲ್ಲಿ ಕಾಣಬಹುದು. ಮತ್ತದೇ ತಂಡವನ್ನಿಟ್ಟುಕೊಂಡು ಮಾಡೋಕೆ ಕಾರಣ, ಹಿಂದಿನ ಸಿನಿಮಾದಲ್ಲಿದ್ದ ಬಾಂಧವ್ಯ ಮತ್ತು ಹೊಂದಾಣಿಕೆ. ನಿರ್ಮಾಪಕರು ಬಿಇ ಓದುತ್ತಿದ್ದ ಸಂದರ್ಭದ ಗೆಳೆಯರು. ಅವರಿಗೆ ಒಳ್ಳೆಯ ಚಿತ್ರ ಮಾಡುವ ಆಸೆ ಇತ್ತು.

ಅದಕ್ಕೆ ತಕ್ಕ ಕಥೆಯೂ ನನ್ನಲ್ಲಿತ್ತು. ಕೇಳಿದ ಕೂಡಲೇ ಚಿತ್ರ ಮಾಡುವ ಮನಸು ಮಾಡಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ಒಳ್ಳೆಯ ಚಿತ್ರ ಮಾಡುವ ಗ್ಯಾರಂಟಿ ಕೊಡ್ತೀನಿ. “ಪರದೇಸಿ’ ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ದಿಕ್ಕಿಲ್ಲದವ, ಇನ್ನೊಂದು ಪರದೇಶದಿಂದ ಬಂದವ. ಈ ಎರಡೂ ಪದಗಳಿಗೂ ಕನೆಕ್ಟ್ ಆಗುವಂತ ಕಥೆ ಇಲ್ಲಿದೆ. ಹಾಗಾಗಿ ಈ ಶೀರ್ಷಿಕೆ ಇಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟರು ನಿರ್ದೇಶಕ ರಾಜಶೇಖರ್‌.

ಚಿತ್ರ ಲಂಡನ್‌ನಲ್ಲೂ ನಡೆಯುತ್ತಾ? ಪತ್ರಕರ್ತರ ಪ್ರಶ್ನೆಯೊಂದು ತೂರಿಬಂತು. ಅದಕ್ಕೆ ಉತ್ತರವಾಗಿದ್ದು, ನಟ ವಿಜಯರಾಘವೇಂದ್ರ. “ಈ ಚಿತ್ರದ ಸಸ್ಪೆನ್ಸ್‌ ಅದೇ’ ಅಂತ ಮಾತಿಗಿಳಿದರು. “ಕಥೆಯ ತಿರುವು ಶೀರ್ಷಿಕೆಯಲ್ಲಿದೆ. ಹಾಗಾಗಿ, ಇದು ಲಂಡನ್‌ನಲ್ಲಿ ನಡೆಯುತ್ತಾ, ಇಲ್ಲವಾ ಅನ್ನೋದೇ ಗೌಪ್ಯ. ಸದ್ಯಕ್ಕೆ ಕಥೆ ಎಲ್ಲೆಲ್ಲಿ ಓಡಾಡುತ್ತೋ, ಅಲ್ಲೆಲ್ಲಾ ಚಿತ್ರೀಕರಣ ಆಗುತ್ತೆ. ಒಳ್ಳೆಯ ಮನರಂಜನೆಯಂತೂ ಇಲ್ಲಿ ಸಿಗಲಿದೆ.

ದೊಡ್ಡ ಆ್ಯಕ್ಷನ್‌ ಏನೂ ಇಲ್ಲ. ಫ್ಯಾಮಿಲಿ ಕುಳಿತು ನೋಡುವ ಅಚ್ಚುಕಟ್ಟಾದ ಚಿತ್ರವಂತೂ ಹೌದು. ವಿಭಿನ್ನವಲ್ಲದಿದ್ದರೂ, ವಿಶೇಷತೆಗಳಿಗೇನೂ ಕೊರತೆ ಇಲ್ಲ’ ಎಂಬುದು ವಿಜಯ್‌ ರಾಘವೇಂದ್ರ ಮಾತು. ನಿರ್ಮಾಪಕ ಬದರಿನಾರಾಯಣ ಅವರಿಗೆ ರಾಜಶೇಖರ್‌ ಕಾಲೇಜು ಗೆಳೆಯರು. ಅವರ ಮೇಲಿನ ನಂಬಿಕೆಯಿಂದ ಚಿತ್ರ ಮಾಡಲು ಮುಂದಾಗಿದ್ದಾರೆ. ಇನ್ನು, ಈ ಚಿತ್ರಕ್ಕೆ ಪೂಜಾ ಹುಣಸೂರು ಮತ್ತು ಸ್ನೇಹಾ ನಾಯಕಿಯರು. ಈ ಪೈಕಿ ಪೂಜಾ ಹುಣಸೂರು ಅವರಿಗಿದು ಮೂರನೇ ಚಿತ್ರ. ಸ್ನೇಹಾ ಮೂಲತಃ ಸಾಫ್ಟ್ವೇರ್‌ ಉದ್ಯೋಗಿ.

ಮಾಡೆಲಿಂಗ್‌ ಕ್ಷೇತ್ರದಿಂದ ನೇರ “ಪರದೇಸಿ’ ಜೊತೆಗೆ ಬಂದಿದ್ದಾರೆ. ಉಳಿದಂತೆ ತಬಲಾ ನಾಣಿ, ಶೋಭರಾಜ್‌, ರಂಗಾಯಣ ರಘು, ಪೆಟ್ರೋಲ್‌ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಯತಿರಾಜ್‌ ನಟಿಸುತ್ತಿದ್ದಾರೆ. ವೀರ್‌ಸಮರ್ಥ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಕೆ.ಕಲ್ಯಾಣ್‌, ನಾಗೇಂದ್ರಪ್ರಸಾದ್‌, ಕವಿರಾಜ್‌ ಅವರ ಸಾಹಿತ್ಯವಿದೆ. ಕೆ.ಚಿದಾನಂದ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮಾರ್ಚ್‌ 5 ರಿಂದ ಬೆಂಗಳೂರು, ಸಿರುಗುಪ್ಪ, ಮೈಸೂರು ಇತರೆಡೆ ಒಂದೇ ಹಂತದ ಚಿತ್ರàಕರಣ ನಡೆಯಲಿದೆ.

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.