ರಾಜರಥದಲ್ಲಿ ಮುಂದೆ ಬನ್ನಿ ಹಾಡು ಬಳಕೆ
Team Udayavani, Mar 12, 2018, 11:18 AM IST
“ಮುಂದೆ ಬನ್ನಿ ಕಮಾನ್ ಕಮಾನ್ ಮುಂದೆ ಬನ್ನಿ. ಬೇರೆ ಯಾರು ಈ ಮಾತನ್ನು ಹೇಳ್ಳೋದಿಲ್ಲಾ…’ ಇದು 1983 ರಲ್ಲಿ ತೆರೆಕಂಡ “ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಹಾಡು. ಕೆ.ಬಾಲಚಂದರ್ ನಿರ್ದೇಶನದ ಈ ಚಿತ್ರದಲ್ಲಿ ಸುಹಾಸಿನಿ ಹೈಲೈಟ್ ಆಗಿದ್ದರು. ಕಮಲ್ಹಾಸನ್ ಬಸ್ ಕಂಡಕ್ಟರ್ ಆಗಿ ಈ ಹಾಡಲ್ಲಿ ಕಾಣಿಸಿಕೊಂಡಿದ್ದರು. ಎಲ್ಲಾ ಸರಿ, ಈಗ ಯಾಕೆ ಈ ಹಾಡಿನ ವಿಷಯ ಅನ್ನುವ ಪ್ರಶ್ನೆ ಎದುರಾಗುವುದು ಸಹಜ.
ಈಗ ಈ ಹಾಡು ಪುನಃ ಸುದ್ದಿಯಾಗಿದೆ. ಅದು “ರಾಜರಥ’ ಚಿತ್ರದಲ್ಲಿ. ಹೌದು. ಜನಪ್ರಿಯವಾಗಿರುವ ಈ ಹಾಡನ್ನು ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹಾಡಿಗೆ ಸ್ವತಃ ಅನೂಪ್ ಭಂಡಾರಿ ಅವರೇ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಈ ಹಾಡನ್ನು ಯಶ್ ಬಿಡುಗಡೆ ಮಾಡಿದ್ದಾರೆ.
ಹಾಡಿನಲ್ಲಿರುವ “ಕನ್ನಡ ನಾಡಲಿ ನೀನು ಕನ್ನಡ ಮಾತಾಡು. ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು..’ ಎಂಬ ಪದ ನನಗಿಷ್ಟ ಎಂದು ಈ ಸಂದರ್ಭದಲ್ಲಿ ಯಶ್ ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರದ ಹಾಡಿನ ಮೇಕಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಯಶ್. ಈಗಾಗಲೇ ಈ ಹಾಡ್ ಸಾಮಾಜಿಕ ತಾಣದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.
ಆರಂಭದಿಂದಲೂ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ “ರಾಜರಥ’ ಈಗ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ, “ಬೆಂಕಿಯಲ್ಲಿ ಅರಳಿದ ಹೂವು’ ಮೂಲ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನೀಡಿದ್ದರು. ಚಿ.ಉದಯಶಂಕರ್ ಅವರು ಗೀತೆ ರಚಿಸಿದ್ದರು. “ರಾಜರಥ’ ಚಿತ್ರಕ್ಕೆ ಅನೂಪ್ ಭಂಡಾರಿ ಸಂಗೀತ ನೀಡಿ, ಗಾಯನವನ್ನೂ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು