ಪೈಲ್ವಾನ್ ಜೊತೆ ಆಕಾಂಕ್ಷಾ ಸಿಂಗ್
Team Udayavani, May 15, 2018, 11:14 AM IST
ಸುದೀಪ್ ನಾಯಕರಾಗಿರುವ “ಪೈಲ್ವಾನ್’ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ? ಈ ಕುತೂಹಲ ಸುದೀಪ್ ಅವರ ಅಭಿಮಾನಿಗಳಿಂದ ಹಿಡಿದು ಸಿನಿಪ್ರೇಮಿಗಳವರೆಗೆ ಇತ್ತು. ಈ ನಡುವೆಯೇ ಅಲ್ಲಲ್ಲಿ ಕೆಲವು ನಾಯಕಿಯರ ಹೆಸರುಗಳು ಕೇಳಿಬಂದುವು. ಈಗ ಅಂತಿಮವಾಗಿ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಹಾಗಂತ ಕನ್ನಡದ ಹುಡುಗಿಯಲ್ಲ, ಮುಂಬೈ ಬೆಡಗಿ.
ಹೌದು, ಮುಂಬೈ ಮೂಲದ ಆಕಾಂಕ್ಷಾ ಸಿಂಗ್ “ಪೈಲ್ವಾನ್’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈ ಮೂಲಕ ಮುಂಬೈ ಮೂಲದ ಮತ್ತೂಬ್ಬ ನಾಯಕಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತಾಗಿದೆ. ಎಲ್ಲಾ ಓಕೆ, ಈ ಆಕಾಂಕ್ಷಾ ಯಾರು, ಅವರ ಹಿನ್ನೆಲೆಯೇನು ಎಂದು ನೀವು ಕೇಳಿದರೆ, ಅವರ ಕಿರುತೆರೆ ಜರ್ನಿಯಿಂದಲೇ ಹೇಳಬೇಕಾಗುತ್ತದೆ. ಹಿಂದಿ ಕಿರುತೆರೆಯಲ್ಲಿ ಪ್ರಸಾರವಾದ “ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ’ದ ಎರಡೂ ಸರಣಿಗಳಲ್ಲೂ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ.
ಇದಲ್ಲದೇ, “ಸಾವ್ಧಾನ್ ಇಂಡಿಯಾ’, “ಗುಲ್ಮೋಹರ್ ಗ್ರ್ಯಾಂಡ್’ನಲ್ಲೂ ಆಕಾಂಕ್ಷಾ ಪ್ರಧಾನ ಪಾತ್ರ ಮಾಡಿದ್ದಾರೆ. ಆಕಾಂಕ್ಷಾ ಜರ್ನಿ ಕೇವಲ ಕಿರುತೆರೆಗೆ ಮುಗಿದು ಹೋಗಿಲ್ಲ. ಎಲ್ಲಾ ನಟಿಯರಂತೆ ಆಕಾಂಕ್ಷಾ ಕೂಡಾ ಕಿರುತೆರೆಯಿಂದ ಹಿರಿತೆರೆಗೆ ಜಂಪ್ ಮಾಡಿದ್ದಾರೆ. ಹಿಂದಿಯ “ಬದ್ರಿನಾಥ್ ಕೀ ದುಲ್ಹನಿಯಾ’ ಹಾಗೂ ತೆಲುಗಿನ “ಮಳ್ಳಿ ರಾವ’ ಸಿನಿಮಾದಲ್ಲಿ ಆಕಾಂಕ್ಷಾ ನಟಿಸಿದ್ದಾರೆ. ಸದ್ಯ ಆಕಾಂಕ್ಷಾ ನಾಗಾರ್ಜುನ ಹಾಗೂ ನಾನಿ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಚಿತ್ರವೊಂದರಲ್ಲೂ ಆಕಾಂಕ್ಷಾ ಸಿಂಗ್ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಕೂಡಾ ನಟಿಸುತ್ತಿದ್ದು, ಆಕಾಂಕ್ಷಾ, ನಾಗಾರ್ಜುನ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಆಕಾಂಕ್ಷಾಗೆ ಅವಕಾಶ ಸಿಕ್ಕಿದೆ. ಮೊದಲ ಸಿನಿಮಾವೇ ಕನ್ನಡದ ಸ್ಟಾರ್ ನಟನ ಜೊತೆ ಸಿಕ್ಕಿರುವುದರಿಂದ ಆಕಾಂಕ್ಷಾ ಕೂಡಾ ಎಕ್ಸೆ„ಟ್ ಆಗಿದ್ದಾರೆ. “ನನ್ನ ಮೊದಲ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಈ ಸಿನಿಮಾ ಬಗ್ಗೆ ಎಕ್ಸೆ„ಟ್ ಆಗಿದ್ದೇನೆ’ ಎಂದ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, “ಪೈಲ್ವಾನ್’ ಚಿತ್ರವನ್ನು ಕೃಷ್ಣ ಅವರು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಹೆಬ್ಬುಲಿ’ ಚಿತ್ರ ಮಾಡಿದ ಕೃಷ್ಣ ಈಗ ಸುದೀಪ್ ಅವರೊಂದಿಗೆ ಎರಡನೇ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಬೀರ್ ಸಿಂಗ್ ದುಹಾನ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರು ಕೂಡಾ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೂಬ್ಬ ದೊಡ್ಡ ಕಲಾವಿದ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಮೇ 17 ರಿಂದ ಚಿತ್ರೀಕರಣ ಚೆನ್ನೈನಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Shotgun ಶೂಟಿಂಗ್ ಅರ್ಹತಾ ಸುತ್ತಿನಲ್ಲಿ ಕರಣ್: ವಿವಾದ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು