ಭಯಂಕರ ನಟ ಪ್ರಥಮ್‌ನ ಮತ್ತೊಂದು ಚಿತ್ರ


Team Udayavani, Apr 16, 2018, 11:51 AM IST

Nata-Bhayankara.jpg

ಬಿಗ್‌ಬಾಸ್‌ ಖ್ಯಾತಿಯ ಪ್ರಥಮ್‌ ಅಭಿನಯದ “ದೇವ್ರಂಥ ಮನುಷ್ಯ’ ಚಿತ್ರ ಬಿಡುಗಡೆಯಾಗಿದ್ದಷ್ಟೇ ಗೊತ್ತು. ಆಮೇಲೆ ಪ್ರಥಮ್‌ ಸುದ್ದಿಯೇ ಇರಲಿಲ್ಲ. ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೊಂದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ ಪ್ರಥಮ್‌. ಅವರ ಚೊಚ್ಚಲ ನಿರ್ದೇಶನದ “ದೇವ್ರೌನೆ ಬುಡುಗುರು’ ಚಿತ್ರ ಇನ್ನೂ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಅದರ ಬೆನ್ನ ಹಿಂದೆಯೇ ಅವರು “ಬಿಲ್ಡಪ್‌’ ಎಂಬ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿದ್ದರು.

ಆ ಚಿತ್ರದ ಶೀರ್ಷಿಕೆಗೆ “ಇವನದು ಬರೀ ಇದೇ ಆಯ್ತು ಗುರು’ ಎಂಬ ಅಡಿಬರಹವೂ ಇತ್ತು. “ಬಿಲ್ಡಪ್‌’ ಚಿತ್ರದ ಕುರಿತು ಸಾಕಷ್ಟು ಬಿಲ್ಡಪ್‌ ಕೂಡ ಕೊಟ್ಟಿದ್ದರು. ಆದರೆ, ಅದರ “ಕಥೆ’ ಏನಾಯ್ತು ಅನ್ನೋದು ಅವರಿಗಷ್ಟೇ ಗೊತ್ತು. ಆಗಲೇ ಅವರು ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಹೊಸ ಚಿತ್ರಕ್ಕೆ “ನಟ ಭಯಂಕರ’ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದು ವಿಶೇಷ.

ಈಗಾಗಲೇ ಚಿತ್ರದ ಶೀರ್ಷಿಕೆವುಳ್ಳ ಪೋಸ್ಟರ್‌ವೊಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ, ಕಥೆಯ ತಿರುಳು ಏನು ಇತ್ಯಾದಿ ಕುರಿತು ಗುಟ್ಟು ರಟ್ಟು ಮಾಡಿಲ್ಲ. ಈ ಚಿತ್ರವನ್ನು ಸ್ವಾರಸ್ಯ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಥಮ್‌ ಈಗ ತಮ್ಮ ಹೆಸರ ಮುಂದೆ ಮತ್ತೊಂದು ಬಿರುದೂ ಸೇರಿಕೊಂಡಿದ್ದಾರೆ. ಇದುವರೆಗೆ “ಒಳ್ಳೇ ಹುಡುಗ ಪ್ರಥಮ್‌’ ಎಂದೇ ಕರೆದುಕೊಳ್ಳುತ್ತಿದ್ದರು.

“ನಟ ಭಯಂಕರ’ ಶೀರ್ಷಿಕೆಯ ಪೋಸ್ಟರ್‌ನಲ್ಲಿ “ಒಳ್ಳೇ ಹುಡುಗ ಪ್ರಥಮ್‌’ ಬದಲಾಗಿ, “ಒಳ್ಳೇ ಹುಡುಗ ಯರ್ರಾಬಿರ್ರಿ ಸ್ಟಾರ್‌ ಪ್ರಥಮ್‌’ ಎಂಬ ಪದವೂ ಸೇರಿಕೊಂಡಿದೆ. ಇದು ಅವರಾಗಿಯೇ ಇಟ್ಟುಕೊಂಡಿರುವ ಬಿರುದೋ, ಅಥವಾ ಅಭಿಮಾನಿಗಳು ಕೊಟ್ಟಿಧ್ದೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. “ನಟ ಭಯಂಕರ’ ಎಂಬ ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಮನರಂಜನೆ ಸಿನಿಮಾ.

ಇಲ್ಲಿ ಪ್ರಥಮ್‌ ನಿರ್ದೇಶನವನ್ನಷ್ಟೇ ಮಾಡುತ್ತಾರೋ, ಕ್ಯಾಮೆರಾ ಮುಂದೆ ನಿಂತು ನಟನೆಯನ್ನೂ ಮಾಡುತ್ತಾರೋ ಎಂಬುದಕ್ಕೆ ಉತ್ತರವಿಲ್ಲ. ಚಿತ್ರದ ಪೋಸ್ಟರ್‌ನಲ್ಲೊಂದು ಹಳೆಯ ಕಾರೊಂದು ಬಿಟ್ಟರೆ, ತಂತ್ರಜ್ಞರ ಹೆಸರುಗಳಿವೆಯಷ್ಟೇ. ಎಲ್ಲವನ್ನೂ ಗೌಪ್ಯವಾಗಿರುವ ಪ್ರಥಮ್‌, ಚಿತ್ರವನ್ನು ಯಾವಾಗ ಶುರು ಮಾಡುತ್ತಾರೆ ಎಂಬುದೂ ಸಹ ಸಸ್ಪೆನ್ಸ್‌. ಈ ಚಿತ್ರಕ್ಕೆ ಪ್ರದ್ಯೋತನ್‌ ಸಂಗೀತ ನೀಡುತ್ತಿದ್ದಾರೆ.

ರವಿವರ್ಮ ಮತ್ತು ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ನಾಗತಿಹಳ್ಳಿ ಚಂದ್ರಶೇಖರ್‌, ನಾಗೇಂದ್ರಪ್ರಸಾದ್‌, ಬಹದ್ದೂರ್‌ ಚೇತನ್‌, ಅರಸು ಅಂತಾರೆ ಅವರ ಸಾಹಿತ್ಯವಿದೆ. “ಬಿಲ್ಡಪ್‌’ ಚಿತ್ರ ಸೂಪರ್‌ಸ್ಟಾರ್‌ ಮತ್ತು ಕುರುಡು ದೆವ್ವದ ಕಥೆ ಹೊಂದಿದ್ದು, ಆ ಚಿತ್ರದಲ್ಲಿ ವಿಶೇಷ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಲಿದೆ ಎಂಬುದಾಗಿಯೂ ಹೇಳಿದ್ದರು. ಚಿತ್ರಕ್ಕೆ “ಬಿಲ್ಡಪ್‌’ ಶೀರ್ಷಿಕೆ ಹೊರತಾಗಿ ಬೇರೇನೂ ಪಕ್ಕಾ ಆಗಿಲ್ಲ.

ಚಿತ್ರದ ನಾಯಕಿ ಯಾರು, ತಂತ್ರಜ್ಞರು ಯಾರು, ಯಾರೆಲ್ಲ ಇರುತ್ತಾರೆ, ಯಾವಾಗ ಚಿತ್ರೀಕರಣ ಶುರು ಇತ್ಯಾದಿ ಪ್ರಶ್ನೆಗಳಿಗೆ ಈಗ ಉತ್ತರವಿಲ್ಲ ಎಂದಿದ್ದರು ಪ್ರಥಮ್‌. ಈ ಮಧ್ಯೆ ಅವರು “ಎಂಎಲ್‌ಎ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅದು ಮುಗಿಯುವ ಹಂತದಲ್ಲಿದೆ. ಮೊದಲ ನಿರ್ದೇಶನದ ಚಿತ್ರ ತಡವಾಗಿದ್ದು ಯಾಕೆ ಎಂಬ ಪ್ರಶ್ನೆಗೆ “ನನ್ನ ಡೇಟ್ಸೆ ಇಲ್ಲ’ ಎಂದಿದ್ದರು ಪ್ರಥಮ್‌. ಆದರೆ, ಅಷ್ಟೊಂದು ಬಿಜಿ ನಡುವೆ “ಬಿಲ್ಡಪ್‌’ ಚಿತ್ರ ನಿರ್ದೇಶನಕ್ಕೆ ಅಣಿಯಾಗಿ, ಈಗ “ನಟ ಭಯಂಕರ’ ನಿರ್ದೇಶನಕ್ಕೂ ರೆಡಿಯಾಗಿದ್ದಾರೆ.

ಟಾಪ್ ನ್ಯೂಸ್

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.