ಧಾರಾವಾಹಿಯಲ್ಲೇ ಜನಪ್ರಿಯತೆ ಹೆಚ್ಚು


Team Udayavani, Apr 18, 2018, 10:59 AM IST

Kavya-Gowda-(4)-1.jpg

ಈಗಾಗಲೇ ಕಿರುತೆರೆಯ ಬಹಳಷ್ಟು ನಟಿಯರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಆ ಪೈಕಿ ಕೆಲವರು ಗೆಲುವು ಕಂಡಿರುವುದುಂಟು. ಇನ್ನು ಕೆಲವರು ಪುನಃ ಕಿರುತೆರೆಯತ್ತ ಮುಖ ಮಾಡಿರುವುದೂ ಉಂಟು. ಬೆರಳೆಣಿಕೆಯಷ್ಟು ನಟಿಯರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಲೇ ತಮ್ಮ ಕಲಾ ಬದುಕು ಕಟ್ಟಿಕೊಳ್ಳುವ ಯತ್ನದಲ್ಲಿದ್ದಾರೆ. ಈಗ “ಗಾಂಧಾರಿ’ ಧಾರಾವಾಹಿಯ ನಾಯಕಿ ಕಾವ್ಯ ಗೌಡ ಕೂಡ ಸಿನಿಮಾಗೆ ಬಂದಿದ್ದಾರೆ. ಅವರು “ಬಕಾಸುರ’ ಚಿತ್ರದಲ್ಲಿ ನಟಿಸಿದ್ದೂ ಆಗಿದೆ. ಮುಂದಿನ ವಾರ ತೆರೆಗೆ ಬರಲಿರುವ ತಮ್ಮ ಚೊಚ್ಚಲ ಚಿತ್ರ “ಬಕಾಸುರ’ ಕುರಿತು ಕಾವ್ಯ ಗೌಡ, “ಉದಯವಾಣಿ’ಯ “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

* ಮೊದಲ ಚಿತ್ರದ ಅನುಭವ ಹೇಗಿತ್ತು?
“ಬಕಾಸುರ’ ನನ್ನ ಅಭಿನಯದ ಮೊದಲ ಚಿತ್ರ. ಅದೊಂದು ಒಳ್ಳೆಯ ಅವಕಾಶ. ನಟನೆ ಅನ್ನುವುದು ನಿತ್ಯದ ಕಾಯಕ. ಅದರ ಕಲಿಕೆ ನಿರಂತರ. ಧಾರಾವಾಹಿ ಮತ್ತು ಸಿನಿಮಾ ನಡುವೆ ನನಗೆ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಯಾಕೆಂದರೆ, ಧಾರಾವಾಹಿಯಲ್ಲಿ ದಿನಕ್ಕೆ ಹತ್ತರಿಂದ ಹದಿನೈದು ಸೀನ್‌ಗಳನ್ನು ಚಿತ್ರೀಕರಿಸಲಾಗುತ್ತದೆ. ಆದರೆ, ಸಿನಿಮಾ ಹಾಗಲ್ಲ, ಎರಡು ಅಥವಾ ಮೂರು ಸೀನ್‌ ತೆಗೆದರೆ ಅದೇ ಹೆಚ್ಚು. ಸಿನಿಮಾದಲ್ಲಿ ಸಾಕಷ್ಟು ಅನುಭವ ಆಗಿದೆ. ಫ್ಯಾಮಿಲಿಯೊಂದಿಗೆ ಕೆಲಸ ಮಾಡಿದ ಫೀಲ್‌ ಇತ್ತು. ಒಳ್ಳೆಯ ನಟರ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. “ಬಕಾಸುರ’ ಮೂಲಕ ಇನ್ನಷ್ಟು ಜನರಿಗೆ ಪರಿಚಿತಳಾಗುತ್ತೇನೆ. ಒಟ್ಟಾರೆ, ಒಳ್ಳೆಯ ತಂಡ, ಒಳ್ಳೆಯ ಕಥೆ, ಪಾತ್ರ “ಬಕಾಸುರ’ ಚಿತ್ರದಲ್ಲಿದೆ.

* ಇಲ್ಲಿ ನೀವು ಲಾಯರ್‌ ಅಂತೆ?
ಹೌದು, ನಾನು “ಬಕಾಸುರ’ ಚಿತ್ರದಲ್ಲಿ ಲಾಯರ್‌ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದ ಮುಖ್ಯವಾದ ಪಾತ್ರವದು. ಅದು ನನಗೆ ಚಾಲೆಂಜಿಂಗ್‌ ಪಾತ್ರ ಮತ್ತು ಹೊಸ ರೀತಿಯಾಗಿತ್ತು. ಹೈಲೆಟ್‌ ಪಾತ್ರದ ಮೂಲಕವೇ ನಾನು ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇನೆ ಎನ್ನಬಹುದು. ಚಿತ್ರದಲ್ಲಿ ಲಾಯರ್‌ ಆಗಿ ಏನೆಲ್ಲಾ ಮಾಡ್ತೀನಿ ಅನ್ನೋದು ಸಸ್ಪೆನ್ಸ್‌. ವಾದ ಮಾಡ್ತಾಳಾ, ಇಲ್ಲವೋ ಎಂಬುದನ್ನು ಚಿತ್ರದಲ್ಲೇ ಕಾಣಬೇಕು. ಅಭಿನಯಕ್ಕೆ ಇಲ್ಲಿ ಹೆಚ್ಚು ಸ್ಕೋಪ್‌ ಇದೆ.

* ಹಾಗಾದರೆ, ಚಿತ್ರದ ತುಂಬಾ ವಾದ ಮಾಡ್ತೀರಿ ಅನ್ನಿ?
ಹಾಗಂತ ಅಲ್ಲ, ಲಾಯರ್‌ ಪಾತ್ರಕ್ಕೆ ಏನೆಲ್ಲಾ ತಯಾರಿ ಬೇಕೋ ಅದನ್ನು ಮಾಡಿಕೊಂಡಿದ್ದೆ. ಇಲ್ಲಿ ವಾದ ಮಾಡುವ ದೃಶ್ಯಗಳೇನೂ ಹೆಚ್ಚಿಲ್ಲ. ಆದರೆ, ಆ ಪಾತ್ರಕ್ಕೊಂದು ವಿಶೇಷತೆ ಇದೆ. ಒಂದಂತೂ ನಿಜ, ಕಿರುತೆರೆಯಲ್ಲಿ ಎಲ್ಲರೂ ನನ್ನನ್ನು ದೃಷ್ಟಿ, ದೀಪ್ತಿ ಅಂತಾನೇ ಕರೆಯುತ್ತಾರೆ. ನಾನು ಎಲ್ಲೇ ಹೋಗಲಿ, ಆ ಹೆಸರುಗಳ  ಮೂಲಕವೇ ಗುರುತಿಸುತ್ತಾರೆ. “ಬಕಾಸುರ’ ರಿಲೀಸ್‌ ಆದ ಬಳಿಕ ಎಲ್ಲರೂ, “ಬಕಾಸುರ’ ಕಾವ್ಯಾ ಅನ್ನೋದು ಗ್ಯಾರಂಟಿ. ಅಷ್ಟರಮಟ್ಟಿಗೆ ಪಾತ್ರ ಗಮನಸೆಳೆಯುತ್ತೆ.

* ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದು ಕಷ್ಟ ಆಯ್ತಾ?
ಹೇಳಿಕೊಳ್ಳುವಂತಹ ಕಷ್ಟವೇನೂ ಆಗಲಿಲ್ಲ. ಯಾಕೆಂದರೆ, ಕಥೆ ಮತ್ತು ಪಾತ್ರದ ಬಗ್ಗೆ ತಿಳಿದುಕೊಂಡಾಗಲೇ, ಮನಸ್ಸಲ್ಲೊಂದು ಪಾತ್ರದ ಕಲ್ಪನೆ ಓಡುತ್ತಿತ್ತು. ಮೊದಲೇ ಸಂಭಾಷಣೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಿದ್ದೆ. ಸೆಟ್‌ನಲ್ಲಿ, ರೋಹಿತ್‌ ಜೊತೆಗೆ ಚರ್ಚಿಸಿ, ಸೀನ್‌ ಹೇಗೆಲ್ಲಾ ಮಾಡಬಹುದು, ಡೈಲಾಗ್‌ ಹೇಗೆ ಹೇಳಬೆಕು, ಎಕ್ಸ್‌ಪ್ರೆಷನ್‌ ಹೇಗಿರಬೇಕು ಎಂಬಿತ್ಯಾದಿ ಬಗ್ಗೆ ಚರ್ಚಿಸಿದ ನಂತರವೇ, ನಾವು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೆವು. ಹಾಗಾಗಿ, ಯಾವುದೂ ಕಷ್ಟ ಆಗಲಿಲ್ಲ.

* ಎಲ್ಲಾ ಸರಿ ಬಕಾಸುರ ಯಾರು?
ಹ್ಹಹ್ಹಹ್ಹಾ… ಅದೇ ಚಿತ್ರದ ಸಸ್ಪೆನ್ಸ್‌. ರವಿಚಂದ್ರನ್‌ ಸರ್‌ ಇದ್ದಾರೆ. ರೋಹಿತ್‌ ಕೂಡ ಇದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ. ಯಾರು ಹೇಗೆ ಇರುತ್ತಾರೆ ಎಂಬುದನ್ನು ಹೇಳುವುದಕ್ಕಾಗುವುದಿಲ್ಲ. “ಬಕಾಸುರ’ ಯಾರೆಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಸಿಗುತ್ತೆ.

* ರವಿಚಂದ್ರನ್‌ ಜೊತೆಗೆ ನಟಿಸಿದ ಅನುಭವ ಹೇಗಿತ್ತು?
ನನಗೆ ರವಿ ಸರ್‌ ಕಾಂಬಿನೇಷನ್‌ ಇರಲಿಲ್ಲ. ಆದರೆ, ಅವರ ಚಿತ್ರದಲ್ಲಿ ನಾನಿದ್ದೇನೆ ಎಂಬ ಖುಷಿ ಇದೆ. ಉಳಿದಂತೆ ದೊಡ್ಡ ತಾರಾಬಳಗದ ಜತೆ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ.

* ಸಿನಿಮಾ ದೊಡ್ಡ ಕ್ಯಾನ್ವಾಸ್‌ ಆಗಿರುವುದರಿಂದ ಹೆಚ್ಚು ಜನಪ್ರಿಯತೆ ಸಿಗುತ್ತದೆ ಎಂದನಿಸುತ್ತದಾ?
ಸಿನಿಮಾಗಿಂತ ಸೀರಿಯಲ್ಸ್‌ನಲ್ಲೇ ಪಾಪ್ಯುಲಾರಿಟಿ ಹೆಚ್ಚು. ಸಿನಿಮಾ ಕ್ಲಿಕ್‌ ಆದಲ್ಲಿ ಮಾತ್ರ ಸ್ಟಾರ್‌ ಪಟ್ಟ. ಇಲ್ಲವಾದರೆ ಇಲ್ಲ. ಆದರೆ, ಸೀರಿಯಲ್‌ ಮನೆಮನಕ್ಕೂ ತಲುಪುತ್ತೆ. ಹಾಗಾಗಿ, ಜನರ ಜೊತೆ ನಿತ್ಯವೂ ಒಡನಾಟ ಇರುವುದು ಕಿರುತೆರೆ ಮಾತ್ರ. ಕಿರುತೆರೆಯೇ ನನಗೆ ಹೆಚ್ಚು ಪಾಪ್ಯುಲಾರಿಟಿ ತಂದುಕೊಟ್ಟಿದೆ. ಸಿನಿಮಾ ಮುಂದೆ ಹೇಗೋ ಗೊತ್ತಿಲ್ಲ. 

* ಮುಂದೆ ಯಾವ ಚಿತ್ರ ಒಪ್ಪಿದ್ದೀರಿ?
ಒಂದಷ್ಟು ಅವಕಾಶಗಳು ಬರುತ್ತಿವೆ. ಆದರೆ, ಯಾವುದನ್ನೂ ಒಪ್ಪಿಲ್ಲ. “ಬಕಾಸುರ’ ಬಿಡುಗಡೆ ಬಳಿಕ ಯೋಚಿಸುತ್ತೇನೆ.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.