ಶರಣ್ ಈಗ ಲೇಡೀಸ್ ಟೈಲರ್
Team Udayavani, Apr 18, 2018, 10:59 AM IST
ವಿಜಯಪ್ರಸಾದ್ ನಿರ್ದೇಶಿಸಬೇಕಿದ್ದ “ಲೇಡೀಸ್ ಟೈಲರ್’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್ ಟೈಲರ್’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್ ಗೌಡ ಮತ್ತು ಶ್ರುತಿ ಹರಿಹರನ್ ಅಭಿನಯದಲ್ಲಿ “ಲೇಡೀಸ್ ಟೈಲರ್’ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್ ಗೌಡ ಬದಲು ಶರಣ್ ಈ ಚಿತ್ರದಲ್ಲಿ “ಲೇಡೀಸ್ ಟೈಲರ್’ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರವಿಶಂಕರ್ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಶರಣ್ ಅಭಿನಯದಲ್ಲಿ ಚಿತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಹುಶಃ ಒಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.
ಏಕೆಂದರೆ, ಒಂದೇ ಚಿತ್ರದಿಂದ ನಾಯಕನನ್ನು ಎರಡೆರೆಡು ಬಾರಿ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, “ಲೇಡೀಸ್ ಟೈಲರ್’ ಎಂಬ ಚಿತ್ರವಾಗುತ್ತದೆ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್ ಗೌಡ. ಆದರೆ, ಕೆಲವು ದಿನಗಳ ನಂತರ ರವಿಶಂಕರ್ ಬದಲು ಸತೀಶ್ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು.
ಅದಾದ ಕೆಲವು ದಿನಗಳಿಗೆ, ಸತೀಶ್ ಜಾಗಕ್ಕೆ ಜಗ್ಗೇಶ್ ಬಂದಿದ್ದಾರೆ ಎಂದು ಸುದ್ದಿಯಾಯ್ತು. ಅದಾದ ಕೆಲವು ದಿನಗಳಿಗೆ ಚಿತ್ರ ನಿಂತು ಹೋದ ಸುದ್ದಿ ಬಂತು. ಇನ್ನು “ಲೇಡೀಸ್ ಟೈಲರ್’ ಚಿತ್ರ ಆಗುವುದಿಲ್ಲ ಎಂದು ಎಲ್ಲರೂ ನಂಬಿರುವಾಗಲೇ, ಮತ್ತೆ ರವಿಶಂಕರ್ ಅಭಿನಯದಲ್ಲಿ ಚಿತ್ರವನ್ನು ಶುರು ಮಾಡುತ್ತಿರುವ ಸುದ್ದಿಯಾಯ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬರದ ಕಾರಣ, ಯಾರೂ ಆ ಚಿತ್ರದ ಬಗ್ಗೆ ಗಮನಹರಿಸುವುದಕ್ಕೆ ಹೋಗಿರಲಿಲ್ಲ.
ಹೀಗಿರುವಾಗಲೇ, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಮತ್ತು ರವಿಶಂಕರ್ ಗೌಡ ಬದಲು ಶರಣ್ ಆ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ರವಿಶಂಕರ್ ಗೌಡ ಹೊರಹೋಗುತ್ತಿರುವುದಕ್ಕೆ ನಿಖರವಾದ ಕಾರಣವಿಲ್ಲದಿದ್ದರೂ, ಚಿತ್ರಕ್ಕೆ ಮೂರ್ನಾಲ್ಕು ಕೋಟಿ ಬಜೆಟ್ ಆಗುತ್ತಿರುವುದರಿಂದ, ಅವರ ಬದಲು ಸ್ವಲ್ಪ ಸ್ಟಾರ್ಗಿರಿ ಇರುವ ನಟರನ್ನು ಹಾಕಿಕೊಂಡರೆ ಅನುಕೂಲವಾಗುತ್ತದಂತೆ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿತಂತೆ.
ಅದೇ ಕಾರಣಕ್ಕೆ ರವಿಶಂಕರ್ ಗೌಡ ಬದಲು ಶರಣ್ ಚಿತ್ರಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಇದೆ. ಇನ್ನು ಚಿತ್ರ ಯಾವಾಗ ಶುರುವಾಗಲಿದೆ ಮತ್ತು ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ