ಭಯಂಕರ ನಟ ಪ್ರಥಮ್ನ ಮತ್ತೊಂದು ಚಿತ್ರ
Team Udayavani, Apr 16, 2018, 11:51 AM IST
ಬಿಗ್ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ “ದೇವ್ರಂಥ ಮನುಷ್ಯ’ ಚಿತ್ರ ಬಿಡುಗಡೆಯಾಗಿದ್ದಷ್ಟೇ ಗೊತ್ತು. ಆಮೇಲೆ ಪ್ರಥಮ್ ಸುದ್ದಿಯೇ ಇರಲಿಲ್ಲ. ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೊಂದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ ಪ್ರಥಮ್. ಅವರ ಚೊಚ್ಚಲ ನಿರ್ದೇಶನದ “ದೇವ್ರೌನೆ ಬುಡುಗುರು’ ಚಿತ್ರ ಇನ್ನೂ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಅದರ ಬೆನ್ನ ಹಿಂದೆಯೇ ಅವರು “ಬಿಲ್ಡಪ್’ ಎಂಬ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು.
ಆ ಚಿತ್ರದ ಶೀರ್ಷಿಕೆಗೆ “ಇವನದು ಬರೀ ಇದೇ ಆಯ್ತು ಗುರು’ ಎಂಬ ಅಡಿಬರಹವೂ ಇತ್ತು. “ಬಿಲ್ಡಪ್’ ಚಿತ್ರದ ಕುರಿತು ಸಾಕಷ್ಟು ಬಿಲ್ಡಪ್ ಕೂಡ ಕೊಟ್ಟಿದ್ದರು. ಆದರೆ, ಅದರ “ಕಥೆ’ ಏನಾಯ್ತು ಅನ್ನೋದು ಅವರಿಗಷ್ಟೇ ಗೊತ್ತು. ಆಗಲೇ ಅವರು ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಹೊಸ ಚಿತ್ರಕ್ಕೆ “ನಟ ಭಯಂಕರ’ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದು ವಿಶೇಷ.
ಈಗಾಗಲೇ ಚಿತ್ರದ ಶೀರ್ಷಿಕೆವುಳ್ಳ ಪೋಸ್ಟರ್ವೊಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ, ಕಥೆಯ ತಿರುಳು ಏನು ಇತ್ಯಾದಿ ಕುರಿತು ಗುಟ್ಟು ರಟ್ಟು ಮಾಡಿಲ್ಲ. ಈ ಚಿತ್ರವನ್ನು ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಥಮ್ ಈಗ ತಮ್ಮ ಹೆಸರ ಮುಂದೆ ಮತ್ತೊಂದು ಬಿರುದೂ ಸೇರಿಕೊಂಡಿದ್ದಾರೆ. ಇದುವರೆಗೆ “ಒಳ್ಳೇ ಹುಡುಗ ಪ್ರಥಮ್’ ಎಂದೇ ಕರೆದುಕೊಳ್ಳುತ್ತಿದ್ದರು.
“ನಟ ಭಯಂಕರ’ ಶೀರ್ಷಿಕೆಯ ಪೋಸ್ಟರ್ನಲ್ಲಿ “ಒಳ್ಳೇ ಹುಡುಗ ಪ್ರಥಮ್’ ಬದಲಾಗಿ, “ಒಳ್ಳೇ ಹುಡುಗ ಯರ್ರಾಬಿರ್ರಿ ಸ್ಟಾರ್ ಪ್ರಥಮ್’ ಎಂಬ ಪದವೂ ಸೇರಿಕೊಂಡಿದೆ. ಇದು ಅವರಾಗಿಯೇ ಇಟ್ಟುಕೊಂಡಿರುವ ಬಿರುದೋ, ಅಥವಾ ಅಭಿಮಾನಿಗಳು ಕೊಟ್ಟಿಧ್ದೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. “ನಟ ಭಯಂಕರ’ ಎಂಬ ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಮನರಂಜನೆ ಸಿನಿಮಾ.
ಇಲ್ಲಿ ಪ್ರಥಮ್ ನಿರ್ದೇಶನವನ್ನಷ್ಟೇ ಮಾಡುತ್ತಾರೋ, ಕ್ಯಾಮೆರಾ ಮುಂದೆ ನಿಂತು ನಟನೆಯನ್ನೂ ಮಾಡುತ್ತಾರೋ ಎಂಬುದಕ್ಕೆ ಉತ್ತರವಿಲ್ಲ. ಚಿತ್ರದ ಪೋಸ್ಟರ್ನಲ್ಲೊಂದು ಹಳೆಯ ಕಾರೊಂದು ಬಿಟ್ಟರೆ, ತಂತ್ರಜ್ಞರ ಹೆಸರುಗಳಿವೆಯಷ್ಟೇ. ಎಲ್ಲವನ್ನೂ ಗೌಪ್ಯವಾಗಿರುವ ಪ್ರಥಮ್, ಚಿತ್ರವನ್ನು ಯಾವಾಗ ಶುರು ಮಾಡುತ್ತಾರೆ ಎಂಬುದೂ ಸಹ ಸಸ್ಪೆನ್ಸ್. ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡುತ್ತಿದ್ದಾರೆ.
ರವಿವರ್ಮ ಮತ್ತು ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ನಾಗತಿಹಳ್ಳಿ ಚಂದ್ರಶೇಖರ್, ನಾಗೇಂದ್ರಪ್ರಸಾದ್, ಬಹದ್ದೂರ್ ಚೇತನ್, ಅರಸು ಅಂತಾರೆ ಅವರ ಸಾಹಿತ್ಯವಿದೆ. “ಬಿಲ್ಡಪ್’ ಚಿತ್ರ ಸೂಪರ್ಸ್ಟಾರ್ ಮತ್ತು ಕುರುಡು ದೆವ್ವದ ಕಥೆ ಹೊಂದಿದ್ದು, ಆ ಚಿತ್ರದಲ್ಲಿ ವಿಶೇಷ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಲಿದೆ ಎಂಬುದಾಗಿಯೂ ಹೇಳಿದ್ದರು. ಚಿತ್ರಕ್ಕೆ “ಬಿಲ್ಡಪ್’ ಶೀರ್ಷಿಕೆ ಹೊರತಾಗಿ ಬೇರೇನೂ ಪಕ್ಕಾ ಆಗಿಲ್ಲ.
ಚಿತ್ರದ ನಾಯಕಿ ಯಾರು, ತಂತ್ರಜ್ಞರು ಯಾರು, ಯಾರೆಲ್ಲ ಇರುತ್ತಾರೆ, ಯಾವಾಗ ಚಿತ್ರೀಕರಣ ಶುರು ಇತ್ಯಾದಿ ಪ್ರಶ್ನೆಗಳಿಗೆ ಈಗ ಉತ್ತರವಿಲ್ಲ ಎಂದಿದ್ದರು ಪ್ರಥಮ್. ಈ ಮಧ್ಯೆ ಅವರು “ಎಂಎಲ್ಎ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅದು ಮುಗಿಯುವ ಹಂತದಲ್ಲಿದೆ. ಮೊದಲ ನಿರ್ದೇಶನದ ಚಿತ್ರ ತಡವಾಗಿದ್ದು ಯಾಕೆ ಎಂಬ ಪ್ರಶ್ನೆಗೆ “ನನ್ನ ಡೇಟ್ಸೆ ಇಲ್ಲ’ ಎಂದಿದ್ದರು ಪ್ರಥಮ್. ಆದರೆ, ಅಷ್ಟೊಂದು ಬಿಜಿ ನಡುವೆ “ಬಿಲ್ಡಪ್’ ಚಿತ್ರ ನಿರ್ದೇಶನಕ್ಕೆ ಅಣಿಯಾಗಿ, ಈಗ “ನಟ ಭಯಂಕರ’ ನಿರ್ದೇಶನಕ್ಕೂ ರೆಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Kannada Cinema: ತೆರೆಗೆ ಬಂತು ಯುವ, ತಾರಿಣಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?