ಪ್ರೇಮ್‌ ಈಗ ಲವ್‌ ಲೀಡರ್‌


Team Udayavani, Apr 9, 2018, 11:26 AM IST

Prem-(1).jpg

ನೆನಪಿರಲಿ ಪ್ರೇಮ್‌ ಅಂದಾಗ, ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಹುಡುಗಿಯರ ದಂಡೇ ಇದೆ. ಅದರಲ್ಲೂ ಕಾಲೇಜ್‌ ಹುಡುಗಿಯರ ಪಾಲಿಗೆ ಪ್ರೇಮ್‌ ಪಕ್ಕಾ ಲವ್ವರ್‌ ಬಾಯ್‌. ಅದೆಲ್ಲವೂ ಸರಿ, ಈಗ ಅದೇ ನೆನಪಿರಲಿ ಪ್ರೇಮ್‌, ಅದೇಕೋ ಏನೋ, ಹುಡುಗಿಯರನ್ನ ತುಂಬಾ ಬೈದಿದ್ದಾರೆ! ಹೌದು, ಆದರೆ, ಯಾಕೆ ಅವರು ಹುಡುಗಿಯರನ್ನು ಬಾಯಿಗೆ ಬಂದಂತೆ ಬೈದಿದ್ದಾರೆ ಎಂಬುದಕ್ಕೆ “ದಳಪತಿ’ ನೋಡಬೇಕು. ಅವರ ಅಭಿನಯದ 22 ನೇ ಚಿತ್ರವಿದು. ಈ ವಾರ ತೆರೆಗೆ ಬರುತ್ತಿದೆ. “ದಳಪತಿ’ಯ ವಿಶೇಷ ಕುರಿತಂತೆ ಪ್ರೇಮ್‌ “ಉದಯವಾಣಿ’ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ.

* ಪ್ರೇಮ್‌ ದಳಪತಿಯಲ್ಲಿ ಸಂಪೂರ್ಣ ಬದಲಾಗಿದ್ದಾರಂತೆ?
ಹಾಗೇನೂ ಇಲ್ಲ. ಆದರೆ, ಎಂದಿನ ಚಿತ್ರಗಳಿಗಿಂತ ಕೊಂಚ ಹೊಸ ಬದಲಾವಣೆ ಇಲ್ಲಿದೆ. ಸಿನಿಮಾ ನೋಡಿದವರಿಗೆ ಪಕ್ಕಾ ಬದಲಾವಣೆ ಏನೆಂಬುದಂತೂ ಗೊತ್ತಾಗಲಿದೆ.

* ಆ ಬದಲಾವಣೆ ಏನೆಂದು ಹೇಳಬಹುದಾ?
ನಾನು ಇದುವರೆಗೆ ಹಲವು ಚಿತ್ರಗಳಲ್ಲಿ ಲವ್ವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದೆ. ಆದರೆ, ಇಲ್ಲಿ “ಲವ್‌ ಲೀಡರ್‌’ ಆಗಿ ಕಾಣಿಸಿಕೊಂಡಿದ್ದೇನೆ. ಅದೇ ಆ ಬದಲಾವಣೆಯ ವಿಶೇಷ. ಲವ್‌ ಲೀಡರ್‌ ಯಾಕಾಗುತ್ತಾನೆ ಎಂಬುದೇ ಚಿತ್ರದ ಹೈಲೆಟ್‌.

*ಹಾಗಾದರೆ ಲವ್‌ ಲೀಡರ್‌ ಇಲ್ಲಿ ಪ್ರೀತಿಗಾಗಿ ಹೊಡೆದಾಡುತ್ತಾನೆ ಅಂದಗಾಯ್ತು?
ಪ್ರೀತಿಸುವ ಪ್ರತಿಯೊಬ್ಬರಿಗೂ ಆ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅಲ್ಲೊಂದು ಭಯ ಇದ್ದೇ ಇರುತ್ತೆ. ಪ್ರೀತಿ ಮಾಡುವ ಶ್ರೀಮಂತನೇ ಇರಲಿ, ಬಡವನೇ ಇರಲಿ, ಆ ಪ್ರೀತಿಯನ್ನು ಪಡೆದುಕೊಳ್ಳಲು ಹರಸಾಹಸ ಪಡೆಯಲೇಬೇಕು. ಅಂಥವರಿಗೊಂದು ಸಂದೇಶ ಇಲ್ಲಿದೆ. ಅಂತಹ ಸಮಸ್ಯೆಯನ್ನು ಹೇಗೆ ದಾಟಿ ಹೊರಬರಬೇಕು ಎಂಬುದನ್ನು ಆ ಲವ್‌ಲೀಡರ್‌ ಇಲ್ಲಿ ವಿಶೇಷವಾಗಿ ಹೇಳಿದ್ದಾನೆ. ಅದೇ “ದಳಪತಿ’ಯ ಸ್ಪೆಷಲ್ಲು.

* ದಳಪತಿಯಲ್ಲಿ ಪ್ರೇಮ್‌ ಪಕ್ಕಾ ಆ್ಯಕ್ಷನ್‌ ಹೀರೋನಾ?
ಇಲ್ಲಿ ಓಹೋ ಎನ್ನುವಂತಹ ಆ್ಯಕ್ಷನ್‌ಗಳಿಲ್ಲ. ಬಾಂಬ್‌ ಸಿಡಿಯುವಂತಹ ಸನ್ನಿವೇಶಗಳಿಲ್ಲ. ಟಾಟಾ ಸುಮೋ ಎಗರುವುದೂ ಇಲ್ಲ. ಆದರೆ, ಕಮರ್ಷಿಯಲ್‌ ಲವ್‌ಸ್ಟೋರಿಯಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಮಾಸ್‌ ಮತ್ತು ಕ್ಲಾಸ್‌ ಅಂಶಗಳಿಗೇನೂ ಬರವಿಲ್ಲ. ಒಂದು ಕಂಪ್ಲೀಟ್‌ ಮಾಸ್‌ ಮತ್ತು ಕ್ಲಾಸ್‌ ಫೀಲ್‌ ಇರುವಂತಹ ಪಕ್ಕಾ ಲವ್‌ಸ್ಟೋರಿ ಚಿತ್ರವಿದು. ಪ್ರೀತಿಸೋರಿಗೆ, ಪ್ರೀತಿಸಬೇಕೆಂದಿರುವವರಿಗೆ ಸ್ಪೆಷಲ್‌ ಸಿನಿಮಾ ಅನ್ನಲ್ಲಡ್ಡಿಯಿಲ್ಲ.

* “ದಳಪತಿ’ ತುಂಬಾನೇ ತಡವಾಯಿತಲ್ವಾ?
ನಿಜ ಹೇಳಬೇಕೆಂದರೆ, “ದಳಪತಿ’ ವೇಳೆಯಲ್ಲಿ ನಾನು “ಚೌಕ’ದಲ್ಲಿದ್ದೆ. ನಿರ್ದೇಶಕ ಪ್ರಶಾಂತ್‌ರಾಜ್‌ “ಜೂಮ್‌’ ಮೂಡ್‌ನ‌ಲ್ಲಿದ್ದರು. ಅತ್ತ, ಕೃತಿ ಕರಬಂದ ಕೂಡ ತೆಲುಗು, ಹಿಂದಿ ಚಿತ್ರಗಳಲ್ಲಿ ಬಿಜಿಯಾಗಿದ್ದರು. ಎಲ್ಲರೂ ಆ ಜವಾಬ್ದಾರಿಗಳನ್ನು ಮುಗಿಸಿಕೊಂಡು ಬರಲೇಬೇಕಿತ್ತು. ಆ ಬಳಿಕ “ದಳಪತಿ’ ಶುರುವಾಯ್ತು. ಸ್ವಲ್ಪ ತಡವಾಗಿದೆ. ಆದರೂ ಲವ್‌ ಲೀಡರ್‌ನನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ.

* “ದಳಪತಿ’ಯಲ್ಲಿ ಪ್ರೇಮ್‌ ಪಾತ್ರವೇನು?
ಈಗಲೇ ಎಲ್ಲವನ್ನೂ ಹೇಳುವುದು ಕಷ್ಟ. ಅದನ್ನು ಸಿನಿಮಾದಲ್ಲೇ ನೋಡಬೇಕು. ಎರಡು ಶೇಡ್‌ ಪಾತ್ರವಿದೆ. ಮೊದಲು ಕ್ಲಾಸ್‌, ಆಮೇಲೆ ಮಾಸ್‌. ಹೊಸತರಹ ಫೀಲ್‌ ಕೊಡುವಂತಹ ಪಾತ್ರ ಸಿಕ್ಕಿದೆ. ನನ್ನ ಪ್ರಕಾರ, ನನ್ನ ಕೆರಿಯರ್‌ನಲ್ಲಿ “ದಳಪತಿ’ ವಿಶೇಷ ಕಥೆವುಳ್ಳ ಚಿತ್ರ.

* “ದಳಪತಿ’ ಬಗ್ಗೆ ಒನ್‌ಲೈನ್‌ ಹೇಳುವುದಾದರೆ?
ಪ್ರೀತಿಸುವವರಿಗೆ ಮತ್ತು ಸಂಬಂಧಗಳಿಗೆ ಯಾವುದೇ ಅಡ್ಡಿ ಆತಂಕ ಬಂದರೂ, “ದಳಪತಿ’ಯಾಗಿ ಅವೆಲ್ಲದರ ಸಮಸ್ಯೆ ಬಗೆಹರಿಸಲು ಸಿದ್ಧರಾಗಿರಬೇಕು ಎಂಬ ಕಥೆ ಇಲ್ಲಿದೆ. ಉಳಿದಂತೆ ಚಿತ್ರದಲ್ಲಿ ಚಿತ್ರಕಥೆ ಹೊಸದಾಗಿದೆ. ಚರಣ್‌ ಹಾಡುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಹಾಡು ಇಲ್ಲಿದೆ. ಅದರಲ್ಲೂ, ನಾನು ಟೈಟಲ್‌ ಸಾಂಗ್‌ನಲ್ಲಿ ಹುಡುಗಿಯರನ್ನು ಬೈಯುವ ಹಾಡೊಂದನ್ನು ಹಾಡಿದ್ದೇನೆ. ಅದೊಂಥರಾ ಮಜವಿದೆ. ಹುಡುಗರಿಗೆ ಖಂಡಿತ ಇಷ್ಟವಾಗುತ್ತೆ ಅದು.
 
* ಮುಂದಿನ ಚಿತ್ರಗಳು?
“ಲೈಫ್ ಜೊತೆ ಒಂದು ಸೆಲ್ಫಿ’ ನನ್ನ 24 ನೇ ಚಿತ್ರ. ಈಗಾಗಲೇ ಅದು ಮಗಿದಿದ್ದು, ಇನ್ನಷ್ಟು ಹೊಸ ಚಿತ್ರಗಳ ಮಾತುಕತೆ ನಡೆದಿದೆ. ಕಥೆಗಳನ್ನು ಕೇಳುತ್ತಿದ್ದೇನೆ. “ದಳಪತಿ’ ಬಿಡುಗಡೆ ಬಳಿಕ ಹೊಸ ಪ್ರಾಜೆಕ್ಟ್ ಬಗ್ಗೆ ಗಮನ.  25 ನೇ ಚಿತ್ರ ಯಾವುದಾಗುತ್ತೋ ಗೊತ್ತಿಲ್ಲ. ಸದ್ಯದಲ್ಲೇ  ಅನೌನ್ಸ್‌ ಮಾಡ್ತೀನಿ.

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.